ರಾಜಕೀಯದೇಟಿಗೆ ಕಾಣೆಯಾಗ್ತಿವೆ ಅಡಿಗಲ್ಲುಗಳು

ಆ ಕಟ್ಟಡ ಉದ್ಘಾಟಿಸಿದ ದಿನ ಯಾರು ಅಧಿಕಾರದಲ್ಲಿದ್ದರೂ ಎಂಬುದನ್ನು ಹುಡುಕಾಡಬೇಕಿದೆ.

Team Udayavani, Sep 15, 2021, 5:58 PM IST

ರಾಜಕೀಯದೇಟಿಗೆ ಕಾಣೆಯಾಗ್ತಿವೆ ಅಡಿಗಲ್ಲುಗಳು

ಸಿಂಧನೂರು: ಯಾವುದೇ ಕಟ್ಟಡ ಉದ್ಘಾಟಿಸಿದ ಬಳಿಕ ಅಲ್ಲಿ ಅಡಿಗಲ್ಲು ಕಾಣಿಸುವುದು ಸಾಮಾನ್ಯ. ಈಗೀಗ ಅಡಿಗಲ್ಲುಗಳೂ ಕಾಣೆಯಾಗುತ್ತಿವೆ. ಹೌದು. ಶಿಷ್ಟಾಚಾರ ಪಾಲನೆ ಹಾಗೂ ಆಡಳಿತ ವರ್ಗದ ಪ್ರಭಾವ ಈ ರೀತಿಯ ಬೆಳವಣಿಗೆಗೆ ನಾಂದಿ ಹಾಡಿವೆ. ಇಲ್ಲಿನ ಶಹರ ಪೊಲೀಸ್‌ ಠಾಣೆ ಉದ್ಘಾಟನೆ ಸಂದರ್ಭವೂ ಇಂತಹ ಪ್ರಸಂಗ ತಲೆದೋರಿತ್ತು.

ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅವರ ಹೆಸರನ್ನು ಶಹರ ಪೊಲೀಸ್‌ ಠಾಣೆ ನೂತನ ಕಟ್ಟಡ ಉದ್ಘಾಟನೆ ಅಡಿಗಲ್ಲಿನಲ್ಲಿ ಬರೆಯಿಸಲಾಗಿತ್ತು ಎಂಬುದೇ ಚರ್ಚೆಯಾಗಿತ್ತು. ಬಳಿಕ ಅಡಿಗಲ್ಲು ನಾಪತ್ತೆಯಾಯಿತು.

ರಾಮತ್ನಾಳಲ್ಲೂ ಅದೇ ಘಟನೆ: ತಾಲೂಕಿನ ರಾಮತ್ನಾಳ ಗ್ರಾಮದಲ್ಲೂ ಕೂಡ ಸುಸಜ್ಜಿತ ಗ್ರಾಪಂ ಕಟ್ಟಡ ನಿರ್ಮಿಸಲಾಗಿದ್ದು, ಅಲ್ಲಿ ಕೂಡ ಅಡಿಗಲ್ಲು ಜಗಳ ಅಧಿ ಕಾರಿಗಳ ನೆಮ್ಮದಿ ಕದಡಿದೆ. ಪರಿಣಾಮ ಅಲ್ಲೀಗ ಅಡಿಗಲ್ಲು ಕೂಡ ಉಳಿದಿಲ್ಲ. 20 ಸಾವಿರ ರೂ. ಖರ್ಚು ಮಾಡಿ ಕೆತ್ತಿಸಿದ ಕಲ್ಲನ್ನು ವಿಳಾಸವೇ ಇಲ್ಲದಂತೆ ಕಳುಹಿಸಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ, ಅಡಗಲ್ಲನ್ನು ಪುಡಿ ಪುಡಿ ಮಾಡಿ ಟಂಟಂನಲ್ಲಿ ತುಂಬಿಸಿ ಹೊರಗೆ ಬಿಸಾಡಲಾಗಿದೆ. ಎಲ್ಲ ಸಂದರ್ಭದಲ್ಲೂ ಸಾರ್ವಜನಿಕ ಹಣ ಪೋಲಾಗುತ್ತಿದ್ದರೂ ಕೆತ್ತಿಸಿದ ಅಡಿಗಲ್ಲುಗಳು ಉಳಿಯದಾಗಿವೆ.

ಮಿನಿ ವಿಧಾನಸೌಧಕ್ಕೂ ಇಲ್ಲ ಅಡಿಗಲ್ಲು:
ಮಾನ್ವಿ ಶಾಸಕರು ಕೂಡ ತಮ್ಮ ತಾಲೂಕಿನಲ್ಲಿ ಮಿನಿ ವಿಧಾನಸೌಧ ಇಲ್ಲವೆಂದು ವೇದನೆ ತೋಡಿಕೊಂಡು ಸಿಂಧನೂರಿನ ಮಿನಿ ವಿಧಾನಸೌಧವನ್ನು ಸುಪ್ರೀಂಕೋರ್ಟ್‌ ಮಾದರಿ ಕಟ್ಟಡವೆಂದು ಬಣ್ಣಿಸಿದ್ದರು. ಅಂತಹ ಕಟ್ಟಡಕ್ಕೂ ಕೂಡ ಅಡಿಗಲ್ಲು ಇಲ್ಲವಾಗಿದೆ. ಯಾರ ಹೆಸರನ್ನು ಕೆತ್ತಿಸಬೇಕು ಎಂಬುದು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿಸಿದೆ. ಆ ಕಟ್ಟಡ ಉದ್ಘಾಟಿಸಿದ ದಿನ ಯಾರು ಅಧಿಕಾರದಲ್ಲಿದ್ದರೂ ಎಂಬುದನ್ನು ಹುಡುಕಾಡಬೇಕಿದೆ. ಸುಲಭವಾಗಿ
ಶಾಸಕರು ಯಾರೆಂದು ಗೊತ್ತಾಗುತ್ತದೆ. ಇಲ್ಲಿ ಪ್ರಶ್ನೆ ಏರ್ಪಡುತ್ತಿರುವುದೇ ಶಿಷ್ಟಾಚಾರ. ಇದೇ ಕಾರಣಕ್ಕೆ ತಾಲೂಕಿನ ಬಹುತೇಕ ಕಟ್ಟಡಗಳು ಅಡಿಗಲ್ಲು ಶೂನ್ಯವಾಗುತ್ತಿವೆ. ರಾಜಕಾರಣಿಗಳು ಸಾಧನೆಯ ಅಡಿಗಲ್ಲು ಎಂದು ಭಾವಿಸಬೇಕಾದ ರೀತಿಯಲ್ಲಿ ಇರಬೇಕಿದ್ದ ಕಲ್ಲುಗಳು ಕಾಣೆಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕಟ್ಟಡಗಳಲ್ಲಿಲ್ಲ ಉದ್ಘಾಟಕರ ವಿಳಾಸ 
ರಾಜಕೀಯ ಜಿದ್ದಾಜಿದ್ದಿ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ವಿಳಾಸವೇ ಇಲ್ಲದಂತಾಗಿದೆ. ಆದರೆ ಈ ಹಿಂದೆ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉದ್ಘಾಟನೆಯಾದ ಅಡಿಗಲ್ಲುಗಳು ಕಟ್ಟಡದ ಇತಿಹಾಸ ಹೇಳುತ್ತಿವೆ. ಅಡಿಗಲ್ಲು, ಉದ್ಘಾಟನೆಯ ದಿನ ಹಾಕುವ ಕಲ್ಲಿಗೂ ಮಹತ್ವ ಇಲ್ಲದಂತಾಗಿರುವ ಪರಿಣಾಮ ರಾಜಕೀಯ ಏಟಿಗೆ ಕಲ್ಲುಗಳು ಕಾಣೆಯಾಗುತ್ತಿವೆ.

ಅಡಿಗಲ್ಲು ಮಾಡಿಸಲಾಗಿತ್ತು. 20 ಸಾವಿರ ರೂ. ಖರ್ಚಾಗಿತ್ತು. ಯಾವುದೋ ಕಾರಣಕ್ಕೆ ಅದನ್ನು ಪ್ರತಿಷ್ಠಾಪನೆ ಮಾಡಿಲ್ಲ. ಅದು ತುಂಡಾದ ಹಿನ್ನೆಲೆಯಲ್ಲಿ ಎಲ್ಲೋ ಹೋಗಿದೆ.
ಆಶಾ, ಪಿಡಿಒ, ರಾಮತ್ನಾಳ ಗ್ರಾಪಂ

*ಯಮನಪ್ಪ ಪವಾರ

ಟಾಪ್ ನ್ಯೂಸ್

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.