ಡಿವೋರ್ಸ್ ಬಗ್ಗೆ ಸಮಂತಾ ತಂದೆ ಹೇಳಿದ್ದೇನು ?
Team Udayavani, Oct 6, 2021, 3:15 PM IST
ಹೈದರಾಬಾದ್ : ತಮ್ಮ ಮಗಳ ವಿಚ್ಛೇದನದ ಬಗ್ಗೆ ನಟಿ ಸಮಂತಾ ಅವರ ತಂದೆ ಮೌನ ಮುರಿದಿದ್ದಾರೆ. ಮಗಳ ಈ ನಿರ್ಧಾರದಿಂದ ತಮಗಾದ ನೋವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಮಂತಾ ತಂದೆ ಜೋಸೆಫ್ ಪ್ರಭು, ಇಬ್ಬರ ನಡುವಿನ ವಿಚ್ಛೇದನದ ವಿಚಾರವಾಗಿ ತಮಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಈ ನಿರ್ಧಾರ ತಮಗೆ ಶಾಕ್ ತಂದರೂ ಸಹ, ತನ್ನ ಮಗಳು ಬಹಳ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದಿದ್ದಾರೆ.
ನಟ ನಾಗಾರ್ಜುನ ಅಕ್ಕಿನೇನಿ ಸಹ ತಮ್ಮ ಮಗ ಹಾಗೂ ಸೊಸೆಯ ವಿಚ್ಛೇದನದ ವಿಚಾರದ ಬಗ್ಗೆ ಮಾತನಾಡಿ, ಈ ಬೆಳವಣಿಗೆ ದುರದೃಷ್ಟಕರವಾಗಿದ್ದು, ಇಬ್ಬರಿಗೂ ದೇವರು ಶಕ್ತಿ ನೀಡಲಿ ಎಂದು ಆಶಿಸಿದ್ದಾರೆ. ಪತಿ – ಪತ್ನಿಯರ ನಡುವೆ ಏನಾಗುತ್ತದೋ ಅದೆಲ್ಲಾ ವೈಯಕ್ತಿಕವಾಗಿದ್ದು, ಅದು ಹಾಗೇ ಇರಬೇಕೆಂದ ನಾಗಾರ್ಜುನ, ಸ್ಯಾಮ್ ಹಾಗೂ ಆಕೆ ನಡುವೆ ಏನೇ ಆದರೂ ಇಬ್ಬರೂ ಸಹ ತಮ್ಮ ಪ್ರೀತಿಪಾತ್ರರಾಗೇ ಇರಲಿದ್ದಾರೆ ಎಂದಿದ್ದಾರೆ.
ಇನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನ ಕಡಿದುಕೊಂಡರು. ತಾವು ದೂರವಾಗುತ್ತಿರುವ ವಿಚಾರನ್ನು ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡರು. ನಾಲ್ಕು ವರ್ಷಗಳ ವಿವಾಹ ಬಂಧನ ಅಂತ್ಯವಾಗಿದ್ದಕ್ಕೆ ಚೈ ಹಾಗೂ ಸ್ಯಾಮ್ ಅವರ ಅಭಿಮಾನಿಗಳಿಗೆ ದುಖಃವಾಯಿತು. ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ