ಸಂಸತ್ನಲ್ಲಿ ಉಪಯುಕ್ತ ಚರ್ಚೆಗಳಿಲ್ಲ: ನ್ಯಾಯಮೂರ್ತಿ ರಮಣ ವಿಷಾದ
Team Udayavani, Aug 15, 2021, 6:44 PM IST
ನವದೆಹಲಿ: ಸಂಸತ್ನಲ್ಲಿ ವಿಧೇಯಕಗಳ ಬಗ್ಗೆ ಉಪಯುಕ್ತ ಚರ್ಚೆಯಾಗುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಭಾನುವಾರ ವಿಷಾದಿಸಿದ್ದಾರೆ.
ವಿಧೇಯಕಗಳ ಬಗ್ಗೆ ಸೂಕ್ತ ರೀತಿಯಲ್ಲಿ ಚರ್ಚೆ ನಡೆದು, ಅದರಲ್ಲಿದ್ದ ಲೋಪಗಳನ್ನು ತಿದ್ದದೇ ಹೋದರೆ ಅಸ್ಪಷ್ಟ ಕಾನೂನುಗಳಾಗುತ್ತವೆ. ಇದರಿಂದಾಗಿ ನ್ಯಾಯಾಲಯಗಳ ಮೇಲೆ ಹೊರೆ ಹೆಚ್ಚಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುಪ್ರೀಂಕೋರ್ಟ್ ಬಾರ್ ಎಸೋಸಿಯೇಷನ್ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ:ಆಂಧ್ರ ಪ್ರದೇಶದಲ್ಲಿ ಆಗಸ್ಟ್ 21ರವರೆಗೆ ಕರ್ಫ್ಯೂ ಮುಂದೂಡಿಕೆ
“ಸಂಸತ್ನಲ್ಲಿ ನಿಗದಿತ ವಿಚಾರಗಳ ಬಗ್ಗೆ ಮಂಡಿಸಲಾಗುವ ವಿಧೇಯಕದ ಬಗ್ಗೆ ಸಮಗ್ರವಾಗಿ ಚರ್ಚೆಯಾಗಬೇಕು. ವಿಚಾರ ಮಂಡನೆಯಾದಾಗ ಅದರಲ್ಲಿನ ನ್ಯೂನತೆಗಳ ಬಗ್ಗೆ ಚರ್ಚೆಯಾಗಿ, ಪರಿಹಾರ ಸೂತ್ರ ಲಭಿಸುತ್ತದೆ. ಆದರೆ, ಸದ್ಯ ಸಂಸತ್ನಲ್ಲಿ ವಿಧೇಯಕಗಳ ಬಗ್ಗೆ ಅಪೂರ್ಣ ಚರ್ಚೆಗಳು ಉಂಟಾಗುತ್ತವೆ. ಹೀಗಾಗಿ, ಕಾನೂನಿನ ಉದೇªಶವೇ ಸ್ಪಷ್ಟವಾಗುವುದಿಲ್ಲ. ಜತೆಗೆ ಅದಕ್ಕೆ ಸ್ಪಷ್ಟೀಕರಣ ಕೋರಿ ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ಇದು ವಿನಾಕಾರಣವಾಗಿ ನ್ಯಾಯಾಂಗದ ಮೇಲೆ ಹೊರೆ ಹೆಚ್ಚು ಮಾಡಿದಂತಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯನಂತರ ನ್ಯಾಯವಾದಿಗಳು ಸಂಸತ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ತಿಳಿವಳಿಕೆ ಪೂರ್ಣ ಚರ್ಚೆಗೆ ಕಾರಣರಾಗಬೇಕು ಎಂದರು. ನ್ಯಾಯವಾದಿಗಳು ಮತ್ತೂಮ್ಮೆ ತಮ್ಮನ್ನು ವಿಧೇಯಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಧೇಯಕಗಳು ಮತ್ತು ಕಾಯ್ದೆಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ