ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಕಲಾ ಶಿಕ್ಷಕರು ತಿಂಗಳಿಗೊಂದು ಸಭೆ ನಡೆಸುವುದಕ್ಕೆ ಈ ಹಿಂದೆ ಇಲಾಖೆಯೇ ಆದೇಶ ಹೊರಡಿಸಿತ್ತು.

Team Udayavani, Sep 24, 2021, 6:15 PM IST

ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಸಿಂಧನೂರು: ಸರಕಾರಿ ಶಾಲೆಗಳು ಬರೀ ಸುಣ್ಣ-ಬಣ್ಣ ಅಷ್ಟೇ ಅಲ್ಲ; ಇದೀಗ ಗ್ರಾಮೀಣ ಜೀವನ ಶೈಲಿ ಬಿಂಬಿಸುವ ಚಿತ್ರಗಳೊಂದಿಗೆ ಮಕ್ಕಳನ್ನು ಆಕರ್ಷಿಸಲಾರಂಭಿಸಿವೆ. ತಾಲೂಕಿನ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಹೊಸ ಮೆರಗು ನೀಡಲಾಗುತ್ತಿದೆ. ಚಿತ್ರಕಲಾ ಶಿಕ್ಷಕರು ತಮ್ಮ ದೈನಂದಿನ ಕೆಲಸದೊಟ್ಟಿಗೆ ಶಾಲೆಗಳನ್ನು ಅಂದ-ಚೆಂದಗೊಳಿಸಲು ಶ್ರಮಿಸುತ್ತಿದ್ದಾರೆ. ಆಯಾ ಶಾಲೆಯ ಮುಖ್ಯಗುರುಗಳ ಬೇಡಿಕೆಯನ್ವಯ ಬಿಇಒಗಳಿಂದ ಆದೇಶ ಪಡೆದು ಶಾಲೆಗಳಿಗೆ ಹಾಜರಾಗಿ, ಚಿತ್ರಕಲೆ ಅರಳಿಸುತ್ತಿದ್ದಾರೆ.

ರೌಡಕುಂದಾ ಶಾಲೆಗೆ ಹೊಸ ಕಳೆ:
ಮುಖ್ಯಗುರು ಶೇಷಗಿರಿರಾವ್‌ ಅವರು ಸುಣ್ಣ-ಬಣ್ಣ ಕಂಡ ಶಾಲೆಗೆ ಚಿತ್ರಕಲಾ ಶಿಕ್ಷಕರನ್ನು ಕೇಳಿದ ಹಿನ್ನೆಲೆಯಲ್ಲಿ ಬಿಇಒ ಶರಣಪ್ಪ ವಟಗಲ್‌ ತಂಡ ಕಳುಹಿಸಿದ್ದರು. ಹತ್ತು ಜನರನ್ನೊಳಗೊಂಡ ತಂಡ ಒಂದೇ ದಿನದಲ್ಲಿ ಶಾಲೆಯ ಗೋಡೆಗಳ ರಂಗು ಹೆಚ್ಚಿಸಿದೆ. ಗ್ರಾಮೀಣ ಜೀವನ ಶೈಲಿ ಸಾರುವ ಚಿತ್ರಗಳು, ಎತ್ತಿನ ಬಂಡಿ, ನೀರು ತರುವ ಚಿತ್ರ, ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿದ್ದಾರೆ. ಗಿಡಮರ-ಗುಡಿಸಲು ಗಮನ ಸೆಳೆಯುತ್ತಿವೆ.

ಪರಿಸರ ಕಾಳಜಿ, ಸಾಂಸ್ಕೃತಿಕ ನೃತ್ಯ, ಭರತನಾಟ್ಯ, ಯಕ್ಷಗಾನ, ಬಯಲಾಟ, ವಾದ್ಯಮೇಳ ಸೇರಿದಂತೆ ಎಲ್ಲ ಜನಪದ ಕಲೆಗಳನ್ನು ಗೋಡೆಗಳಲ್ಲಿ ಚಿತ್ರಿಕರಿಸಲಾಗಿದೆ. ರೈತಾಪಿ ಜನರ ಬದುಕಿನ ನೋಟ, ಜನಪದ ಕಲೆಯ ಎಲ್ಲ ಪ್ರಕಾರಗಳನ್ನು ಇಲ್ಲಿ ಕಾಣಬಹುದಾಗಿದೆ.

19 ಶಾಲೆಗಳು ಪೂರ್ಣ: ಇದುವರೆಗೆ ಚಿತ್ರಕಲಾ ಶಿಕ್ಷಕರಿಂದಲೇ ತಾಲೂಕಿನ 19 ಶಾಲೆಗಳು ಹೊಸ ರೂಪ ಪಡೆದಿವೆ. ಸಿದ್ರಾಂಪುರ, ವಳಬಳ್ಳಾರಿ, ತುರುವಿಹಾಳ, ಹಾರಾಪುರ, ಅಲಬನೂರು, ಜವಳಗೇರಾ, ಗೋರೆಬಾಳ, ಆದರ್ಶ ವಿದ್ಯಾಲಯ, ವೆಂಕಟೇಶ್ವರ ಸ್ಕೂಲ್‌, ಹೊಸಳ್ಳಿ ಕ್ಯಾಂಪ್‌, ಹಂಚಿನಾಳ, ರೌಡಕುಂದಾ, ಉದಾಳ(ಇಜೆ) ಮೂಡಲಗಿರಿ ಕ್ಯಾಂಪ್‌, ಅಂಬಾನಗರ ಶಾಲೆಯ ಗೋಡೆಗಳುಕಲಾವಿದರಕೈ ಚಳಕಕ್ಕೆ ಸಾಕ್ಷಿಯಾಗಿವೆ. ಬಿಡುವಿನ ದಿನ ಭಾನುವಾರ
ಕೂಡ ಚಿತ್ರಕಲಾ ಶಿಕ್ಷಕರು ಕೊಪ್ಪಳ ಜಿಲ್ಲೆಯ ಅರಸನಕೇರಿಗೆ ತೆರಳಿ ಅಲ್ಲಿನ ಶಾಲೆಯನ್ನು ಅಂದ- ಚೆಂದಗೊಳಿಸಿದ್ದಾರೆ.

ಬಿಇಒ ಸೂಚನೆ ಬೇಕು: ಕಲಾ ಶಿಕ್ಷಕರು ತಿಂಗಳಿಗೊಂದು ಸಭೆ ನಡೆಸುವುದಕ್ಕೆ ಈ ಹಿಂದೆ ಇಲಾಖೆಯೇ ಆದೇಶ ಹೊರಡಿಸಿತ್ತು. ಈ ಸಂದರ್ಭ ಬರೀ ಆಯಾ ಶಾಲೆಗೆ ಹೋಗಿ ಚರ್ಚೆ ಮಾಡಿ ಬರುವ ಬದಲು ಕಲಾವಿದರು ಬಂದು ಹೋಗಿದ್ದರೆಂಬ ನೆನಪು ಉಳಿಸಲು ಚಿತ್ರ ಬಿಡಿಸುವ ಮಾರ್ಗ ಅನುಸರಿಸಲಾಯಿತು. ಸಭೆ ನಡೆಸಬೇಕೆಂಬ ಆದೇಶ ರದ್ದಾಗಿದ್ದರೂ ಆಯಾ ಶಾಲೆ ಮುಖ್ಯಗುರುಗಳು ಬೇಡಿಕೆ ಸಲ್ಲಿಸಿದರೆ ಬಿಇಒ ಅನುಮತಿ ಪಡೆದು ಶಾಲೆಗೆ ಹೋಗುವ ಪದ್ಧತಿಯನ್ನು ತಾಲೂಕಿನಲ್ಲಿ ಮುಂದುವರಿಸಲಾಗಿದೆ.

ಇದರೊಟ್ಟಿಗೆ ಖಾಸಗಿ ಶಿಕ್ಷಕರು ಕೂಡ ಕಲಾವಿದರ ಸಂಘ ಕಟ್ಟಿಕೊಂಡು ಸರಕಾರಿ ಶಾಲೆಗಳನ್ನು ಅಂದಗೊಳಿಸುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಶಾಲೆಯನ್ನುಮಕ್ಕಳಆಕರ್ಷಣೀಯ ಕೇಂದ್ರವಾಗಿಸಬೇಕೆಂಬ ಉದ್ದೇಶದೊಂದಿಗೆ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಕಲಾವಿದರ ಆಯಾ ದಿನ ಊಟದ ವ್ಯವಸ್ಥೆ ಕಲ್ಪಿಸಿ, ಬಣ್ಣ, ಬ್ರಷ್‌ಗಳನ್ನು ಕೊಡಿಸಿದರಷ್ಟೇ ಸಾಕು; ತಮ್ಮ ಕೆಲಸ ನಿಭಾಯಿಸಿ ಅಲ್ಲಿಂದ ಮರಳುತ್ತಿರುವುದು ಗಮನಾರ್ಹ.

ಪ್ರತಿ ತಿಂಗಳು 3ನೇ ಶನಿವಾರ ಸಭೆ ನಡೆಸಲು ಇಲಾಖೆ ನಿರ್ದೇಶಕರು ಆದೇಶವಾಗಿತ್ತು. ಬರೀ ಮೀಟಿಂಗ್‌ ಮಾಡಿ ಬರುವ ಬದಲು ಅಲ್ಲೊಂದು ನೆನಪು ಉಳಿಯುವ ರೀತಿ ಮಾಡಬೇಕೆಂದು ಚಿತ್ರ ಬಿಡಿಸಲಾಯಿತು. ಇಲ್ಲಿನ ಪ್ರಯತ್ನಕ್ಕೆ ಪ್ರೋತ್ಸಾಹ ದೊರೆತು ರಾಜ್ಯದ ಇತರೆಕಡೆಯೂ ಅನುಕರಿಸಲಾಗಿದೆ.
ಪಿ.ಎಲ್‌.ಪತ್ರೋಟಿ, ಜಿಲ್ಲಾಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ರಾಯಚೂರು

ಮಕ್ಕಳ ದಾಖಲಾತಿ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ಮಕ್ಕಳು ಸರಕಾರಿ ಶಾಲೆ ನೋಡಿದಾಗ ಇಲ್ಲಿಯೇ ಕಲಿಯಬೇಕೆಂಬ ಆಸಕ್ತಿ ಹೊಂದಬೇಕು. ಅವರಿಗೆ ಪರಿಸರ, ಸಾಮಾಜಿಕ ಮೌಲ್ಯಗಳನ್ನುಕಲೆಯ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಶಿವಾನಂದ ಸಾತಿಹಾಳ್‌, ಅಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ಸಿಂಧನೂರ

ಯಮನಪ್ಪ ಪವಾರ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.