ಉದ್ಯಾವರ: ಜಾರುಕುದ್ರು ಸೇತುವೆ ಶೀಘ್ರ ಉದ್ಘಾಟನೆ – ಶಾಸಕ ಲಾಲಾಜಿ ಮೆಂಡನ್
Team Udayavani, Oct 4, 2021, 6:45 PM IST
ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನವಾಗಿ 6.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಜಾರುಕುದ್ರು ಸೇತುವೆಯನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಅವರು ಅ.4ರಂದು ಸೇತುವೆಯ ಕಾಮಗಾರಿಯನ್ನು ವೀಕ್ಷಣೆ ನಡೆಸಿ ಉದಯವಾಣಿಯೊಂದಿಗೆ ಮಾತನಾಡಿದರು.
ಸರಕಾರದ ದೂರದೃಷ್ಟಿತ್ವದ ಯೋಜನೆಯಾಗಿ ಈ ಭಾಗದ ಗ್ರಾಮಸ್ಥರಿಗೆ ಸುವ್ಯವಸ್ಥಿತ ಸಂಪರ್ಕಕ್ಕೆ ಈ ಸೇತುವೆಯು ನಿರ್ಮಾಣ ಗೊಂಡಿದೆ. ಎಲ್ಲರ ಸಹಕಾರದಿಂದ ಯೋಜನೆಯು ಸಾಕಾರಗೊಳ್ಳುತ್ತಿದೆ ಎಂದಿದ್ದು, ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಸ್ಥಿತರಿದ್ದ ಅಧಿಕಾರಿಗಳಲ್ಲಿ ಜನರ ಬೇಡಿಕೆಗಳ ಬಗ್ಗೆ ತುರ್ತಾಗಿ ಸ್ಪಂದಿಸುವಂತೆ ಸೂಚಿಸಿದರು.
ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸದಸ್ಯರುಗಳಾದ ಗಿರೀಶ್ ಸುವರ್ಣ, ರಾಜೇಶ್ ಶ್ರೀಯಾನ್, ಮಾಲತಿ ಸಂದೀಪ್, ಯೋಗೀಶ್ ಎಸ್.ಕೋಟ್ಯಾನ್, ರಾಜೇಶ್ ಕುಂದರ್, ಇಲಾಖಾ ಎಂಜಿನಿಯರ್ಗಳಾದ ಚೆನ್ನಪ್ಪ ಮೊಯ್ಲಿ, ತ್ರಿನೇಶ್, ಮಮತಾ, ಪ್ರಮುಖರಾದ ಗಣೇಶ್ ಕುಮಾರ್ ಸಂಪಿಗೆನಗರ, ಸಂತೋಷ್ ಸುವರ್ಣ ಬೊಳ್ಜೆ, ಯೋಗೀಶ್ ಕೋಟ್ಯಾನ್, ಎಂ.ಕೆ. ಶಾಂತರಾಜ್ ಪಿತ್ರೋಡಿ, ಜಾರುಕುದ್ರು ನಿವಾಸಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು