ಉತ್ತರ ಕರ್ನಾಟಕದ ಮನೆ ಮನೆಯಲ್ಲೂ ರೊಟ್ಟಿ ಹಬ್ಬದ ಸಂಭ್ರಮ

ಕೋವಿಡ್‌ ಮಧ್ಯೆಯೂ ಹಬ್ಬದ ಸಡಗರದಲ್ಲಿ ಜನ­ಮನೆ ಮಂದಿಯಲ್ಲ ಸವಿದರು ರುಚಿಕರ ರೊಟ್ಟಿ

Team Udayavani, Aug 12, 2021, 9:20 PM IST

ftrter

ಕೊಪ್ಪಳ: ಉತ್ತರ ಕರ್ನಾಟಕದ ವಿಶೇಷ ಹಬ್ಬ ಎಂದೆನಿಸಿದ ರೊಟ್ಟಿ ಹಬ್ಬವು ಜಿಲ್ಲಾದ್ಯಂತ ಕೋವಿಡ್‌ ಮಧ್ಯೆ ಸಂಭ್ರಮದಿಂದಲೇ ಜರುಗಿತು. ನಗರ ಸೇರಿ ಗ್ರಾಮೀಣ ಪ್ರದೇಶದಲ್ಲೂ ಮನೆ ಮನೆಯಲ್ಲಿ ನಾರಿಯರು ಎಳ್ಳು ರೊಟ್ಟಿ, ಶೇಂಗಾ ಪುಡಿ, ಕಾಳು, ಬದನೆ ಪಲ್ಲೆಯೊಂದಿಗೆ ಅಕ್ಕಪಕ್ಕದ ಮನೆಯವರೊಂದಿಗೆ ರೊಟ್ಟಿಗಳ ವಿನಿಮಯ ಮಾಡಿಕೊಂಡು ರೊಟ್ಟಿ ಹಬ್ಬ ಆಚರಿಸಿದರು.

ಎರಡು ವರ್ಷಗಳಿಂದ ಇಡೀ ಜಗತ್ತಿನಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸಿ ಒಬ್ಬರ ಮನೆಗೆ ಒಬ್ಬರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬ ಹರಿದಿನಗಳ ಸಂಭ್ರಮ ಮಂಕಾಗಿದೆ. ಆದರೆ ಕೋವಿಡ್‌ ಎರಡನೇ ಅಲೆ ನಿಯಂತ್ರಣದ ಬಳಿಕ ಸರ್ಕಾರವು ಕೆಲ ವಿನಾಯತಿ ನೀಡಿದ್ದು, ಜನತೆ ಸಹಜ ಸ್ಥಿತಿಗೆ ಮರಳುವಂತೆ ಮಾಡಿದೆ. ಈ ಮಧ್ಯೆಯೂ ಕೊರೊನಾ ಮೂರನೇ ಅಲೆ ಭೀತಿ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಎರಡು ವರ್ಷಗಳಿಂದ ಹಬ್ಬದ ಸಂಭ್ರಮವನ್ನೇ ಮರೆತಿದ್ದ ಜಿಲ್ಲೆಯ ಜನರು ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದಲೇ ಆಚರಣೆ ಮಾಡಿದ್ದು ಕಂಡುಬಂತು. ಹಬ್ಬ ಬರುವ ಮೊದಲೇ ಮನೆ ಮನೆಯಲ್ಲಿನ ಮಹಿಳೆಯರು ಹದಿನೈದು ದಿನ ಮುಂಚಿತವಾಗಿ ಎಳ್ಳು ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಅರಿಶಿನ ರೊಟ್ಟಿ ಹೀಗೆ ನಾನಾ ಬಗೆಯ ರೊಟ್ಟಿಗಳನ್ನು ತಟ್ಟಿಟ್ಟುಕೊಂಡಿದ್ದರು.

ರೊಟ್ಟಿ ಹಬ್ಬದ ದಿನದಂದು ಮನೆಯಲ್ಲಿ ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ ಪಲ್ಲೆ, ಚವಳೆಕಾಯಿ ಪಲ್ಲೆ, ಹೆಸರು, ಮಡಿಕೆ, ಅಲಸಂದಿ ಕಾಳು, ಶೇಂಗಾ, ಗುರೆಳ್ಳು, ಅಗಸೆ ಪುಡಿಯನ್ನು ಸಿದ್ಧಪಡಿಸಿಟ್ಟುಕೊಂಡು ರೊಟ್ಟಿಗೆ ಅದೆಲ್ಲವನ್ನು ಬಡಿಸಿಕೊಂಡು ತಮ್ಮ ಓಣಿಯ, ಸ್ನೇಹ ಬಳಗಕ್ಕೆ, ಗ್ರಾಮದಲ್ಲಿ ಸಂಬಂಧಿಗಳ ಮನೆ ಮನೆಗೆ ತೆರಳಿ ಕೊಟ್ಟು ಅವರ ಮನೆಯ ರೊಟ್ಟಿಗಳನ್ನು ಪಡೆದು ರೊಟ್ಟಿ ಹಬ್ಬವನ್ನು ಆಚರಣೆ ಮಾಡಿದರು.

ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷತೆ ಪಡೆದಿದೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ರೊಟ್ಟಿಗಳ ಸಪ್ಪಳವೂ ಜೋರಾಗಿಯೇ ನಡೆಯಿತು. ಮನೆಯ ನಾರಿಯರು ತಮ್ಮ ಸ್ನೇಹ ಬಳಗಕ್ಕೆ, ಸಂಬಂಧಿ ಕರಿಗೆ, ಮನೆ ಪಕ್ಕದಲ್ಲಿನ ಆತ್ಮೀಯರಿಗೆ ರೊಟ್ಟಿಗಳ ವಿನಿಮಯ ಮಾಡಿ ನಾವೆಲ್ಲರೂ ಸಂತೋಷದಿಂದ ಹೀಗೆ ಇರೋಣ. ಸುಖಮಯ ಜೀವನ ನಡೆಸೋಣ. ಎಲ್ಲರೂ ಭಾವೈಕ್ಯತೆಯಿಂದ ಬಾಳ್ಳೋಣ ಎನ್ನುವ ಸಂದೇಶ ಸಾರುವ ಮೂಲಕ ರೊಟ್ಟಿಯ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.