ಗರ್ಭಪಾತ ಹಕ್ಕು ಕಸಿದುಕೊಳ್ಳಲಾಗದು: ಕೇರಳ ಹೈಕೋರ್ಟ್ ಅಭಿಮತ
ಅಸಹಜ ಭ್ರೂಣ ತೆಗೆಸಲು ಅನುಮತಿ
Team Udayavani, Aug 17, 2021, 10:00 PM IST
ಕೊಚ್ಚಿ: ಗರ್ಭಿಣಿಯಾಗಿ ಮುಂದುವರಿಯಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಯರಿಗಿದ್ದು, ಅದನ್ನು ನಾವು ಕಸಿದುಕೊಳ್ಳಲಾಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಅಲ್ಪಪ್ರಮಾಣದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರಿಗೆ ತಮ್ಮ 22 ವಾರಗಳ ಅಸಹಜ ಭ್ರೂಣದ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.
ಒಂದು ವೇಳೆ ಮಗುವು ಹುಟ್ಟಿದ ಬಳಿಕ ಅಸಮರ್ಥತೆ ಎದುರಿಸಬಹುದು ಅಥವಾ ವಿಕಲಾಂಗತೆಗೆ ಒಳಗಾಗಬಹುದು ಎಂಬ ಪರಿಸ್ಥಿತಿ ಇದ್ದಾಗ, ಗರ್ಭಪಾತ ಮಾಡಿಕೊಳ್ಳುವ ಹಕ್ಕು ತಾಯಿಯಾದವಳಿಗೆ ಇರುತ್ತದೆ. ಈ ಪ್ರಕರಣದಲ್ಲಿ ತಾಯಿಯು ಮಾನಸಿಕ ಅಸ್ವಸ್ಥೆ ಮಾತ್ರವಲ್ಲ, ಆಕೆಯ ಭ್ರೂಣವೂ ಕ್ಲಿನೆಫೆಲ್ಟರ್ ಸಿಂಡ್ರೋಮ್(ಗಂಡು ಮಗುವು ಹೆಚ್ಚುವರಿ ಎಕ್ಸ್ ಕ್ರೋಮೋಜೋನ್ನೊಂದಿಗೆ ಹುಟ್ಟುವಂಥ ಅಪರೂಪದ ಕಾಯಿಲೆ)ನಿಂದ ಬಳಲುತ್ತಿದೆ.
ಇದನ್ನೂ ಓದಿ:ನಥಿಂಗ್ ಇಯರ್ (1) ಎರಡೇ ನಿಮಿಷಕ್ಕೆ ಸೋಲ್ಡ್ ಔಟ್!
ಕ್ರೋಮೋಜೋಮ್ನಲ್ಲಾಗುವ ಈ ಅಸಾಮಾನ್ಯತೆಯಿಂದಾಗಿ ಮಗುವಿಗೆ ಬೆಳೆಯುತ್ತಿದ್ದಂತೆ ವಿವಿಧ ದೈಹಿಕ, ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೇ, ತಾಯಿಯ ಮಾನಸಿಕ ಆರೋಗ್ಯವೂ ಸರಿಯಿಲ್ಲದ ಕಾರಣ, ಆ ಮಗುವನ್ನು ಬೆಳೆಸಲು ಹಾಗೂ ನಿಯಂತ್ರಿಸಲು ಆಕೆಗೆ ಸಾಧ್ಯವಾಗದು ಎಂದು ವೈದ್ಯರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆ ಮಹಿಳೆಯ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ