ಅಜೆಕಾರು: ಶಿರ್ಲಾಲು ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಗ್ರಾಮಸ್ಥರ ಹೊಡೆದಾಟ
Team Udayavani, Oct 5, 2021, 3:34 PM IST
ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಗ್ರಾಮಸ್ಥರ ನಡುವೆ ಪರಸ್ಪರ ಹೊಡೆದಾಟ ನಡೆದ ಘಟನೆ ಮಂಗಳವಾರ ನಡೆದಿದೆ.
ಮುಂಡ್ಲಿ ಗ್ರಾಮದ ಮಹಿಳೆ ಕುಡಿಯುವ ನೀರು ಒದಗಿಸುವಂತೆ ಪಂಚಾಯತ್ ಗೆ ಮನವಿ ಮಾಡಿದಾಗ ಸ್ಥಳಿಯ ಪಂಚಾಯತ್ ಸದಸ್ಯರು ವಿರೋಧ ಮಾಡಿದು ಆಗ ಗ್ರಾಮಸ್ಥರ ನಡುವೆ 2 ಗುಂಪುಗಳಾಗಿ ಪರಸ್ಪರ ಹೊಡೆದಾಟ ನಡೆದಿದೆ.
ನಂತರ ಅಜೆಕಾರು ಪೊಲೀಸ್ ಠಾಣಾಧಿಕಾರಿ ಹಾಗು ಸಿಬಂದಿ ಸಭೆಗೆ ಬಂದು ಹೊಡೆದಾಟ ನಡೆಸಿದವರನ್ನು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಗಲಾಟೆ ಮಾಡಿದವರು ಸಭೆಯಲ್ಲಿದ್ದ ಚಯರ್ ಗಳಿಗೆ ಹಾನಿ ಮಾಡಿದ್ದಾರೆ.