ಹೀಗೂ ಉಂಟೆ; ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿಗೆ ವಿಚಿತ್ರ ಶಿಕ್ಷೆ ವಿಧಿಸಿದ ನ್ಯಾಯಾಧೀಶರು
ಆತನನ್ನು ಕ್ಷಮಿಸಬೇಕೆಂದು ವಕೀಲರು ಈತನ ಪರ ವಾದಿಸಿದ್ದರು.
Team Udayavani, Sep 24, 2021, 1:31 PM IST
ಪಾಟ್ನಾ: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ ಆರೋಪಿಗೆ ಬಿಹಾರದ ಮಧುಬನಿ ಕೋರ್ಟ್ ಹುಬ್ಬೇರಿಸುವಂತಹ ವಿಚಿತ್ರ ಶಿಕ್ಷೆಯನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಎಸಗಲು ಯತ್ನಿಸಿರುವ ಆರೋಪಿ ಆರು ತಿಂಗಳ ಕಾಲ ಇಡೀ ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿ ಕೊಡಬೇಕೆಂದು ನ್ಯಾಯಾಧೀಶರು ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಜಂಜಾರ್ಪುರ್ ನ್ಯಾಯಾಲಯದ ಎಡಿಜೆ ಅವಿನಾಶ್ ಕುಮಾರ್ ಅವರು, ಆರೋಪಿ ಲಾಲನ್ ಕುಮಾರ್ ಶಫಿಗೆ ಸಂತ್ರಸ್ತೆ ಮಹಿಳೆ ಸೇರಿದಂತೆ ಇಡೀ ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು ಕೊಡಬೇಕೆಂಬ ಷರತ್ತಿನ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.
20 ವರ್ಷದ ಆರೋಪಿ ಶಫಿ ಬಟ್ಟೆ ತೊಳೆಯುವ ವೃತ್ತಿ ಮಾಡುತ್ತಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪದಲ್ಲಿ ಏಪ್ರಿಲ್ ನಲ್ಲಿ ಪೊಲೀಸರು ಬಂಧಿಸಿದ್ದರು. ಈತ ಯುವಕನಾಗಿದ್ದು, ಆತನನ್ನು ಕ್ಷಮಿಸಬೇಕೆಂದು ವಕೀಲರು ಈತನ ಪರ ವಾದಿಸಿದ್ದರು. ತನ್ನ ವೃತ್ತಿಯ ಮೂಲಕ ಸಮಾಜದಲ್ಲಿ ಸೇವೆ ಮಾಡುವ ಇಚ್ಛೆಯನ್ನೂ ತನ್ನ ಕಕ್ಷಿದಾರ ಹೊಂದಿರುವುದಾಗಿ ವಕೀಲರು ಕೋರ್ಟ್ ಗೆ ತಿಳಿಸಿದ್ದರು. ಬಳಿಕ ನ್ಯಾಯಾಧೀಶರು ಇಡೀ ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು ಕೊಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದ್ದರು.
ಬಟ್ಟೆಯನ್ನು ತೊಳೆಯುವುದು ಹಾಗೂ ಇಸ್ತ್ರಿ ಹಾಕಿ ಕೊಡುವುದು ಸೇರಿದಂತೆ ಆರೋಪಿ ತಲಾ 10,000 ರೂಪಾಯಿ ಮೊತ್ತದ ಎರಡು ಭದ್ರತೆಯನ್ನು ನೀಡುವಂತೆ ಕೋರ್ಟ್ ಆರೋಪಿ ಶಫಿಗೆ ತಿಳಿಸಿದೆ. ಆರು ತಿಂಗಳ ಬಳಿಕ ಈತನ ಉಚಿತ ಸೇವೆಯ ಬಗ್ಗೆ ಗ್ರಾಮದ ಮುಖ್ಯಸ್ಥ ಅಥವಾ ಯಾವುದೇ ಸರ್ಕಾರಿ ಅಧಿಕಾರಿ ನೀಡುವ ಪ್ರಮಾಣಪತ್ರವನ್ನು ಕೋರ್ಟ್ ಗೆ ಹಾಜರುಪಡಿಸಬೇಕು ಎಂದು ನಿರ್ದೇಶನ ನೀಡಿದೆ.
ಜಂಜಾರ್ಪುರ್ ನ್ಯಾಯಾಲಯದ ಎಡಿಜೆ ಅವಿನಾಶ್ ಕುಮಾರ್ ಅವರು ಈ ಹಿಂದೆಯೂ ಇಂತಹ ವಿಲಕ್ಷಣ ರೀತಿಯ ಆದೇಶಗಳನ್ನು ನೀಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಶಾಲೆಯನ್ನು ತೆರೆದಿದ್ದ ಆರೋಪ ಎದುರಿಸಿದ್ದ ಶಿಕ್ಷಕಿಯೊಬ್ಬರಿಗೆ ಇಡೀ ಗ್ರಾಮದ ಮಕ್ಕಳಿಗೆ ಉಚಿತವಾಗಿ ಪಾಠ ಕಲಿಸುವಂತೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ