ರೈತರನ್ನು ಅವಮಾನಿಸುತ್ತಿದ್ದಾರೆ ಪ್ರತಿನಿಧಿಗಳು: ಪ್ರಜ್ವಲ್ ರೇವಣ್ಣ
ರೈತರು ಸ್ವಾಭಿಮಾನದಿಂದ ಬದುಕಲು ನೀರು ಕೇಳುತ್ತಿದ್ದಾರೆ : ಪ್ರಜ್ವಲ್ ರೇವಣ್ಣ
Team Udayavani, Oct 8, 2021, 1:28 PM IST
ಇಂಡಿ: ತಾಲೂಕಿನ ರೈತರು ಸ್ವಾಭಿಮಾನದಿಂದ ಬದುಕಲು ನೀರು ಕೇಳುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದೇ ಪ್ರತಿಭಟನೆಗೆ ಅವಮಾನಿಸುತ್ತಿದ್ದಾರೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ 250 ಕೋಟಿ ರೂ. ಅನುದಾನ ನೀಡಿದ್ದರು. ಕಾರಣಾಂತರದಿಂದ ನಮ್ಮ ಸರ್ಕಾರ ಉರುಳಿತು. ಆದರೆ ಮುಂದಿನ ಸರ್ಕಾರಗಳು ಆ ಅನುದಾನ ಯೋಜನೆಗೆ ನೀಡದೇ ತಡೆಹಿಡಿದಿವೆ ಎಂದು ಆಪಾದಿಸಿದರು.
ಹೋರಾಟಗಾರರ ಮೇಲೆ ಕೇಸ್ ದಾಖಲಿಸಿ, ಹೋರಾಟ ಹಕ್ಕಿತ್ತುವ ಹುನ್ನಾರವೂ ಈ ಭಾಗದಲ್ಲಿ ನಡೆದಿದೆ. ನಾವು ಯಾವುದೇ ಕೇಸ್ಗೆ ಹೆದರಲ್ಲ. ಈಗ ಏನೂ ತಪ್ಪು ಮಾಡದವರ ಮೇಲೆ ಕೇಸ್ ದಾಖಲಿಸಿದ್ದು, ಕೇಸ್ ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಮ್ಮ ಸರ್ಕಾರ ರೈತಪರವಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ರೈತರ ಸಾಲ ಮನ್ನಾ ಮಾಡಿದ್ದನ್ನು ರೈತರು ಮರೆತಿಲ್ಲ. ಬಿಜೆಪಿ ಸರ್ಕಾರ ರೈತರಿಗೆ ಏನು ಕೊಡುಗೆ ನೀಡಿದೆ? ಎಂಬುದನ್ನು ಜನರ ಮುಂದಿಡಲಿ. ವರ್ಷಕ್ಕೆ ಎರಡು ಸಾವಿರ ರೂ.ನೀಡಿ ರೈತಪರ ಸರ್ಕಾರ ಎನ್ನುತ್ತಿರುವ ಬಿಜೆಪಿ ರಸಗೊಬ್ಬರ ದರ ಹೆಚ್ಚಿಸಿ ಆ ಎರಡು ಸಾವಿರ ಮರಳಿ ಪಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಮಹದಾಯಿ, ಮೇಕೆದಾಟು ಮತ್ತು ಕೃಷ್ಣಾ ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ನಾನು ಸದನದಲ್ಲಿ ಧ್ವನಿ ಎತ್ತುವೆ. ರಾಜ್ಯದ ಸಂಸದರೆಲ್ಲರೂ ಒಗ್ಗಟ್ಟಾಗಿ ಈ ಯೋಜನೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಆದರೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಎಲ್ಲ ಸಂಸದರು ಈ ಭಾಗದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಎಲ್ಲ ಸಂಸದರ ನಿಯೋಗ ಕೇಂದ್ರಕ್ಕೆ ತೆಗೆದುಕೊಂಡು ಹೋದರೆ ಅದಕ್ಕೆ ತಾವೂ ಬೆಂಬಲಿಸುವುದಾಗಿ ಹೇಳಿದ ಅವರು, ಮುಂದಿನ ವಾರದಲ್ಲಿ ಕುಮಾರಸ್ವಾಮಿಯವರ ಜೊತೆಗೆ ಇಂಡಿಗೆ ಬಂದು ಹೋರಾಟದ ಕುರಿತು ಎಲ್ಲ ರೈತರ ಜೊತೆಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಬಿ.ಡಿ. ಪಾಟೀಲ, ಮಲ್ಲಿಕಾರ್ಜನ ಯಂಡಿಗೇರಿ, ಮರೆಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಎಂ. ಬೇವನೂರ, ಸಿದ್ದು ಡಂಗಾ, ಬಸವರಾಜ ಹಂಜಗಿ, ಮಹ್ಮದ್ ಬಾಗವಾನ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ