ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಯಾವಾಗ?


Team Udayavani, Sep 20, 2021, 2:30 PM IST

Traffic problem

ಸಕಲೇಶಪುರ: ಪಟ್ಟಣ ವ್ಯಾಪ್ತಿಯ ಟ್ರಾμಕ್‌ ಸಮಸ್ಯೆತಾತ್ಕಾಲಿಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪಟ್ಟಣದ ಮುಖ್ಯ ರಸ್ತೆ ಸೇರಿದಂತೆಕೆಲವು ಒಳ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆನಿಷೇಧ ಹೇರಿದ್ದು, ಆದರೆ ಇದನ್ನುಅನುಷ್ಠಾನಗೊಳಿಸಲು ಪುರಸಭೆ ಹಾಗೂ ಪೋಲಿಸ್‌ಇಲಾಖೆ ಮುಂದಾಗದ ಕಾರಣ ಟ್ರಾμಕ್‌ ಕಿರಿಕಿರಿಎಂದಿನಂತೆ ಮುಂದುವರಿದಿದೆ.

ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಹೃದಯ ಭಾಗದಲ್ಲಿಹಾದುಹೋಗಿದ್ದು ದಿನನಿತ್ಯ ಸಾವಿರಾರುವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ.ಕಿರಿದಾದ ಮುಖ್ಯ ರಸ್ತೆಯ ಒಂದುಭಾಗದಲ್ಲಿ ವಾಹನಗಳ ನಿಲುಗಡೆಮಾಡುವುದು ಸಾಮಾನ್ಯವಾಗಿದ್ದು, ಇದರಿಂದಪಟ್ಟಣದಲ್ಲಿ ಟ್ರಾಫಿಕ್‌ಕಿರಿಕಿರಿಯಾಗುತ್ತಿತ್ತು.

ಈಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಧಿಕಾರಿ ಗಿರೀಶ್‌ ರವರು ಆ.31 ಹೊರಡಿಸಿ ಎನ್‌.ಎಚ್‌ 75ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯವಾಹನ ನಿಲುಗಡೆ ನಿಷೇಧಿಸಿದ್ದರು. ಅಲ್ಲದೆ ಪಟ್ಟಣದಹಳೆ ಸಂತೇವೇರಿ ಕ್ರಾಸ್‌ನಿಂದ ಪಶು ಆಸ್ಪತ್ರೆ ಕ್ರಾಸ್‌ವರೆಗೆ ರಸ್ತೆಯ ಬಲಭಾಗದಲ್ಲಿ ನಾಲ್ಕು ಚಕ್ರದವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಹಳೆಬಸ್‌ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವಪುರಸಭೆಯ ಕಟ್ಟಡದ ನೆಲಮಾಳಿಗೆಯ ಖಾಲಿಜಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶಕಲ್ಪಿಸುವುದು ಹಾಗೂ ಈ ಕಟ್ಟಡದ ಪಕ್ಕದಲ್ಲಿರುವಪುರಸಭೆಗೆ ಸೇರಿದ ಖಾಲಿ ಜಾಗದಲ್ಲಿತಾತ್ಕಾಲಿಕವಾಗಿ ನಾಲ್ಕು ಚಕ್ರದ ವಾಹನಗಳನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.

ಅಶೋಕ ರಸ್ತೆಯ ಮೆಗಾ ಟವರ್ಸ್‌ನಿಂದ ಬಿ.ಎನ್‌.ಆರ್‌ ಕಾಂಪ್ಲೆಕÕ…ವರೆಗೆ ಭಾನುವಾರ, ಮಂಗಳವಾರ,ಗುರುವಾರ ರಸ್ತೆಯ ಎಡಬದಿಯಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದರೆ,ಸೋಮವಾರ, ಬುಧವಾರ ಹಾಗೂ ಶನಿವಾರದಂದುರಸ್ತೆಯ ಬಲಭಾಗದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆಅವಕಾಶ ಕಲ್ಪಿಸಲಾಗಿದ್ದು, ಬಿ.ಎನ್‌.ಆರ್‌ ಕಾಂಪ್ಲೆಕÕ…ನಿಂದ ಎಸ್‌.ಎಂ ಟವರ್ಸ್‌ವರೆಗೆ ರಸ್ತೆಯ ಎರಡೂಬದಿಗಳಲ್ಲಿ ಪೂರ್ಣವಾಗಿ ಎಲ್ಲಾ ರೀತಿಯ ವಾಹನಸಂಚಾರ ನಿಷೇಧಿಸಲಾಗಿತ್ತು. ಜೇನು ಸೊಸೈಟಿಕಟ್ಟಡದಿಂದ ಕುಶಾಲನಗರಕ್ಕೆ ಹೋಗುವ ರಸ್ತೆಯಲ್ಲಿಮಂಜ್ರಾಬಾದ್‌ ಕ್ಲಬ್‌ ಕ್ರಾಸ್‌ವರೆಗೆ ರಸ್ತೆಯಬಲಬದಿಯಲ್ಲಿ ಚತುತ್ಛಕ್ರ ವಾಹನಗಳ ನಿಲುಗಡೆಗೆಅವಕಾಶ ಕಲ್ಪಿಸಲಾದರೆ ಎಡಭಾಗದಲ್ಲಿ ಎಲ್ಲಾ ರೀತಿಯವಾಹನ ಸಂಚಾರ ನಿಷೇಧಿಸಲಾಗಿತ್ತು.

ಎಸ್‌.ಎಂ ಟವರ್ಸ್‌ನ ವೃತ್ತದಿಂದ ಕಾಸ್ಮೋಪಾಲಿಟನ್‌ ಕ್ಲಬ್‌ವರೆಗೆ ರಸ್ತೆಯ ಎಡಬದಿಯಲ್ಲಿನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶಕಲ್ಪಿಸಲಾಗಿದ್ದು, ಬಲಭಾಗದಲ್ಲಿ ಸಂಪೂರ್ಣವಾಗಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇದಿಸಲಾಗಿತ್ತು.ಕುಶಾಲನಗರ ರಸ್ತೆಯಲ್ಲಿರುವ ಓಂ ಶಕ್ತಿ ಬಾಳೆಹಣ್ಣುಅಂಗಡಿಯಿಂದ ಬಿ.ಎಂ ರಸ್ತೆ ರಾಷ್ಟ್ರೀಯ ಹೆ¨ªಾರಿಸಂಪರ್ಕಿಸುವ ರಸ್ತೆಯ ರಾಜಲಕ್ಷ್ಮೀ ಟ್ರೇಡಸ್‌ìನವರೆಗೆ ರಸ್ತೆಯ ಪೂರ್ವಭಾಗದಲ್ಲಿ ದ್ವಿಚಕ್ರ ವಾಹನನಿಲುಗಡೆ, ಎಸ್‌ಎಂ ಟವರ್ಸ್‌ ನಿಂದ ಹಳೇ ಬಸ್‌ನಿಲ್ದಾಣದ ಪುರಸಭೆ ನಿರ್ಮಾಣ ಹಂತದಲ್ಲಿರುವಕಟ್ಟಡದ ಪಕ್ಕದ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್‌ ನಿಷೇಧಿಸಲಾಗಿತ್ತು.

ಆಜಾದ್‌ ರಸ್ತೆಯ ಭುವನೇಶ್ವರಿ ವೃತ್ತದಿಂದ ಬಿ.ಎಂರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಪೂರ್ವ ಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆಅವಕಾಶ ಕಲ್ಪಿಸಲು ಆದೇಶದಲ್ಲಿ ಡೀಸಿ ತಿಳಿಸಿದ್ದರು.ಮೆಗಾ ಟವರ್ಸ್‌ನಿಂದ ಶಾಪ್‌ ಸಿದ್ದೇಗೌಡ ಶಾಲೆಮುಖಾಂತರ ರಾಷ್ಟ್ರೀಯ ಹೆದ್ದಾರೆ ಸಂಪರ್ಕಿಸುವರಸ್ತೆಯ ಪೂರ್ವ ಭಾಗದಲ್ಲಿ ನಾಲ್ಕು ಚಕ್ರದ ವಾಹನನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಇದನ್ನು ಗೌರಿಗಣೇಶ ಹಬ್ಬದ ನಂತರ ಅನುಷ್ಠಾನಕ್ಕೆತರಲಾಗುತ್ತದೆಂದು ಹೇಳಲಾಗಿತ್ತು. ಇದೀಗ ಗೌರಿಗಣೇಶ ಹಬ್ಬ ಮುಗಿದು ಹಲವು ದಿನ ಕಳೆದರೂ ಸಹ ಜಿಲ್ಲಾಧಿಕಾರಿಗಳ ಆದೇಶವನ್ನು ಅನುಷ್ಠಾನಗೊಳಿಸಲುಪುರಸಭೆ ಹಾಗೂ ಪೋಲಿಸ್‌ ಇಲಾಖೆ ಮುಂದಾಗದಕಾರಣ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.2 ವಾರಗಳ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದವೀಕೆಂಡ್‌ ಕರ್ಫ್ಯೂ ಆದೇಶವನ್ನು ಅನುಷ್ಠಾನಗೊಳಿಸಲುತಾಲೂಕು ಆಡಳಿತ ವಿಫ‌ಲವಾಗಿತ್ತು. ಈ ಹಿನ್ನೆಲೆಯಲ್ಲಿತಾಲೂಕು ಆಡಳಿತ ಕೂಡಲೆ ಎಚ್ಚೆತ್ತು ಜಿಲ್ಲಾಧಿಕಾರಿಗಳ ಪಾಲನೆ ಮಾಡಲುಮುಂದಾಗಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.