ಉಮ್ಮನ್ ಚಾಂಡಿ, ವೇಣುಗೋಪಾಲ್ಗೆ ಸಂಕಷ್ಟ
Team Udayavani, Aug 17, 2021, 9:30 PM IST
ನವದೆಹಲಿ: ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕೇಂದ್ರದ ಮಾಜಿ ಸಚಿವ ಕೆ.ಸಿ.ವೇಣುಗೋಪಾಲ್ ಮತ್ತು ಇತರೆ ರಾಜಕಾರಣಿಗಳ ವಿರುದ್ಧ ಕೇರಳದ ಸೋಲಾರ್ ಹಗರಣ ಪ್ರಕರಣದ ಆರೋಪಿ ಮಹಿಳೆಯು ಹೊರಿಸಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
2012ರಲ್ಲಿ 6 ಮಂದಿ ಆರೋಪಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ಕೇರಳ ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು.
ಇದನ್ನೂ ಓದಿ:‘ತಾಲಿಬಾನ್ ಗಳಿಂದ ಹತಳಾಗಲು ಕಾಯುತ್ತಿದ್ದೇನೆ’ : ಅಫ್ಘಾನ್ ಪ್ರಥಮ ಮಹಿಳಾ ಮೇಯರ್
ಪ್ರಸಕ್ತ ವರ್ಷದ ಆರಂಭದಲ್ಲಿ ಕೇರಳದ ಆಡಳಿತಾರೂಢ ಸಿಪಿಎಂ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಚಾಂಡಿ, ವೇಣುಗೋಪಾಲ್ ಮಾತ್ರವಲ್ಲದೇ ಹಿಬಿ ಈಡನ್, ಅಡೂರ್ ಪ್ರಕಾಶ್, ಶಾಸಕ ಎ.ಪಿ.ಅನಿಲ್ ಕುಮಾರ್, ಬಿಜೆಪಿ ನಾಯಕ ಎ.ಪಿ.ಅಬ್ದುಲ್ಲಾ ಕುಟ್ಟಿ ಕೂಡ ಪ್ರಕರಣದ ಆರೋಪಿಗಳಾಗಿದ್ದಾರೆ.