ಶಿಥಿಲಗೊಂಡ ಸೇತುವೆ; ಕುಸಿಯುವ ಆತಂಕ

ವಾಹನದಟ್ಟಣೆಯಿಂದಲೂ ಸೇತುವೆ ಹಾಳು; ಅವಘಡ ಸಂಭವಿಸುವ ಮುನ್ನಎಚ್ಚರ ಅಗತ್ಯ

Team Udayavani, Sep 21, 2021, 6:37 PM IST

ಶಿಥಿಲಗೊಂಡ ಸೇತುವೆ; ಕುಸಿಯುವ ಆತಂಕ

ಬಾಳೆಹೊನ್ನೂರು: ಸಮೀಪದ ಹಿರೇಗದ್ದೆ ಗ್ರಾ.ಪಂ ವ್ಯಾಪ್ತಿಯ ಕೊಪ್ಪ- ಮೇಲ್ಪಾಲ್‌- ಬಾಳೆಹೊನ್ನೂರು ಮುಖ್ಯರಸ್ತೆಯಲ್ಲಿರುವ ‌ ಅರಳೀಕೊಪ್ಪ ಕೈಮರ ಎಂಬಲ್ಲಿರುವ ಸೇತುವೆಯು ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ.

ಅರಳೀಕೊಪ್ಪ- ಕೈಮರದಲ್ಲಿ ಮುಖ್ಯರಸ್ತೆ ಬಳಿ ಹರಿಯುವ ಹಳ್ಳಕ್ಕೆ ಕಳೆದ 50 ವರ್ಷಗಳ ಹಿಂದೆ ಸುಣ್ಣ ಬೆಲ್ಲ ಮರಳಿನ ಗಾರೆ ಬಳಸಿ ಕಲ್ಲು ಕಟ್ಟಿ ಉತ್ತಮ ಗುಣಮಟ್ಟದಲ್ಲಿ ಸೇತುವೆಯೊಂದನ್ನು ನಿರ್ಮಿಸಿದ್ದು ಇದೀಗ ಸೇತುವೆ ನಿರ್ವಹಣೆಯಿಲ್ಲದೆ ಶಿಥಿಲಗೊಳ್ಳುತ್ತಿದೆ.

ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿದ್ದ ಸೇತುವೆ ದೀರ್ಘ‌ ಬಾಳಿಕೆಯ ಬಳಿಕ ಹಾಗೂ ಇತ್ತೀಚೆಗೆ ಹೆಚ್ಚಿದ ವಾಹನಗಳ ದಟ್ಟಣೆಯಿಂದಲೂ ಅದರ
ಆಯಸ್ಸು ಕಡಿಮೆಗೊಳ್ಳುತ್ತಿದೆ. ಇದರ ‌ ನಡುವೆ ಕಳೆದ ಹಲವು ವರ್ಷಗಳಿಂದ ಈ ಸೇತುವೆಯನ್ನು  ಸಂಬಂಧಪಟ್ಟ ಇಲಾಖೆಯವರು ಸಮರ್ಪಕವಾಗಿ ನಿರ್ವಹಣೆ ಮಾಡದ ‌ ಪರಿಣಾಮ ಸೇತುವೆಯ ಆಯಸ್ಸು ಇನ್ನಷ್ಟು ಕಡಿಮೆಗೊಳ್ಳುತ್ತಿದೆ.

ಕಳೆದ ಕಳೆದ ಕೆಲ ವರ್ಷಗಳಿಂದ ನಿರ್ವಹಣೆಯಾಗದ ಕಾರಣ ಸೇತುವೆಯ ಬೃಹತ್‌ ಗಾತ್ರದ ಪಿಲ್ಲರ್‌ಗಳ ನಡುವೆ ಹಾಗೂ ಸೇತುವೆಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಕಾಡು ಮರಗಳು ಬೆಳೆಯುತ್ತಿದೆ. ಇದರಿಂದಾಗಿ ಸೇತುವೆಯಲ್ಲಿ ಬಿರುಕು ಬರಲು ಪ್ರಾರಂಭವಾಗಿದೆ. ಮರ ‌ ಬೆಳೆದು ಬಿರುಕು ಬರುತ್ತಿರುವ ಕಾರಣ ಸೇತುವೆ ಮುಂದೊಂದು ಸೇತುವೆ ಕುಸಿತಗೊಂಡರೂ ಅಚ್ಚರಿಯಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದರ ನಡುವೆ ಮೇಲ್ಭಾಗದಲ್ಲಿ ಸೇತುವೆಯ ಕೈಪಿಡಿಗಳು ಸಹ ಮುರಿದಿದ್ದು ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಇದನ್ನೂ ಓದಿ:ಸೆ.27ರ ಭಾರತ್‌ ಬಂದ್‌ ಬೆಂಬಲಿಸಲು ರೈತ ಸಂಘಟನೆಗಳ ನಿರ್ಧಾರ

ಮುಖ್ಯರಸ್ತೆಯಲ್ಲಿಯೇ ಸೇತುವೆ ಇದ್ದು, ಇದರ ಒಂದು ಬದಿಯ ಕೈಪಿಡಿಯ ಅಡ್ಡಗೋಡೆಗಳು ಮುರಿದು ಹೋಗಿ 4 ವರ್ಷಗಳೇ ಕಳೆದಿವೆ. ಬೈಕ್‌ ಮತ್ತು ಕಾರು ಸೇರಿದಂತೆ ಸಣ್ಣ ಪುಟ್ಟ ವಾಹನಗಳು ನಿಯಂತ್ರಣ ತಪ್ಪಿದರೆ ಕೆಳಗಿನ ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸುವುದು ಖಚಿತವಾಗಿದೆ. ಇನ್ನು ಈ ಸೇತುವೆ ಮೇಲೆ ರಾತ್ರಿ ವೇಳೆಯಲ್ಲಿ ಸಂಚರಿಸುವ ಪಾದಚಾರಿಗಳು ಆಯ ತಪ್ಪಿದರೆ ಕೆಳಗೆ ಬಿದ್ದು ಅವಘಡ ನಡೆಯಲಿದೆ.ಸೇತುವೆ ಕೈಪಿಡಿಗಳು ಮುರಿದಿರುವ ಕಾರಣ ಸ್ಥಳೀಯರೇ ಕೈಪಿಡಿ ಇರುವ ಜಾಗಕ್ಕೆ ತಂತಿಗಳನ್ನು ಕಟ್ಟಿ ವಾಹನ ಚಾಲಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಮುಖ್ಯರಸ್ತೆಯ ಸೇತುವೆ ಶಿಥಿಲಾವಸ್ಥೆಗೆ ತಲುಪುತ್ತಿದ ªರೂ ಸಹ ಸಂಬಂಧಪಟ್ಟ ಇಲಾಖೆ ಈ ಕುರಿತು ಇನ್ನೂ ಸಹ ಗಮನಹರಿಸಿಲ್ಲ. ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತು ಸಂಬಂಧಿಸಿದ ಇಲಾಖೆ ಗಮನ ಹರಿಸಲಿದೆಯೇ ಕಾದು ನೋಡಬೇಕಿದೆ.

ಐವತ್ತು ವರ್ಷಗಳ ಹಿಂದೆ ಹಿಂದಿನ ಅತ್ಯುತ್ತಮ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಸೇತುವೆಯನ್ನು ಸಂಬಂಧಪಟ್ಟ ಇಲಾಖೆಕೂಡಲೇ ನಿರ್ವಹಣೆ ಮಾಡಿ ರಕ್ಷಣೆ ಮಾಡಬೇಕಿದೆ. ಸುಣ್ಣ, ಬೆಲ್ಲ, ಮರಳಿನ ಗಾರೆ ಬಳಸಿ ನಿರ್ಮಿಸಿರುವ ಸೇತುವೆ ಇನ್ನೂ ಉತ್ತಮ ಸ್ಥಿತಿಯಲ್ಲಿದ್ದು ಬೆಳೆಯುತ್ತಿರುವ ಮರಗಳನ್ನುಕಡಿದು ಸುಣ್ಣ ಬಣ್ಣ ಮಾಡಿ, ಸೇತುವೆಯಕೈಪಿಡಿಗಳನ್ನು ಹೊಸದಾಗಿ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
– ಸತೀಶ್‌,ಅರಳೀಕೊಪ್ಪ ಗ್ರಾಮಸ್ಥ

ಕೊಪ್ಪ-ಮೇಲ್ಪಾಲ್‌ ರಸ್ತೆಯ ನಿರ್ವಹಣೆಯನ್ನು ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯವರು ನೋಡಿಕೊಳ್ಳುತ್ತಿದ್ದು, ಸೇತುವೆ ನಿರ್ವಹಣೆಯನ್ನು ಮಾಡುತ್ತಿರಲಿಲ್ಲ. ಈಗ ಕಳೆದ ಆರು ತಿಂಗಳಿನಿಂದ ರಸ್ತೆ ನಿರ್ವಹಣೆಯನ್ನು ಇಲಾಖೆಗೆ ವಾಪಸ್‌ ನೀಡಲಾಗಿದೆ. ಅರಳೀಕೊಪ್ಪ ಸೇತುವೆಯಕೈಪಿಡಿ ಇಲ್ಲದ ಬಗ್ಗೆ ಗಮನಕ್ಕೆ ಬಂದಿದ್ದು, ಸೇತುವೆ ಇಕ್ಕೆಲಗಳಲ್ಲಿ ಮರಗಿಡ ಬೆಳೆದು ಬಿರುಕು ಬರುತ್ತಿರುವ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ದಾವೂದ್‌,
ಪಿಡಬ್ಲ್ಯೂ ಡಿ ಎಂಜಿನಿಯರ್‌,ಕೊಪ್ಪ ವಿಭಾಗ

ಟಾಪ್ ನ್ಯೂಸ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.