ಎನ್ಸಿಸಿ ತಜ್ಞರ ಸಮಿತಿಯಲ್ಲಿ ಧೋನಿ
Team Udayavani, Sep 17, 2021, 7:50 AM IST
ಹೊಸದಿಲ್ಲಿ: ನ್ಯಾಶನಲ್ ಕೆಡೆಟ್ ಕೋರ್ (ಎನ್ಸಿಸಿ)ಯ ಸಮಗ್ರ ಪರಿಶೀಲನೆಗಾಗಿ ಕೇಂದ್ರ 15 ತಜ್ಞರ ಸಮಿತಿ ರಚಿಸಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿ ಅನೇಕರಿಗೆ ಸ್ಥಾನ ಕೊಡಲಾಗಿದೆ. ಮಾಜಿ ಸಂಸದ ಬೈಜಯಂತ್ ಪಾಂಡಾರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಉದ್ಯಮಿ ಆನಂದ್ ಮಹೀಂದ್ರಾ, ಮಾಜಿ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಸಮಿತಿಯಲ್ಲಿದ್ದಾರೆ.
ಎನ್ಸಿಸಿ ಕೆಡೆಟ್ಗಳು ರಾಷ್ಟ್ರ ನಿರ್ಮಾಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಪರಿಣಾಮಕಾರಿ ಕೊಡುಗೆ ನೀಡಲು ಸಮಿತಿಯು ಮಾರ್ಗದರ್ಶನ ನೀಡುತ್ತದೆ. ಹಳೆಯ ಅಭ್ಯರ್ಥಿಗಳನ್ನೂ ಜೋಡಿಸಿಕೊಳ್ಳುವ ಕೆಲಸವನ್ನು ಸಮಿತಿ ಮಾಡಲಿದೆ ಎಂದು ತಿಳಿಸಲಾಗಿದೆ.