ಕಳವಿನ ಗೆಲುವಿಗೆ ದೇವರಿಗೆ ಹರಕೆ

ನಿಮ್ಮ ಮೇಲೆ ನಿಮಗೆ ನಿಗಾ ಇರಲಿ! ; ಗಮನ ಬೇರೆಡೆ ಸೆಳೆದು ಬ್ಯಾಗ್‌, ಹಣ ದೋಚುವ ಗ್ಯಾಂಗ್‌ಗಳು

Team Udayavani, Aug 26, 2021, 2:15 PM IST

ಕಳವಿನ ಗೆಲುವಿಗೆ ದೇವರಿಗೆ ಹರಕೆ

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕಳವು ಕಾರ್ಯ ಯಶಸ್ವಿಯಾಗಲೆಂದೇ ದೇವರಿಗೆ ಹರಕೆಕಟ್ಟಿಯೇ ನಗರಕ್ಕೆ ಬರುತ್ತಾರಿವರು…! ಇದು ಓಜಿಕುಪ್ಪಂ ಮತ್ತು ತಿರುಚ್ಚಿ ಗ್ಯಾಂಗ್‌ಗಳ ವಿಶೇಷ.

ಈ ಎರಡು ಗ್ಯಾಂಗ್‌ಗಳು ತಮ್ಮ ಗ್ರಾಮ ದೇವತೆಗೆ ಕಾರ್ಯ ಯಶಸ್ವಿಗೊಳಿಸುವಂತೆ ಹರಕೆ ಕಟ್ಟಿ ಬರುತ್ತಾರೆ. ಜನರ ಗಮನ ಬೇರೆಡೆ ಸೆಳೆದು, ಬ್ಯಾಗ್‌ಗಳು, ಹಣ ದೋಚಿದ ಹಣದಲ್ಲಿ ದೇವರ ಹರಕೆ ತೀರಿಸಿಯೇ ಮನೆಗೆ ತೆರಳುತ್ತಾರೆ!

ತಮಿಳುನಾಡು ಮೂಲದ ಓಜಿಕುಪ್ಪಂ ಮತ್ತು ತಿರುಚ್ಚಿ ಗ್ಯಾಂಗ್‌ಗಳ ಕೃತ್ಯದ ಮಾದರಿ ಬೇರೆ ಬೇರೆ. ಆದರೆ, ಇಬ್ಬರ ಟಾರ್ಗೆಟ್‌ ಬೆಂಗಳೂರು. ರೈಲು, ಬಸ್‌ಗಳ ಮೂಲಕ ತಿಂಗಳಿಗೆ ಎರಡು-ಮೂರು ಬಾರಿ ಬರುವ ಈ ಗ್ಯಾಂಗ್‌ನ ಸದಸ್ಯರು, ನಗರದಲ್ಲಿರುವ ಸ್ಥಳೀಯ ಸಹಚರರ ಮೂಲಕ ಬಾಡಿಗೆ ಮನೆಗಳಲ್ಲಿ ಆಶ್ರಯಿಸಿ, ಕಳವು ದ್ವಿಚಕ್ರ ವಾಹನಗಳನ್ನು ಬಳಸಿ ಕೃತ್ಯ ಎಸಗುತ್ತಾರೆ. ವಿಶೇಷವೆಂದರೆ, ಈ ಗ್ಯಾಂಗ್‌ಗಳ ಸದಸ್ಯರು ಯಾರ ಮೇಲೂ ಹಲ್ಲೆ ನಡೆಸುವುದಿಲ್ಲ. ಕೇವಲ ಹಣ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಾರೆ.

ಓಜಿಕುಪ್ಪಂ: ತಮಿಳುನಾಡಿನ ಓಜಿಕುಪ್ಪಂ ಎಂಬ ಗ್ರಾಮದಲ್ಲಿ ಶೇ.80ರಷ್ಟು ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿಯೇ ಈ ಗ್ರಾಮದಿಂದ ಬಂದು ಕೃತ್ಯ ಎಸಗುವ ಆರೋಪಿಗಳಿಗೆ “ಓಜಿಕುಪ್ಪಂ’ ಎಂಬ ಕುಖ್ಯಾತಿ ಬಂದಿದೆ. 8-10ಮಂದಿಯ ಒಂದು ತಂಡ ಊರಿಂದ ತೆರಳುವಾಗ ಗ್ರಾಮದ ಹೊರಭಾಗದಲ್ಲಿರುವ ದೇವಿಗೆ ಹರಕೆ ಕಟ್ಟಿಕೊಂಡು ಬೆಂಗಳೂರು ಸೇರಿ ನಾನಾ ರಾಜ್ಯಗಳಿಗೆ ತೆರಳುತ್ತಾರೆ. ಹಣ ದೋಚಿ ಊರಿಗೆ ತೆರಳುತ್ತಿದ್ದಂತೆ ಹರಕೆ ತೀರಿಸುತ್ತಾರೆ.

ಇದನ್ನೂ ಓದಿ:ಕೋವಿಡ್ ಹೆಚ್ಚಳವಾಗುತ್ತಿದೆ, ಕೇಂದ್ರ ಸರ್ಕಾರ ಆಸ್ತಿ ಮಾರಾಟದಲ್ಲಿ ನಿರತವಾಗಿದೆ : ರಾಹುಲ್

ಆರೋಪಿಗಳು ಹೇಗೆ ಕೃತ್ಯವೆಸಗುತ್ತಾರೆ?
ಪ್ರತಿಷ್ಠಿತ ಪ್ರದೇಶ ಅಥವಾ ಹೆಚ್ಚು ಸಂದಣಿ ಇಲ್ಲದ ಪ್ರದೇಶದಲ್ಲಿರುವ ಬ್ಯಾಂಕ್‌ಗಳ ಬಳಿ ಒಂಚು ಹಾಕುವ ತಂಡದ ಸದಸ್ಯರು, ಬ್ಯಾಂಕ್‌ ಒಳ
ಗಡೆ ಇಬ್ಬರು, ಹೊರಭಾಗದಲ್ಲಿ ನಾಲ್ವರು ಗ್ರಾಹಕರ ಮೇಲೆ ನಿಗಾವಹಿಸುತ್ತಾರೆ. ಲಕ್ಷಾಂತರ ರೂ. ಹಣ ಡ್ರಾ ಮಾಡಿಕೊಂಡು ಹೊರಗಡೆ
ಬರುವ ಗ್ರಾಹಕನ ಹಿಂಬಾಲಿಸಿ, ಕಾರು ಅಥವಾ ದ್ವಿಚಕ್ರ ವಾಹನ ಹತ್ತುತ್ತಿದ್ದಂತೆ ಸಮೀಪಕ್ಕೆ ಬಂದು, ಪಕ್ಕದಲ್ಲಿ ಹತ್ತು ಅಥವಾ ನೂರು ರೂ.
ಮುಖಬೆಲೆಯ ನೋಟು ನೆಲದ ಮೇಲೆ ಹಾಕಿ ಅವರ ಗಮನ ಬೇರೆಡೆ ಸೆಳೆಯುತ್ತಾರೆ. ಇತ್ತ ಕೆಳಗೆ ಬಿದ್ದ ನೋಟಿನ ಬಗ್ಗೆ ಗ್ರಾಹಕ ಗಮನ ಹರಿಸುತ್ತಿದ್ದಂತೆ ಹಣದ ಬ್ಯಾಗ್‌ನ್ನು ದ್ವಿಚಕ್ರ ವಾಹನದಲ್ಲಿ ಕದೊಯ್ಯುತ್ತಾರೆ. ಇತ್ತ ನೋಟುಬಿದ್ದಿರುವಬಗ್ಗೆ ಹೇಳಿದವ್ಯಕ್ತಿ ಕೂಡ ಗ್ರಾಹಕನಿಗೆ ಕಳ್ಳನ ಹಿಂಬಾಲಿಸಲು ಸಹಾಯ ಮಾಡುವ ನೆಪದಲ್ಲಿ ಆತ ಕೂಡ ಮತ್ತೂಂದು ಬೈಕ್‌ನಲ್ಲಿ ಪರಾರಿಯಾಗುತ್ತಾನೆ.

ಕಳ್ಳತನವೇ ತಿರುಚ್ಚಿ ಗ್ಯಾಂಗ್‌ ಕಸುಬು
ತಮಿಳುನಾಡಿನ ತಿರುಚ್ಚಿ ಎಂಬ ಗ್ರಾಮದಲ್ಲಿ ಸುಮಾರು 100-150 ಮಂದಿ ಕಳ್ಳತನ ಮಾಡುವುದನ್ನೇ ಹತ್ತಾರು ವರ್ಷಗಳಿಂದ ಕಸುಬು ಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ಬರುವ ಮೊದಲು ದೇವರಿಗೆ ಹರಕೆ ಕಟ್ಟಿಕೊಂಡು ಬಂದು ಕೃತ್ಯ ಎಸಗಿ ಪರಾರಿಯಾಗುತ್ತಾರೆ. ಈ ಗ್ಯಾಂಗ್‌ನ ಆರೇಳು ಮಂದಿ ಸದಸ್ಯರು ನಿರ್ದಿಷ್ಟವಾದ ಬಸ್‌, ರೈಲು ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಠಿಕಾಣಿ ಹಾಕುತ್ತಾರೆ. ಒಬ್ಬರು, ಇಬ್ಬರು ಇರುವ ಸಾರ್ವಜನಿಕರ ಬಳಿ ವಿಳಾಸ ಹಾಗೂ ಇತರೆ ಮಾರ್ಗಗಳ ಮೂಲಕ ಗಮನ ಬೇರೆಡೆ ಸೆಳೆದು ಬ್ಯಾಗ್‌ಗಳನ್ನು ಕಳವು ಮಾಡುತ್ತಾರೆ. ಕ್ಷಣಾರ್ಥ ದಲ್ಲಿ ಆ ಬ್ಯಾಗ್‌ ಅನ್ನು ಮತ್ತೂಬ್ಬನ ಮೂಲಕ ಬೇರೆಡೆ ಕಳುಹಿಸು ತ್ತಾರೆ.ಆತ ನಿರ್ದಿಷ್ಟ ಸ್ಥಳದಲ್ಲಿಬ್ಯಾಗ್‌ಇಟ್ಟುಮತ್ತೆ ಅವರ ಗ್ಯಾಂಗ್‌ ಜತೆ ಸೇರಿಕೊಳ್ಳುತ್ತಾನೆ. ಇಂತಹ ಗ್ಯಾಂಗ್‌ಗಳ ಬಗ್ಗೆ ಪೊಲೀಸರು ಎಷ್ಟೇ ನಿಗಾವಹಿಸಿದರೂ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

 ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.