ಮಿತ್ರ ಮಂಡಳಿ ಇಬ್ಭಾಗವಾಗಿಲ್ಲ: ಬಿ.ಸಿ.ಪಾಟೀಲ್
Team Udayavani, Aug 17, 2021, 9:45 PM IST
ಚಿತ್ರದುರ್ಗ: ನಮ್ಮಲ್ಲಿ ಬಾಂಬೆ ಟೀಮ್ ಸೇರಿ ಯಾವುದೂ ಇಲ್ಲ. ಪಕ್ಷದ ವರಿಷ್ಠರು ಕೊಟ್ಟ ಖಾತೆ ಸರಿಯಾಗಿ ನಿಭಾಯಿಸಬೇಕು ಅಷ್ಟೇ. ಎಲ್ಲ ಕೆಲಸವೂ ದೇವರ ಕೆಲಸ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಿತ್ರ ಮಂಡಳಿ ಇಬ್ಭಾಗ ಸೇರಿ ಯಾವುದೇ ಗೊಂದಲ ಇಲ್ಲ. ಎಲ್ಲ ಕಡೆಗೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಓಡಾಡಲು ಆಗಲ್ಲ. ಮಾಧ್ಯಮಗಳು ನಾಲ್ಕು ಜನ ಸೇರಿದರೂ ಒಂದು ಅರ್ಥ ಕಲ್ಪಿಸುತ್ತವೆ. ಬೇರೆ ಇದ್ದರೂ ಒಂದು ಹೇಳುತ್ತವೆ. ಒಂದು ಮನೆಯಲ್ಲಿ ಎಲ್ಲವೂ ಸರಿ ಇರುವುದಿಲ್ಲ. ಆದರೆ ತಂದೆ-ತಾಯಿ ಅದನ್ನು ಸರಿಪಡಿಸುತ್ತಾರೆ. ಇಲ್ಲಿಯೂ ಹಾಗೇ. ಹಿಂದೆ ಆ ಸರ್ಕಾರ ತೆಗೆಯಬೇಕಾಗಿತ್ತು, ಎಲ್ಲರೂ ಒಟ್ಟಾಗಿದ್ದೇವು. ಈಗ ಸರ್ಕಾರ ಬಂದಿದೆ. ಒಬ್ಬಿಬ್ಬರನ್ನು ಬಿಟ್ಟು ಉಳಿದ ಯಾರಿಗೂ ಅನ್ಯಾಯ ಆಗಿಲ್ಲ. ಎಲ್ಲವೂ ಸರಿಯಾಗುತ್ತದೆ. ಸಚಿವ ಆನಂದ್ ಸಿಂಗ್ ಮುನಿಸು ಸರಿಯಾಗುತ್ತದೆ. ಸಿಎಂ ಬಳಿ ಅವರ ಅಸಮಾಧಾನ ಹೇಳಿಕೊಂಡಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಸಿಎಂ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದರು.
ಇದನ್ನೂ ಓದಿ:ಆನ್ಲೈನ್ ಕ್ಲಾಸ್ ನಡೆಯುತ್ತಿರುವ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಹುಕ್ಕಾ ಬಾರ್ ವಿಚಾರವಾಗಿ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಮುಖಂಡರು ಗುದ್ದಾಡಲಿ. ನಾವು ರೈತರ ವಿಚಾರವಾಗಿ ಗುದ್ದಾಡೋಣ. “ಮದ್ದಾನೆಗಳು ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದಲ್ಲವೇನೆ ಸರಸಿ’ ಎಂದು ಡಿವಿಜಿ ಅವರ ಕಗ್ಗವನ್ನು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ