48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು
Team Udayavani, Sep 20, 2021, 4:08 PM IST
ತೆಲಂಗಾಣ : ಮುತ್ತಿನ ನಗರಿ ಹೈದರಾಬಾದ್ನಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಗಣಪತಿಗೆ ನೈವೆದ್ಯ ಮಾಡಲಾದ ಲಡ್ಡು ಹರಾಜು ಪ್ರಕ್ರಿಯೆ ದೊಡ್ಡ ಮಟ್ಟದದದಲ್ಲಿ ನಡೆದಿದೆ. ಒಂದು ಲಡ್ಡು 48 ಲಕ್ಷ ರೂ.ಗೆ ಹರಾಜು ಆಗಿದೆ.
ಹೈದರಾಬಾದ್ ನಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿಯ ಮತ್ತೊಂದು ವಿಶೇಷ ಏನೆಂದರೆ ‘ಲಡ್ಡು’ ನೈವೆದ್ಯ. ಗಣಪತಿಗೆ ‘ಮೋದಕ’ ಇಷ್ಟ ಎಂದು ಹೇಳುತ್ತಾರೆ. ಆದರೆ, ಇಲ್ಲಿ ‘ಲಾಡು’ ವಿಶೇಷ ಪ್ರಸಾದ್ ವಾಗಿ ಪರಿಗಣಿಸಲಾಗುತ್ತದೆ.
ಹೈದರಾಬಾದಿನ್ ಪ್ರಮುಖ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶನಿಗೆ ನೈವೆದ್ಯ ಹಾಗೂ ಪ್ರಸಾದ ರೂಪದಲ್ಲಿ ಲಡ್ಡುಗಳನ್ನು ಇಡಲಾಗುತ್ತದೆ. ಗಣಪತಿಯ ವಿಸರ್ಜನಾ ದಿನ ಅವುಗಳನ್ನು ಹರಾಜು ಮಾಡಲಾಗುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ನಗರದ ಜನ ಪಾಲ್ಗೊಂಡು ಲಕ್ಷಾಂತರ ರೂ. ನೀಡಿ ಪಡೆದುಕೊಳ್ಳುತ್ತಾರೆ. ಈ ವರ್ಷವು (ಭಾನುವಾರ) ಕೂಡ ಇಲ್ಲಿಯ ರಾಜೇಂದ್ರ ನಗರದ ಕೀರ್ತಿ ರಿಚ್ಮಂಡ್ ಸರ್ಕಲ್ನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಲಡ್ಡು 48 ಲಕ್ಷ ರೂಪಾಯಿಗೆ ಹರಾಜು ಆಗಿದೆ. ಗೇಟೆಡ್ ಸಮುದಾಯದ 82 ನಿವಾಸಿಗಳು ಹರಾಜಿನಲ್ಲಿ ಭಾಗವಹಿಸಿದ್ದರು. ಅವರಲ್ಲಿ ಒಬ್ಬರು ಲಡ್ಡುವನ್ನು 48 ಲಕ್ಷ ರೂ.ಗೆ ಪಡೆದುಕೊಂಡರು. ಕಳೆದ ವರ್ಷ ಈ ಗಣಪತಿಯ ಲಡ್ಡು 27.3 ಲಕ್ಷಕ್ಕೆ ಹರಾಜಾಗಿತ್ತು, 2019 ರಲ್ಲಿ 18.7 ಲಕ್ಷ ರೂ.ಗೆ ಬಿಡ್ ಆಗಿತ್ತು. ಅದರಂತೆ ಬಲಾಪುರ ಗಣತಪಿ ಲಡ್ಡು 18.90 ಲಕ್ಷ ರೂ.ಗೆ ಹರಾಜು ಆಗಿದೆ. ಶಶಾಂಕ್ ರೆಡ್ಡಿ ಎಂಬುವರು ಈ ಲಡ್ಡು ಪಡೆದುಕೊಂಡಿದ್ದಾರೆ.
ಇನ್ನು ಬಿಡ್ನಲ್ಲಿ ಲಡ್ಡು ಪಡೆದವರಿಗೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ ಇದೆ. 1994 ರಿಂದ ಲಡ್ಡು ಹರಾಜು ನಡೆದುಕೊಂಡು ಬರುತ್ತಿದೆ. 1994 ರಲ್ಲಿ ನಡೆದ ಮೊದಲು ಹರಾಜು ಪ್ರಕ್ರಿಯೆಲ್ಲಿ 450ರೂ.ಗೆ ಒಂದು ಲಡ್ಡು ಮಾರಾಟ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ