ಬೀದರನಲ್ಲಿ 2,777 ಹೆಕ್ಟೇರ್ ಬೆಳೆಹಾನಿ
ಚಿಟಗುಪ್ಪದಲ್ಲಿ 10 ಹೆಕ್ಟೇರ್ ಹೆಸರು, 10 ಹೆಕ್ಟೇರ್ ಉದ್ದು ಸೇರಿ 20 ಹೆಕ್ಟೇರ್ ಬೆಳೆ ಹಾಳಾಗಿದೆ.
Team Udayavani, Sep 17, 2021, 6:35 PM IST
ಬೀದರ: ಜಿಲ್ಲೆಯಲ್ಲಿ ಕಳೆದ ಜು. ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ 391 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2,777 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾಳಾಗಿದ್ದು, ಒಟ್ಟಾರೆ 244 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಎಂಎಲ್ಸಿ ವಿಜಯಸಿಂಗ್ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ್ದಾರೆ. ಮಳೆಹಾನಿ ಕುರಿತು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. ಶೇ.33ಕ್ಕಿಂತ ಅಧಿಕ ಬೆಳೆ ಹಾಳಾದ ಪ್ರಕರಣಗಳಲ್ಲಿ ಸಂಬಂಧಿಸಿದ ರೈತರಿಗೆ ಎಸ್ಆರ್ಡಿಎಫ್, ಎನ್ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ಗರಿಷ್ಠ 2 ಹೆಕ್ಟೇರ್ಗೆ ಸೀಮಿತಗೊಳಿಸಿ ಇನ್ಪುಟ್ ಸಬ್ಸಿಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 6,800, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ಗೆ 13,500 ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ಗೆ 18,000 ರೂ. ಪರಿಹಾರ ಸಿಗಲಿದೆ. ಪ್ರವಾಹ ಪರಿಹಾರಕ್ಕಾಗಿ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾನಿ ವಿವರ: ಔರಾದ ತಾಲೂಕಿನಲ್ಲಿ 9.78 ಹೆಕ್ಟೇರ್ ಹೆಸರು, 9 ಹೆಕ್ಟೇರ್ ಉದ್ದು, 29.51 ಹೆಕ್ಟೇರ್ ತೊಗರಿ ಮತ್ತು 96.08 ಹೆಕ್ಟೇರ್ ಸೋಯಾ ಸೇರಿ ಒಟ್ಟು 144.4 ಹೆಕ್ಟೇರ್ ಬೆಳೆ ಹಾಳಾಗಿದೆ. ಕಮಲನಗರ ತಾಲೂಕಿನಲ್ಲಿ 8.11 ಹೆಕ್ಟೇರ್ ತೊಗರಿ ಮತ್ತು 3.41 ಹೆಕ್ಟೇರ್ ಸೋಯಾಬೀನ್ ಸೇರಿ 11.52 ಹೆಕ್ಟೇರ್ ಬೆಳೆ ಹಾಳಾಗಿದೆ. ಬೀದರ ತಾಲೂಕಿನಲ್ಲಿ ಹೆಸರು, ಉದ್ದು, ತೊಗರಿ, ಸೋಯಾ, ಕಬ್ಬು ಸೇರಿದಂತೆ ಯಾವುದೇ ಬೆಳೆ ಮಳೆಯಿಂದಾಗಿ ಹಾಳಾಗಿಲ್ಲ.
ಭಾಲ್ಕಿಯಲ್ಲಿ 331.82 ಹೆಕ್ಟೇರ್ ಹೆಸರು, 355 ಹೆಕ್ಟೇರ್ ಉದ್ದು, 405 ಹೆಕ್ಟೇರ್ ತೊಗರಿ ಮತ್ತು 827 ಹೆಕ್ಟೇರ್ ಸೋಯಾ ಸೇರಿ ಒಟ್ಟು 1919 ಹೆಕ್ಟೇರ್ ಬೆಳೆ ಹಾಳಾಗಿದೆ. ಬಸವಕಲ್ಯಾಣದಲ್ಲಿ 22.54 ಹೆಕ್ಟೇರ್ ಹೆಸರು, 15.68 ಹೆಕ್ಟೇರ್ ಉದ್ದು, 181.52 ಹೆಕ್ಟೇರ್ ತೊಗರಿ, 230 ಹೆಕ್ಟೇರ್ ಸೋಯಾ ಸೇರಿ ಒಟ್ಟು 450 ಹೆಕ್ಟೇರ್ ಗಳಷ್ಟು ಬೆಳೆ ಹಾಳಾಗಿದೆ. ಹುಲಸೂರಿನಲ್ಲಿ 4.68 ಹೆಕ್ಟೇರ್ ತೊಗರಿ ಮತ್ತು 41 ಹೆಕ್ಟೇರ್ ಸೋಯಾ ಹಾಳಾಗಿದೆ. ಮಳೆಯಿಂದ ಹಾಳಾಗಿರುವ ಕ್ಷೇತ್ರ ಒಟ್ಟು 45 ಹೆಕ್ಟೇರ್. ಹುಮನಾಬಾದನಲ್ಲಿ 16 ಹೆಕ್ಟೇರ್ ಹೆಸರು, 13 ಹೆಕ್ಟೇರ್ ಉದ್ದು, 9 ಹೆಕ್ಟೇರ್ ತೊಗರಿ ಮತ್ತು 12 ಹೆಕ್ಟೇರ್ ಸೋಯಾ ಸೇರಿ ಒಟ್ಟು 50 ಹೆಕ್ಟೇರ್ ಬೆಳೆ ಹಾಳಾಗಿದೆ.
ಚಿಟಗುಪ್ಪದಲ್ಲಿ 10 ಹೆಕ್ಟೇರ್ ಹೆಸರು, 10 ಹೆಕ್ಟೇರ್ ಉದ್ದು ಸೇರಿ 20 ಹೆಕ್ಟೇರ್ ಬೆಳೆ ಹಾಳಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 390 ಹೆಕ್ಟೇರ್ ಹೆಸರು, 402 ಹೆಕ್ಟೇರ್ ಉದ್ದು, 638 ಹೆಕ್ಟೇರ್ ತೊಗರಿ ಮತ್ತು 1,210 ಹೆಕ್ಟೇರ್ ಸೋಯಾ ಸೇರಿ ಒಟ್ಟು 2,641 ಹೆಕ್ಟೇರ್ ಬೆಳೆ ಹಾಳಾಗಿದೆ.ಇದನ್ನು ಹೊರತುಪಡಿಸಿ ಔರಾದ್ ತಾಲೂಕಿನಲ್ಲಿ 28 ಹೆಕ್ಟೇರ್, ಕಮಲನಗರ ತಾಲೂಕಿನಲ್ಲಿ 45 ಹೆಕ್ಟೇರ್, ಬಸವಕಲ್ಯಾಣ ತಾಲೂಕಿನಲ್ಲಿ 44 ಹೆಕ್ಟೇರ್, ಹುಲಸೂರು ತಾಲೂಕಿನಲ್ಲಿ 7 ಹೆಕ್ಟೇರ್ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್