ಮನ್ನಾ ಆಗದ ವಿದ್ಯುತ್‌ ಬಿಲ್‌: ಹೆಚ್ಚಿದ ಆತಂಕ

ಬಾಕಿ ವಸೂಲಿಗೆ ಮುಂದಾದ ಸೆಸ್ಕ್; ವಿದ್ಯುತ್‌ ನಿಲುಗಡೆಯಿಂದ ಕಂಗಾಲಾದ ಬೆಳೆಗಾರರು

Team Udayavani, Aug 26, 2021, 4:02 PM IST

ಮನ್ನಾ ಆಗದ ವಿದ್ಯುತ್‌ ಬಿಲ್‌: ಹೆಚ್ಚಿದ ಆತಂಕ

ಸಾಂದರ್ಭಿಕ ಚಿತ್ರ.

ಸಕಲೇಶಪುರ: ಕೃಷಿಗೆ ಬಳಕೆ ಮಾಡುವ ವಿದ್ಯುತ್‌ ಬಿಲ್‌ ಮನ್ನವಾಗುವ ನಿರೀಕ್ಷೆಯಲ್ಲಿದ್ದ ತಾಲೂಕಿನ ಕಾಫಿ ಬೆಳೆಗಾರರು ಇದೀಗ ಸರ್ಕಾರ ಬಿಲ್‌ ಮನ್ನ ಮಾಡಲು ಮುಂದಾಗದ ಕಾರಣ ಐಪಿಸೆಟ್‌ಗಳಿಗಾಗಿ(ಕೃಷಿಗಾಗಿ ವಿದ್ಯುತ್‌ ಪೂರೈಕೆ) ಬಳಸಿದ್ದ ಐದು ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಕಟ್ಟಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

ಕಾಡಾನೆಗಳ ಹಾವಳಿ, ಅತಿವೃಷ್ಟಿಯಿಂದ ತತ್ತರಿಸಿರುವ ಕಾಫಿ ಬೆಳೆಗಾರರು ಇದೀಗ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನಿಲುವಿನಿಂದ ಬೆಳೆಗಾರರು ಆತಂಕಕ್ಕೆ ಈಡಾಗಿದ್ದಾರೆ. ರಾಜ್ಯದಲ್ಲಿಕೃಷಿ ಚಟುವಟಿಕೆಗಳಿಗೆ 5ರಿಂದ 10 ಎಚ್‌.ಪಿ ಸಾಮರ್ಥ್ಯದ ಮೋಟಾರ್‌ ಗೆ ಸರ್ಕಾರ ಉಚಿತವಾಗಿ ವಿದ್ಯುತ್‌ ಒದಗಿಸುತ್ತಿದೆ. ಆದರೆ ಕಾಫಿ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿರುವುದರಿಂದ ಕೃಷಿ ಇಲಾಖೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಆದರೂ ಉಚಿತ ವಿದ್ಯುತ್‌ ನೀಡಬಹುದೆಂಬ ಆಶಾ ಭಾವನೆಯನ್ನು ಬೆಳೆಗಾರರು ಹೊಂದಿದ್ದರು. ಆದರೆ ಇದೀಗ ಕಾಫಿ ಬೆಳೆಗಾರರ ಆಶಾ ಭಾವನೆಗೆ ಪೆಟ್ಟು ಬಿದ್ದಿದ್ದು ಚೆಸ್ಕಾಂ ಇಲಾಖೆ ಬಡ್ಡಿ ಸಮೇತ ವಿದ್ಯುತ್‌
ಬಿಲ್‌ ವಸೂಲಾತಿಗೆ ಮುಂದಾಗಿದೆ. ಜತೆಗೆ ಐಪಿ ಸೆಟ್‌ ಸಂಪರ್ಕ ಪಡೆದು ಬಳಕೆ ಮಾಡದವರೂ ಸಹ ಹಣ ಪಾವತಿ ಮಾಡಬೇಕಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

10 ಸಾವಿರದಿಂದ ಲಕ್ಷದವರೆಗೆ ಬಿಲ್‌ ಬಾಕಿ:
ತಾಲೂಕಿನ ಚೆಸ್ಕಾಂ ಇಲಾಖೆಗೆ ಸೇರಿದ ಸಕಲೇಶಪುರ, ಬಾಳ್ಳುಪೇಟೆ, ಯಸಳೂರು, ಹೆತ್ತೂರು ಹಾಗೂ ಹಾನುಬಾಳ್‌ ಸೇರಿದಂತೆ ಐದು ಉಪವಿಭಾಗಗಳ 898 ಬಳೆಕೆದಾರರು 10 ಎಚ್‌ಪಿ ಐಪಿಸೆಟ್‌ ಗಿಂತ ಕಡಿಮೆ ಐಪಿಸೆಟ್‌ ಬಳಕೆದಾರರು ಬಳಸಿದ್ದ 2.71 ಕೋಟಿ ರೂ. ಹಣವನ್ನು ಇಲಾಖೆಗೆ ಪಾವತಿಸಬೇಕಾಗಿದೆ. ಈ ಐದು ಉಪಕೇಂದ್ರಗಳಲ್ಲಿ ಹತ್ತು ಎಚ್‌ಪಿಗಿಂತ ಹೆಚ್ಚಿನ ಐಪಿ ಸೆಟ್‌ ಬಳಸಿರುವ 247 ಬಳಕೆದಾರರು 1.89 ರೂ. ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಗ್ರಾಹಕ ಕನಿಷ್ಠ 10 ಸಾವಿರದಿಂದ 2 ಲಕ್ಷದವರೆಗೆ ಒಂದು ವರ್ಷದಿಂದ ಕಳೆದ 10 ವರ್ಷಗಳ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸೆಸ್ಕ್ ತಿಳಿಸಿದೆ.

ಇದನ್ನೂ ಓದಿ:ಕೇರಳದಲ್ಲಿ ಸೋಂಕು ಏರಿಕೆ : ಇದು ಸರ್ಕಾರದ ಅಸಲಿ ಮುಖವನ್ನು ತೋರಿಸುತ್ತದೆ : ಥಾಮಸ್

ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ ಉಪಕೇಂದ್ರಗಳ ಪೈಕಿ ಹೆಚ್ಚಿನ ಸುಸ್ತಿದಾರರಿರುವ ಬಾಳ್ಳುಪೇಟೆ ಉಪಕೇಂದ್ರ ಮೊದಲ ಸ್ಥಾನದಲ್ಲಿದೆ.
ಇಲ್ಲಿನ 549 ಐಪಿಸೆಟ್‌ ಬಳಕೆದಾರರು 2 ಕೋಟಿ ಹನ್ನೊಂದು ಲಕ್ಷ ಹಣ ಪಾವತಿಸ ಬೇಕಿದ್ದರೆ, ಸುಸ್ಥಿದಾರರಲ್ಲಿ 2ನೇ ಸ್ಥಾನದಲ್ಲಿರುವ ಹಾನುಬಾಳ್‌ ಉಪಕೇಂದ್ರಕ್ಕೆ ಸೇರ್ಪಡೆಗೊಳ್ಳುವ 204 ಐಪಿಸೆಟ್‌ ಬಳಸುವ ವಿದ್ಯುತ್‌ ಬಳಕೆದಾರರು 1.35 ಕೋಟಿ ಹಣ ಪಾವತಿಸಬೇಕಿದೆ. ಸಕಲೇಶಪುರ ಉಪವಿಭಾಗದ 133 ಬಳಕೆದಾರರು 40 ಲಕ್ಷ ಪಾವತಿಸಬೇಕಿದೆ. ಯಸಳೂರು ಉಪಕೇಂದ್ರಕ್ಕೆ ಸೇರುವ 180 ಐಪಿಸೆಟ್‌ ಬಳಸುವ ಕಾಫಿ ಬೆಳೆಗಾರರು 57ಲಕ್ಷ ಹಣ ಪಾವತಿಸಬೇಕಿದೆ. ಹೆತ್ತೂರು ಉಪಕೇಂದ್ರದ 79 ಐಪಿಸೆಟ್‌ ಬಳಕೆದಾರರು 13 ಲಕ್ಷ ರೂ. ಪಾವತಿಸಬೇಕಿದೆ

ಶಾಸಕರಿಂದ ಇಂಧನ
ಸಚಿವರಿಗೆ ಪತ್ರ
ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು ತಾಲೂಕಿನಕಾಫಿ ಬೆಳೆಗಾರರು ಮತ್ತು ಇತರೆ ರೈತರು ಹತ್ತಾರು ವರ್ಷಗಳಿಂದ ಅಕ್ರಮ- ಸಕ್ರಮ ಪಂಪ್‌ ಸೆಟ್‌ಗಳ ಮೂಲಕ ಕೃಷಿ ಮಾಡುತ್ತಿದ್ದು, ಅತಿವೃಷ್ಟಿ- ಅನಾವೃಷ್ಟಿಯಿಂದ ಆರ್ಥಿಕ ನಷ್ಟದಲ್ಲಿದ್ದಾರೆ. ಇತ್ತೀಚೆಗೆ ಸೆಸ್ಕ್ ಉನ್ನತಾಧಿಕಾರಿಗಳು ಬಾಕಿ ವಸೂಲಿಗೆ ಮುಂದಾಗಿದ್ದು ವಿದ್ಯುತ್‌ ನಿಲುಗಡೆ ಮಾಡುತ್ತಿದ್ದಾರೆ. ಬೆಳೆಗಾರರು10 ಎಚ್‌.ಪಿಗೆ ಉಚಿತ
ವಿದ್ಯುತ್‌ ನೀಡಬೇಕೆಂದು ಒತ್ತಾಯಿಸುತ್ತಿದ್ದು, ಬೆಳಗಾರರ ಪರವಾಗಿ ವಿನಾಯಿತಿ ನೀಡುವಂತೆ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಇಂಧನ ಸಚಿವ ಸುನೀಲ್‌ಕುಮಾರ್‌ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.


ಬೆಳೆಗಾರರು ಸಕಾಲಕ್ಕೆ ವಿದ್ಯುತ್‌ ಬಿಲ್‌ ಪಾವತಿಸಿದರೆ ಇಲಾಖೆ ಉಳಿಯಲಿದೆ. ವಿದ್ಯುತ್‌ ಬಿಲ್‌ ಇದೆ ರೀತಿಯಲ್ಲಿ ಬಾಕಿ ಉಳಿದರೆ ಇಲಾಖೆ ಖಾಸಗಿಯವರ ಪಾಲಾಗಲಿದೆ. ಈ ಬಗ್ಗೆ ಬಳಕೆದಾರರೆ ಚಿಂತಿಸಬೇಕಿದೆ.
– ಭಾರತಿ, ಸಕಲೇಶಪುರ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌

ಸರ್ಕಾರ ಕೂಡಲೆ ತಾಲೂಕಿನ ಕಾಫಿ ಬೆಳೆಗಾರರು ಬಳಕೆ ಮಾಡಿರುವ ವಿದ್ಯುತ್‌ ಬಿಲ್‌ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು.
-ಮೋಹನ್‌ಕುಮಾರ್‌, ಕರ್ನಾಟಕ
ಬೆಳೆಗಾರರ ಒಕ್ಕೂಟದ ಅಧ್ಯಕ್ಷ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.