ಮೂಲ್ಕಿ-ಕಟೀಲು ಬೈಪಾಸ್‌; ಇನ್ನೂ ಅಂತಿಮವಾಗದ “ಪಥ’ ನಿರ್ಧಾರ!


Team Udayavani, Sep 22, 2021, 3:20 AM IST

Untitled-1

ಮಹಾನಗರ: ದ.ಕ. ಜಿಲ್ಲೆಯ ಬಹುನಿರೀಕ್ಷಿತ ಮೂಲ್ಕಿಯಿಂದ ಕಿನ್ನಿಗೋಳಿ, ಕಟೀಲು, ಕೈಕಂಬ, ಪೊಳಲಿ, ಬಿ.ಸಿ. ರೋಡ್‌, ಮುಡಿಪು, ತೊಕ್ಕೊಟ್ಟು ಹಾಲಿ ಮಾರ್ಗನಕ್ಷೆಯಲ್ಲಿ ಸುಸಜ್ಜಿತ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು 2 ವರ್ಷ ಸಂದರೂ ರಸ್ತೆ ಹಾದು ಹೋಗುವ “ಪಥ ನಿರ್ಧಾರ’ ಮಾತ್ರ ಹೆದ್ದಾರಿ ಇಲಾಖೆಯಿಂದ ಇನ್ನೂ ಅಂತಿಮವಾಗಿಲ್ಲ!

ಶಿಲಾನ್ಯಾಸ ನಡೆಯುವ ಸಂದರ್ಭ ಸಿದ್ಧಪಡಿಸಿದ ಡಿಪಿಆರ್‌ಗೆ ಒಪ್ಪಿಗೆ ದೊರಕಿದ್ದರೂ, ಆ ಬಳಿಕ ವೆಚ್ಚ ಕಡಿಮೆ/ ಪರಿಸರ ಸ್ನೇಹಿ ಕಾರಣದಿಂದ ಹಳೆ ಡಿಪಿಆರ್‌ ಬಿಟ್ಟು ಹೊಸ ರೂಟ್‌ನಲ್ಲಿ “ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌’ ಆಗಿ ಹೆದ್ದಾರಿ ನಿರ್ಮಿಸಲು ಇಲಾಖೆ ಆಸಕ್ತಿ ತೋರಿದ ಕಾರಣದಿಂದ ಯಾವ ಪಥ ಅಂತಿಮ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆದರೂ, ಹೆದ್ದಾರಿ ಇಲಾಖೆಯ ಮೂಲಗಳ ಪ್ರಕಾರ ಎರಡನೇ ಆಯ್ಕೆ ಕೈಬಿಟ್ಟು ಹಳೆಯ ಡಿಪಿಆರ್‌ ಮಾದರಿಯಲ್ಲಿಯೇ ರಸ್ತೆ ನಿರ್ಮಿಸಲು ಹೆದ್ದಾರಿ ಇಲಾಖೆ ಈಗ ಒಲವು ತೋರಿಸುತ್ತಿದ್ದು, ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.

ಈಗಾಗಲೇ ಡಿಪಿಆರ್‌ ಸಿದ್ಧಪಡಿಸಿದ ರಿಂಗ್‌ ರಸ್ತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು 2019ರ ಮಾ. 5ರಂದು ಶಿಲಾನ್ಯಾಸ ಮಾಡಿದ್ದರು. ಈ ಮಾರ್ಗನಕ್ಷೆ ಪ್ರಕಾರ ಹಾಲಿ ಇರುವ ರಸ್ತೆಗಳನ್ನೇ ವಿಸ್ತರಣೆಗೊಳಿಸಿ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು.

ಏನಿದು 2 ಪಥ ?:

91.20 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾ.ಹೆ. ಪ್ರಾಧಿಕಾರವು ಡಿಪಿಆರ್‌ ಅನ್ನು ತಯಾರಿಸಿ, ಪ್ರಾಧಿಕಾರದ ಕೇಂದ್ರ ಕಚೇರಿಯು 2017ರಲ್ಲಿ ಅನುಮೋದನೆ ನೀಡಿ, ಸ್ಟುಫ್‌ ಕನ್ಸಲ್ಟೆನ್ಸಿ ಪ್ರೈ.ಲಿ. ಅಧಿಕಾರಿಗಳು ಸರ್ವೇ ವರದಿ ಕೂಡ ಸಲ್ಲಿಸಿದ್ದರು. ಈ ರಸ್ತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು 2019ರ ಮಾ. 5ರಂದು ಶಿಲಾನ್ಯಾಸ ಕೂಡ ಮಾಡಿದ್ದರು. ಆದರೆ, ಪರಿಹಾರ ಹಾಗೂ ಯೋಜನೆ ವೆಚ್ಚವು ದುಪ್ಪಟ್ಟಾಗುತ್ತಿರುವ ಹಿನ್ನೆಲೆಯಲ್ಲಿ ಅನುಮೋದನೆ ನೀಡುವಲ್ಲಿ ತಡವಾಗಿತ್ತು.

ಇದೇ ಸಂದರ್ಭ ದೇಶದ ಎಲ್ಲ ಕಡೆಗಳಲ್ಲಿ ಹೊಸದಾಗಿ ಮಾಡುವ ರಿಂಗ್‌ ರಸ್ತೆ/ವರ್ತುಲ ರಸ್ತೆಯನ್ನು ಹಾಲಿ ರಸ್ತೆಯ ಪಕ್ಕ ಮಾಡುವ ಬದಲು ಹೊಸದಾಗಿ “ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌’ ಎಂಬ ಮಾದರಿಯಲ್ಲಿ ಮಾಡಲು ಹೆದ್ದಾರಿ ಇಲಾಖೆ ನಿರ್ಧರಿಸಿತು. ಹೀಗಾಗಿ ಅನುಮೋದನೆಗೆ ಹೋಗಿದ್ದ ಮೂಲ್ಕಿ-ಕಟೀಲು-ತೊಕ್ಕೊಟ್ಟು ರಸ್ತೆ ಬಾಕಿಯಾಗಿತ್ತು. ಬದಲಾಗಿ ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌ ಮಾದರಿಯಲ್ಲಿ ಹೊಸ ಡಿಪಿಆರ್‌ ಸಿದ್ಧಪಡಿಸುವಂತೆ ಸಚಿವಾಲಯವು ರಾ. ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಗೆ ನಿರ್ದೇಶಿಸಿತ್ತು.

ಗ್ರೀನ್‌ ಫೀಲ್ಡ್‌ಗೆ ಆಕ್ಷೇಪ:

ಗ್ರೀನ್‌ ಫೀಲ್ಡ್‌ ಮಾದರಿಯು ಹಾಲಿ ಮುಖ್ಯ ರಸ್ತೆ ಹೊರತುಪಡಿಸಿ ಹೊಸದಾಗಿಯೇ ಇತರ ಭಾಗ ದಲ್ಲಿಯೇ ಹೋಗಲಿದೆ. ಜತೆಗೆ ಕರಾವಳಿ ಭಾಗದಲ್ಲಿ ಅರಣ್ಯ, ಗುಡ್ಡಗಾಡು ಪ್ರದೇಶ ಇರುವುದರಿಂದ ಹೊಸ ರಸ್ತೆ ಅಲ್ಲಿಂದ ಹಾದುಹೋದರೆ ಸ್ಥಳೀಯ ಜನರಿಗೆ ಉಪಯೋಗವಾಗದು. ಜತೆಗೆ ವೆಚ್ಚ ಕೂಡ ಅಧಿಕವಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರೀನ್‌ ಫೀಲ್ಡ್‌ ಚಿಂತನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೂಡ ಈಗಾಗಲೇ ಪ್ರಸ್ತಾವಿತ ನೂತನ ವರ್ತುಲ ರಸ್ತೆಯ ಮಾರ್ಗನಕ್ಷೆ (ಅಲೈನ್‌ಮೆಂಟ್‌) ಯನ್ನು ಬದಲಿಸಿದರೆ ಒಪ್ಪಲು ಆಗುವುದಿಲ್ಲ ಎಂದು ಈಗಾಗಲೇ ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.

ಏನಿದು ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್‌?:

ಈಗಿರುವ ರಸ್ತೆಯಲ್ಲೇ ಬೈಪಾಸ್‌/ರಿಂಗ್‌ ರಸ್ತೆ ನಿರ್ಮಿಸು ವುದಾದರೆ ಅದರ ಇಕ್ಕೆಲಗಳ ಮನೆ, ಅಂಗಡಿ, ಶಾಲೆ ಇತ್ಯಾದಿ ಕಟ್ಟಡ ಬೆಲೆಬಾಳುವ ಜಾಗದ ಭೂಸ್ವಾಧೀನಕ್ಕೆ ಬಹುವೆಚ್ಚ ತಗಲುತ್ತದೆ. ಹೀಗಾಗಿ ಕಟ್ಟಡ, ಶಾಲೆ, ಮನೆ, ಮುಖ್ಯ ಭೂಮಿ, ನೀರಾವರಿ ಪ್ರದೇಶ, ಕೈಗಾರಿಕೆಗಳೆಲ್ಲವನ್ನು ಹೊರತುಪಡಿಸಿ “ಗ್ರೀನ್‌’ ಭಾಗದಲ್ಲಿ ಪರಿಸರಕ್ಕೆ ಪೂರಕವಾಗಿ ರಸ್ತೆ ನಿರ್ಮಿಸುವುದೇ ಈ ಪರಿಕಲ್ಪನೆ. ಹೀಗೆ ಮಾಡುವುದಾದರೆ ಭೂಸ್ವಾಧೀನ ಸಮಸ್ಯೆ ಬಹುವಾಗಿ ನಿವಾರಣೆಯಾಗಲಿದೆ ಎಂಬುದು ಹೆದ್ದಾರಿ ಇಲಾಖೆಯ ಲೆಕ್ಕಾಚಾರ.

ಮೂಲ್ಕಿ-ಕಟೀಲು ಬೈಪಾಸ್‌ ರಸ್ತೆಯು ಡಿಪಿಆರ್‌ ಹಂತದಲ್ಲಿದೆ. ಮೊದಲ ಮಾರ್ಗನಕ್ಷೆ ಹಾಗೂ ಗ್ರೀನ್‌ ಫೀಲ್ಡ್‌ ಎಂಬ ಎರಡು ಸಾಧ್ಯತೆಗಳ ಬಗ್ಗೆ ಕೇಂದ್ರ ಹೆದ್ದಾರಿ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.ಶಿಶುಮೋಹನ್‌, ಯೋಜನಾ ನಿರ್ದೇಶಕರು, ರಾ.ಹೆ. ಪ್ರಾಧಿಕಾರ ಮಂಗಳೂರು.

 

-ದಿನೇಶ್‌ ಇರಾ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.