ಪಿಸ್ತೂಲ್‌ ಮಾರಾಟ: ಕಿಂಗ್‌ಪಿನ್‌ ಸೆರೆ

ಎರಡುಕಂಟ್ರಿಮೇಡ್‌ ಗನ್‌, ಮೂರು ಪಿಸ್ತೂಲ್‌, 2 ರೈಫ‌ಲ್‌, 19 ಸಜೀವ ಗುಂಡುಗ ‌ಳು ವಶ

Team Udayavani, Aug 8, 2021, 2:34 PM IST

ಪಿಸ್ತೂಲ್‌ ಮಾರಾಟ: ಕಿಂಗ್‌ಪಿನ್‌ ಸೆರೆ

ಸಾಂರ್ದಭಿಕ ಚಿತ್ರ

ಬೆಂಗಳೂರು: ನೆರೆ ರಾಜ್ಯಗಳಿಂದ ಕಂಟ್ರಿಮೆಡ್‌ ಪಿಸ್ತೂಲ್‌, ರೈಫ‌ಲ್‌ಗ‌ಳನ್ನು ತಂದು ಬೆಂಗಳೂರಿನ ರೌಡಿಶೀಟರ್‌ಗಳು ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಕಲಾಸಿಪಾಳ್ಯ ನಿವಾಸಿ, ಪ್ರಕರಣದ ಕಿಂಗ್‌ಪಿನ್‌ ಅಯಾಜ್‌ ವುಲ್ಲಾ(30), ಆರ್‌.ಟಿ. ನಗರದ ಸೈಯ್ಯದ್‌ ಸಿರಾಜ್‌ ಅಹಮ್ಮದ್‌ (42), ಆರ್‌.ಕೆ.ಹೆಗಡೆ ನಗರದ ಮೊಹಮದ್‌ ಅಲಿ (32), ರಾಜಾನು ಕುಂಟೆ ನಿವಾಸಿ ಅರುಣ್‌ ಕುಮಾರ್‌ (26) ಬಂಧಿತರು. ಅವರಿಂದ ಎರಡು ಕಂಟ್ರಿಮೇಡ್‌ ಗನ್‌, 3 ಕಂಟ್ರಿಮೇಡ್‌ ಪಿಸ್ತೂಲ್‌, 2 ರೈಫಲ್‌, 19 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರು.

ಈ ಹಿಂದೆ ನಗರದಲ್ಲಿ ರೌಡಿಶೀಟರ್‌ಗಳಿಗೆ ಅಕ್ರಮವಾಗಿ ಕಂಟ್ರಿಮೇಡ್‌ ಪಿಸ್ತೂಲ್‌, ಗನ್‌ಗಳ ಮಾರಾಟ ಪ್ರಕರಣಗಳ ಬಗ್ಗೆ ಸಿಸಿಬಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಅಯಾಜ್‌ ವುಲ್ಲಾ ಬಗ್ಗೆ ಮಾಹಿತಿ ಪಡೆದು ಆತನ  ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು. ಈತ ನೆರೆ ರಾಜ್ಯಗಳಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.ಈಸಂಬಂಧ ಇನ್‌ಸ್ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ‌ ಮಹಿಳಾ ಸಂರಕ್ಷಣಾ ದಳದ ತಂಡ ಎಲ್ಲಿಂದ ಪೂರೈಕೆ ಯಾಗುತ್ತಿದ್ದ ಎಂಬ ಮಾಹಿತಿ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಾಗಿ ಶೋಧ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಮಾಹಿತಿ ನೀಡಿದರು.

ಪ್ರಕರಣದ ಕಿಂಗ್‌ಪಿನ್‌ ಅಯಾಜ್‌ವುಲ್ಲಾ ತನ್ನಜಾಲವನ್ನು ಉತ್ತರ ಪ್ರದೇಶ, ಶಾಮಲಿ, ಪಂಜಾಬ್‌ ನ ಅಮೃತಸರ, ಮಹಾರಾಷ್ಟ್ರದ ಶಿರಡಿಯಲ್ಲಿ ತನ್ನ ವಿಸ್ತರಿಸಿಕೊಂಡಿದ್ದು, ಕಡಿಮೆ ಮೊತ್ತಕ್ಕೆ ಕಂಟ್ರಿಮೆಡ್‌ ಪಿಸ್ತೂಲ್‌, ಗನ್‌, ರೈಫ‌ಲ್‌ಗ‌ಳನ್ನು ಖರೀದಿಸಿ ರೈಲು, ಬಸ್‌ಗಳ ಮೂಲಕ ತರುತ್ತಿದ್ದ. ಅವುಗಳನ್ನು ಇತರೆ ಆರೋಪಿಗಳಿಗೆ ಕೊಟ್ಟು ರೌಡಿಗಳು, ಅಕ್ರಮ ಚಟುವಟಿಕೆನಡೆಸುವವರಿಗೆ ಲಕ್ಷಾಂತರರೂ.ಗೆ ಮಾರಾಟ
ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.

ಈತನ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಡಕಾಯಿತಿ ಹಾಗೂ ನಗರದ ಇತರೆ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಈತ ನೆರೆ
ರಾಜ್ಯಗಳಿಂದ ಶಸ್ತ್ರಾಸ್ತ್ರಗಳನ್ನು ತಂದು ಇತರೆ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದ. ಸೈಯದ್‌ ಸಿರಾಜ್‌ ಅಹಮ್ಮದ್‌ ವಿರುದ್ಧ ಕೆ.ಜಿ.ಹಳ್ಳಿ ಠಾಣೆ ಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅಯಾಜ್‌ ವುಲ್ಲಾನಿಂದ 1 ಕಂಟ್ರಿಮೇಡ್‌ ಪಿಸ್ತೂಲ್‌ ಹಾಗೂ 1 ಕಂಟ್ರಿ ಮೇಡ್‌ ರೈಫೈಲ್‌ನ್ನು ಖರೀದಿಸಿದ್ದ. ಮತ್ತೂಬ್ಬ ಆರೋಪಿ ಮೊಹಮ್ಮದ್‌ ಅಲಿ ವಿರುದ್ಧ ಶಿವಾಜಿನಗರ ಠಾಣೆ ರೌಡಿಶೀಟರ್‌ ಆಗಿದ್ದು, ಈತ ಅಯಾಜ್‌ನಿಂದ 1 ಕಂಟ್ರಿಮೇಡ್‌ ಪಿಸ್ತೂಲ್‌, ರೈಫ‌ಲ್‌ಖರೀದಿಸಿದ್ದಾನೆ.

ಅರುಣ್‌ ಕುಮಾರ್‌ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ. ಈತ ಅಯಾಜ್‌ನಿಂದ ತನ್ನ ಏರಿಯಾದಲ್ಲಿನ ಜನರಿಗೆ
ಹೆದರಿಸುವ ಸಲುವಾಗಿ ಒಂದುಕಂಟ್ರಿಮೆಡ್‌ ಗನ್‌ನ್ನು ಖರೀದಿಸಿದ್ದ ಎಂದು ಪೊಲೀಸರು ಹೇಳಿದರ

ಮೂವರು ಸಹೋದರರಿಂದ ದಂಧೆ!
ಅಯಾಜ್‌ವುಲ್ಲಾ ನೆರೆ ರಾಜ್ಯಗಳಿಂದ ತರುತ್ತಿದ್ದಕಂಟ್ರಿಮೇಡ್‌ ಪಿಸ್ತೂಲ್‌, ಗನ್‌, ರೈಫ‌ಲ್‌ಗ‌ಳನ್ನು ನಗರದ ರೌಡಿಗಳಿಗೆ ಒಂದು ಲಕ್ಷದಿಂದ ಮೂರು ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ, ಈ ಅಕ್ರಮ ಶಸ್ತ್ರಾಸ್ತ್ರ ದಂಧೆಯಲ್ಲಿ ಅಯಾಜ್‌ವುಲ್ಲಾ ಮಾತ್ರವಲ್ಲದೆ, ಆತನ ಇಬ್ಬರು ಸಹೋದರರಾದ ಫ‌ಯಾಜ್‌ವುಲ್ಲಾ ಮತ್ತು ನಯ್‌ಜ್‌ವುಲ್ಲಾಕೂಡ ಭಾಗಿಯಾಗಿದ್ದಾರೆ ಎಂಬುದು ಪತ್ತೆಯಾಗಿದೆ. ಫ‌ಯಾಜ್‌ವುಲ್ಲಾ ನೆರೆ ರಾಜ್ಯದ ಕಂಟ್ರಿಮೇಡ್‌ ಪಿಸ್ತೂಲ್‌ ಉತ್ಪಾದಕ ದಂಧೆಕೋರರ ಜತೆ ನೇರ ಸಂಪರ್ಕದಲ್ಲಿದ್ದು, ಆತನೇಕಿಂಗ್‌ಪಿನ್‌ ಆಗಿದ್ದಾನೆ. ಆತ ಸೂಚನೆ ಮೇರೆಗೆ ಅಯಾಜ್‌ ವುಲ್ಲಾ ನಗರಕ್ಕೆ ಶಸ್ತ್ರಾಸ್ತ್ರ ತಂದು ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

7-ಬನಗ

Bengaluru: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ

6-bng-crime

Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ ‌

5-bng-crime-1

Bengaluru Crime: ಮನೆ ಮಾಲಕಿಯ ಕೊಂದು ಚಿನ್ನ ದೋಚಿದಳು!

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

E-bus: ಚಾಲಕರ ಧರಣಿ: ರಸ್ತೆಗಿಳಿಯದ 113 ಇ-ಬಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.