ಡಿಜಿಟಲ್‌ ಇ-ಗ್ರಂಥಾಲಯಕ್ಕೆ ಜಿಲ್ಲೆಯಲ್ಲಿ 5.22 ಲಕ್ಷ ಮಂದಿ ನೋಂದಣಿ


Team Udayavani, Sep 4, 2021, 6:22 AM IST

ಡಿಜಿಟಲ್‌ ಇ-ಗ್ರಂಥಾಲಯಕ್ಕೆ ಜಿಲ್ಲೆಯಲ್ಲಿ 5.22 ಲಕ್ಷ ಮಂದಿ ನೋಂದಣಿ

ಉಡುಪಿ: ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಾರಂಭಿಸಿದ “ಡಿಜಿಟಲ್‌ ಪಬ್ಲಿಕ್‌ ಲೈಬ್ರೆರಿ’ ( ಸಾರ್ವಜನಿಕ ಇ-ಗ್ರಂಥಾಲಯಕ್ಕೆ)ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ನೋಂದಾಯಿಸಿಕೊಂಡಿದ್ದಾರೆ.

2020ರ ಫೆಬ್ರವರಿಯಲ್ಲಿ ಇಲಾಖೆ ಆರಂಭಿಸಿದ ಈ ಡಿಜಿಟಲ್‌ ಗ್ರಂಥಾಲಯ ಸೌಲಭ್ಯಕ್ಕೆ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳಿಂದ ವ್ಯಾಪಕ ಸ್ಪಂದನೆ ದೊರೆತಿದೆ. ಈ ಡಿಜಿಟಲ್‌ ಗ್ರಂಥಾಲಯ ಜಾರಿಗೆ ಬಂದ ಈವರೆಗಿನ ಒಟ್ಟು 17 ತಿಂಗಳಲ್ಲಿ ಒಟ್ಟು 5,22,281ಮಂದಿ ನೋಂದಣಿಯಾಗಿ ಇ-ಬುಕ್ಸ್‌, ವೀಡಿಯೋ ಮತ್ತು ಲಿಂಕ್ಸ್‌ ಸೇರಿದಂತೆ ಹೊಸದಾಗಿ ಅಳವಡಿಸಿದ ಇ-ಕಂಟೆಂಟ್‌ ಓದುಗರು ಉಪಯೋಗಿಸಿದ್ದಾರೆ.

ಉಡುಪಿ ಜಿಲ್ಲಾ ಗ್ರಂಥಾಲಯದಲ್ಲಿ 2,63,229 ಮಂದಿ, ಕುಂದಾಪುರ ಗ್ರಂಥಾಲಯ 55,713, ಕಾರ್ಕಳ ಗ್ರಂಥಾಲಯ 52,377, ಸಾಲಿಗ್ರಾಮ ಗ್ರಂಥಾಲಯ 39,165, ಕಾಪು ಪುರಸಭೆ ಗ್ರಂಥಾಲಯ 1,04,521, ಬೈಂದೂರು ಪುರಸಭೆ ಗ್ರಂಥಾಲಯ 557, ಹೆಬ್ರಿ ಗ್ರಂಥಾಲಯ 1,209, ನಗರ ಕೇಂದ್ರ ಗ್ರಂಥಾಲಯ 5,431 (+ದೊಡ್ಡಣಗುಡ್ಡೆ ಗ್ರಂಥಾಲಯ 79) ಮಂದಿ ಸೇರಿದಂತೆ ಒಟ್ಟು 5,22,281 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮನೆ ಬಾಗಿಲಿಗೆ ಮಾದಕ ವಸ್ತುಗಳು : ಸಿಸಿಬಿ ಪೊಲೀಸರಿಂದ ಜಾರ್ಖಂಡ್‌ ಮೂಲದ ಇಬ್ಬರ ಬಂಧನ

ಉಡುಪಿಗೆ ಆರನೇ ಸ್ಥಾನ
ರಾಜ್ಯದ ನಗರ (26), ತಾಲೂಕು (216) ಹಾಗೂ ಜಿಲ್ಲೆಗಳು (30) ಸೇರಿದಂತೆ ಒಟ್ಟು ರಾಜ್ಯದಲ್ಲಿರುವ 272 ಗ್ರಂಥಾಲಯಗಳಲ್ಲಿ ಓದುಗರಿಗೆ ಈ ಡಿಜಿಟಲ್‌ ಆವೃತ್ತಿ ಲಭ್ಯವಿದೆ. ಇದರ ಲಾಭ ಪಡೆದುಕೊಳ್ಳಲು ನೋಂದಣಿ ಯಾದವರ ಪೈಕಿ ಬೆಂಗಳೂರು ನಗರ (17.94 ಲಕ್ಷ), ದ.ಕ. (17.13 ಲಕ್ಷ), ಕಲಬುರಗಿ (16.68 ಲಕ್ಷ), ಹಾಸನ (10.39ಲಕ್ಷ), ಗದಗ (8.97 ಲಕ್ಷ) ಉಡುಪಿ ಜಿಲ್ಲೆಯು (5.22 ಲಕ್ಷ) ಕ್ರಮವಾಗಿ ಕ್ರಮವಾಗಿ ಒಂದರಿಂದ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ವಿದ್ಯಾರ್ಥಿಗಳು ನೋಂದಣಿ
ಇ -ಸಾರ್ವಜನಿಕ ಗ್ರಂಥಾ ಲಯದಲ್ಲಿ 1,18,000 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಅವರಿಂದ ನಮ್ಮ ಕರ್ನಾಟಕ, ಉತ್ತರ ಭಾರತದ ಪ್ರಮುಖ ರಾಜಮನೆತನಗಳು, ಸಂವಿಧಾನದ ತಿದ್ದುಪಡಿ, ಸ್ವಾತಂತ್ರ್ಯ ಹೋರಾಟ, ಪ್ರಾಚೀನ ನಾಗರಿಕತೆಗಳು, ಪ್ರಭುತ್ವ ಕುರಿತ ವೀಡಿಯೋಗಳನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಇತರರಿಂದ ಸಾಹಿತ್ಯ, ವಿಜ್ಞಾನ, ಕಲೆ, ತಾಂತ್ರಿಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಹೆಚ್ಚಿನ ವೀಡಿಯೋಗಳ ವೀಕ್ಷಣೆಯಾಗಿದೆ. ಕೆಎಎಸ್‌ ಸೇರಿದಂತೆ ಇತರ ಸ್ಪರ್ಧಾತ್ಮಕ ವಿಷಯಗಳಿಗೆ ಸಂಬಂಧಿಸಿದ ಇ-ಪುಸ್ತಕ ಬಳಕೆ ಮಾಡಿದ್ದಾರೆ.

ನೋಂದಣಿ ಹೇಗೆ?
ಗೂಗಲ್‌ ಕ್ರೋಮ್‌ನಲ್ಲಿ www.karnatakadigitalpubliclibrary.org ಟೈಪ್‌ ಮಾಡಬೇಕು. ಅನಂತರ ಲಾಗಿನ್‌/ ರಿಜಿಸ್ಟರ್‌ ಬಟನ್‌ ಆಯ್ಕೆ ಮಾಡಿ “ಈಗ ರಚಿಸಿ’ ಎನ್ನುವುದರ ಮೇಲೆ ಕ್ಲಿಕ್‌ ಮಾಡಬೇಕು. ಹೆಸರು, ಮೊಬೈಲ್‌ ಸಂಖ್ಯೆ, ಇಮೇಲ್‌ ಐಡಿ ನೀಡಿ ಡ್ರಾಪ್‌ಡೌನ್‌ ಪರಿವಿಡಿಯಿಂದ ಗ್ರಂಥಾಲಯವನ್ನು ಆಯ್ಕೆ ಮಾಡಿ (ನೋಂದಣಿ ಪ್ರಕ್ರಿಯೆಗೆ ಗ್ರಂಥಾಲಯವನ್ನು ಆಯ್ಕೆ ಮಾಡಬೇಕು) ಸೈನ್‌ಆಪ್‌ ಕ್ಲಿಕ್‌ ಮಾಡಬೇಕು. ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ, ಪಾಸ್‌ವರ್ಡ್‌ ನಮೂದಿಸಿ ಸೈನ್‌ ಆಪ್‌ ಮಾಡಬೇಕು. ಅನಂತರ ಜನರು ಮೊಬೈಲ್‌ ಅಥವಾ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್‌ನಲ್ಲಿ ಸಹ ಪುಸ್ತಕಗಳನ್ನು ಓದಬಹುದಾಗಿದೆ.

ಡಿಜಿಟಲ್‌ ಗ್ರಂಥಾಲಯ ಯಶಸ್ವಿ
ಕೋವಿಡ್‌ ಅನಂತರ ಜಿಲ್ಲೆಯಲ್ಲಿ ಇ- ಸಾರ್ವಜನಿಕ ಗ್ರಂಥಾಲಯದ ಬಳಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ನೋಂದಣಿಯಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ| ಸತೀಶ್‌ ಕುಮಾರ್‌ ಹೊಸಮನಿ ಅವರ ಸತತ ಪ್ರಯತ್ನದ ಫ‌ಲದಿಂದ ಡಿಜಿಟಲ್‌ ಗ್ರಂಥಾಲಯ ಯಶಸ್ವಿಯಾಗಿದೆ.
-ನಳಿನಿ ಜಿ.ಐ., ಮುಖ್ಯ ಗ್ರಂಥಾಲಯಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ

ಟಾಪ್ ನ್ಯೂಸ್

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.