ಆರ್‌ಸಿಬಿ ಮೇಲೆ ರೈಡ್‌ ಮಾಡಿದ ಕೆಕೆಆರ್‌

ಕೊಹ್ಲಿ ಪಡೆ ಕೆಕೆಆರ್‌ಗೆ 4 ವಿಕೆಟ್‌ಗಳಿಂದ ಶರಣಾಗಿ ಕೂಟದಿಂದ ಹೊರಬಿದ್ದಿದೆ.

Team Udayavani, Oct 11, 2021, 11:18 PM IST

ಆರ್‌ಸಿಬಿ ಮೇಲೆ ರೈಡ್‌ ಮಾಡಿದ ಕೆಕೆಆರ್‌

ಶಾರ್ಜಾ: ಆರ್‌ಸಿಬಿಯ ಮತ್ತೊಂದು ಕಪ್‌ ಕನಸು ಸೋಮವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಛಿದ್ರಗೊಂಡಿದೆ. ಸುನೀಲ್‌ ನಾರಾಯಣ್‌ ಅವರ ಸ್ಪಿನ್‌ ಸುಳಿಗೆ ಸಿಲುಕಿದ ಕೊಹ್ಲಿ ಪಡೆ ಕೆಕೆಆರ್‌ಗೆ 4 ವಿಕೆಟ್‌ಗಳಿಂದ ಶರಣಾಗಿ ಕೂಟದಿಂದ ಹೊರಬಿದ್ದಿದೆ.

ಇದರೊಂದಿಗೆ ವಿರಾಟ್‌ ಕೊಹ್ಲಿ ಅವರ ಆರ್‌ಸಿಬಿ ನಾಯಕತ್ವದ ನಂಟು ಬರಿಗೈಯಲ್ಲಿ ಕೊನೆಗೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದರೂ ಆರ್‌ಸಿಬಿಗೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 138 ರನ್‌ ಮಾತ್ರ. ಜವಾಬು ನೀಡಿದ ಕೆಕೆಆರ್‌ 19.4 ಓವರ್‌ಗಳಲ್ಲಿ 6 ವಿಕೆಟಿಗೆ 139 ರನ್‌ ಬಾರಿಸಿ ವಿಜಯಿಯಾಯಿತು. ಬುಧವಾರ ಕೆಕೆಆರ್‌-ಡೆಲ್ಲಿ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಮುಖಾಮುಖೀಯಾಗಲಿವೆ.

ಚೇಸಿಂಗ್‌ ವೇಳೆ ಕೊನೆಯ ಹಂತದಲ್ಲಿ ಮಾರ್ಗನ್‌ ಪಡೆ ಒತ್ತಡಕ್ಕೆ ಸಿಲುಕಿದರೂ ಇದನ್ನು ಯಶಸ್ವಿಯಾಗಿ ನಿಭಾಯಿಸಿತು. ಗಿಲ್‌ ಮತ್ತು ಅಯ್ಯರ್‌ ಮೊದಲ ವಿಕೆಟಿಗೆ 41 ರನ್‌ ಗಳಿಸಿ ಉತ್ತಮ ಬುನಾದಿ ನಿರ್ಮಿಸಿದರು. ರಾಣಾ 23, ಬ್ಯಾಟಿಂಗಿನಲ್ಲೂ ಮಿಂಚಿದ ಸುನೀಲ್‌ ನಾರಾಯಣ್‌ 26 ರನ್‌ ಬಾರಿಸಿ ತಂಡವನ್ನು ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಾರಾಯಣ್‌ ಸ್ಪಿನ್‌ ದಾಳಿ
ಕೆರಿಬಿಯನ್‌ ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಓವರಿಗೆ ಒಂದೊಂದರಂತೆ ವಿಕೆಟ್‌ ಬೇಟೆಯಾಡುತ್ತ ಹೋದರು. ಮೊದಲು ಭರತ್‌, ಬಳಿಕ ಕೊಹ್ಲಿ, ಅನಂತರ ಎಬಿಡಿ, ಕೊನೆಗೆ ಮ್ಯಾಕ್ಸ್‌ವೆಲ್‌… ಹೀಗೆ ದೊಡ್ಡ ದೊಡ್ಡ ವಿಕೆಟ್‌ ಉರುಳಿಸಿ ಕೆಕೆಆರ್‌ ಪಾಲಿನ ಬೌಲಿಂಗ್‌ ಹೀರೋ ಎನಿಸಿಕೊಂಡರು.

ವಿರಾಟ್‌ ಕೊಹ್ಲಿ-ದೇವದತ್ತ ಪಡಿಕ್ಕಲ್‌ ಆರ್‌ಸಿಬಿಗೆ ಭರವಸೆಯ ಆರಂಭ ಒದಗಿಸಿದರು. ಪವರ್‌ ಪ್ಲೇಯಲ್ಲಿ ರನ್‌ ಸರಾಗವಾಗಿ ಹರಿದು ಬರತೊಡಗಿತು. ಕೆಕೆಆರ್‌ ಮೊದಲ 4 ಓವರ್‌ಗಳಲ್ಲಿ ನಾಲ್ವರು ಬೌಲರ್‌ಗಳನ್ನು ದಾಳಿಗಿಳಿಸಿದರೂ ವಿಶೇಷ ಲಾಭವಾಗಲಿಲ್ಲ. ಮೊದಲ ವಿಕೆಟಿಗೆ 5.1 ಓವರ್‌ಗಳಿಂದ 49 ರನ್‌ ಒಟ್ಟುಗೂಡಿತು. ಆಗ ಫ‌ರ್ಗ್ಯುಸನ್‌ ಎಡಗೈ ಆಟಗಾರ ಪಡಿಕ್ಕಲ್‌ ಅವರನ್ನು ಬೌಲ್ಡ್‌ ಮಾಡಿ ಕೆಕೆಆರ್‌ಗೆ ಮೊದಲ ಯಶಸ್ಸು ತಂದಿತ್ತರು. ಪಡಿಕ್ಕಲ್‌ ಗಳಿಕೆ 18 ಎಸೆತಗಳಿಂದ 21 ರನ್‌ (2 ಬೌಂಡರಿ).

ಪವರ್‌ ಪ್ಲೇಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 53 ರನ್‌ ಒಟ್ಟುಗೂಡಿತು. ಮತ್ತು ಆರ್‌ಸಿಬಿ ಬ್ಯಾಟಿಂಗ್‌ ಆರ್ಭಟ ಈ ಹಂತಕ್ಕೇ ಸೀಮಿತಗೊಂಡಿತು. ವನ್‌ಡೌನ್‌ನಲ್ಲಿ ಬಂದ ಕಳೆದ ಪಂದ್ಯದ ಹೀರೋ ಶ್ರೀಕರ್‌ ಭರತ್‌ ಇಲ್ಲಿ ತೀರಾ ನಿಧಾನಿಯಾಗಿದ್ದರು (16 ಎಸೆತ, 9 ರನ್‌). 10 ಓವರ್‌ ಅಂತ್ಯಕ್ಕೆ ಆರ್‌ಸಿಬಿ 2 ವಿಕೆಟಿಗೆ 70 ರನ್‌ ಮಾಡಿತ್ತು. ಅರ್ಥಾತ್‌, ಪವರ್‌ ಪ್ಲೇ ಮುಗಿದ ಬಳಿಕ 4 ಓವರ್‌ಗಳಲ್ಲಿ ಬಂದದ್ದು 17 ರನ್‌ ಮಾತ್ರ.

ನಾರಾಯಣ್‌ ತಮ್ಮ ದ್ವಿತೀಯ ಓವರ್‌ನಲ್ಲಿ ದೊಡ್ಡದೊಂದು ಬೇಟೆಯಾಡಿ ಕಪ್ತಾನ ಕೊಹ್ಲಿ ಅವರನ್ನು ಬೌಲ್ಡ್‌ ಮಾಡಿದರು. ಕೊಹ್ಲಿ ಗಳಿಕೆ 33 ಎಸೆತಗಳಿಂದ 39 ರನ್‌ (5 ಬೌಂಡರಿ). ಎಬಿಡಿ ವೈಫ‌ಲ್ಯ ಮತ್ತೆ ಮುಂದುವರಿಯಿತು (11). ನಾರಾಯಣ್‌ ಅವರ ಆಫ್-ಬ್ರೇಕ್‌ ಎಸೆತವೊಂದು ಡಿ ವಿಲಿಯರ್ ಅವರನ್ನು ವಂಚಿಸಿತು. ಅವರು ಬೌಲ್ಡ್‌ ಆಗಿ ನಿರ್ಗಮಿಸಿದರು. ಯುಎಇ ಆವೃತ್ತಿಯ 8 ಪಂದ್ಯಗಳಿಂದ ಎಬಿಡಿ ಬ್ಯಾಟಿನಿಂದ ಹರಿದು ಬಂದದ್ದು ಬರೀ 106 ರನ್‌! 15 ಓವರ್‌ ಅಂತ್ಯಕ್ಕೆ ಆರ್‌ಸಿಬಿ ಸ್ಕೋರ್‌ 4ಕ್ಕೆ 108 ರನ್‌ ಆಗಿತ್ತು.

ಡೆತ್‌ ಓವರ್‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮ್ಯಾಜಿಕ್‌ ಮಾಡುವುದು ಅನಿವಾರ್ಯವಾಗಿತ್ತು. ಆದರೆ ನಾರಾಯಣ್‌ ಇದಕ್ಕೂ ಅವಕಾಶ ಕೊಡಲಿಲ್ಲ. ತಮ್ಮ ಅಂತಿಮ ಓವರ್‌ನಲ್ಲಿ ಈ ಬಹುಮೂಲ್ಯ ವಿಕೆಟ್‌ ಉಡಾಯಿಸಿದರು.

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ದೇವದತ್ತ ಪಡಿಕ್ಕಲ್‌ ಬಿ ಫ‌ರ್ಗ್ಯುಸನ್‌ 21
ವಿರಾಟ್‌ ಕೊಹ್ಲಿ ಬಿ ನಾರಾಯಣ್‌ 39
ಎಸ್‌. ಭರತ್‌ ಸಿ ಅಯ್ಯರ್‌ ಬಿ ನಾರಾಯಣ್‌ 9
ಮ್ಯಾಕ್ಸ್‌ವೆಲ್‌ ಸಿ ಫ‌ರ್ಗ್ಯುಸನ್‌ ಬಿ ನಾರಾಯಣ್‌ 15
ಡಿ ವಿಲಿಯರ್ ಬಿ ನಾರಾಯಣ್‌ 11
ಶಾಬಾಜ್‌ ಅಹ್ಮದ್‌ ಸಿ ಮಾವಿ ಬಿ ಫ‌ರ್ಗ್ಯುಸನ್‌ 13
ಡೇನಿಯಲ್‌ ಕ್ರಿಸ್ಟಿಯನ್‌ ರನೌಟ್‌ 9
ಹರ್ಷಲ್‌ ಪಟೇಲ್‌ ಔಟಾಗದೆ 8
ಜಾರ್ಜ್‌ ಗಾರ್ಟನ್‌ ಔಟಾಗದೆ 0
ಇತರ 13
ಒಟ್ಟು (7 ವಿಕೆಟಿಗೆ) 138
ವಿಕೆಟ್‌ ಪತನ:1-49, 2-69, 3-88, 4-102, 5-112, 6-126, 7-134.
ಬೌಲಿಂಗ್‌:ಶಕಿಬ್‌ ಅಲ್‌ ಹಸನ್‌ 4-0-24-0
ಶಿವಂ ಮಾವಿ 4-0-36-0
ವರುಣ್‌ ಚಕ್ರವರ್ತಿ 4-0-20-0
ಲಾಕಿ ಫ‌ರ್ಗ್ಯುಸನ್‌ 4-0-30-2
ಸುನೀಲ್‌ ನಾರಾಯಣ್‌ 4-0-21-4
ಕೋಲ್ಕತಾ ನೈಟ್‌ ರೈಡರ್
ಶುಭಮನ್‌ ಸಿ ವಿಲಿಯರ್ ಬಿ ಹರ್ಷಲ್‌ 29
ವಿ. ಅಯ್ಯರ್‌ ಸಿ ಭರತ್‌ ಬಿ ಹರ್ಷಲ್‌ 26
ರಾಹುಲ್‌ ತ್ರಿಪಾಠಿ ಎಲ್‌ಬಿಡಬ್ಲ್ಯು ಬಿ ಚಹಲ್‌ 6
ನಿತೀಶ್‌ ರಾಣಾ ಸಿ ವಿಲಿಯರ್ ಬಿ ಚಹಲ್‌ 23
ನಾರಾಯಣ್‌ ಬಿ ಸಿರಾಜ್‌ 26
ದಿನೇಶ್‌ ಕಾರ್ತಿಕ್‌ ಸಿ ಭರತ್‌ ಬಿ ಸಿರಾಜ್‌ 10
ಇಯಾನ್‌ ಮಾರ್ಗನ್‌ ಔಟಾಗದೆ 5
ಶಕಿಬ್‌ ಅಲ್‌ ಹಸನ್‌ ಔಟಾಗದೆ 9
ಇತರ 5
ಒಟ್ಟು (19.4 ಓವರ್‌ಗಳಲ್ಲಿ 6ವಿಕೆಟಿಗೆ) 139
ವಿಕೆಟ್‌ ಪತನ:1-41, 2-53, 3-79, 4-110, 5-125, 6-126.
ಬೌಲಿಂಗ್‌;ಮೊಹಮ್ಮದ್‌ ಸಿರಾಜ್‌ 4-0-19-2
ಜಾರ್ಜ್‌ ಗಾರ್ಟನ್‌ 3-0-29-0
ಹರ್ಷಲ್‌ ಪಟೇಲ್‌ 4-019-2
ಯಜುವೇಂದ್ರ ಚಹಲ್‌ 4-0-16-2
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-25-0
ಡೇನಿಯಲ್‌ ಕ್ರಿಸ್ಟಿಯನ್‌ 1.4-029-0

ಆರ್‌ಸಿಬಿ ತೊರೆದ ಲಂಕಾ ಆಟಗಾರರು
ದುಬಾೖ: ಆರ್‌ಸಿಬಿ ತಂಡದ ಇಬ್ಬರು ಶ್ರೀಲಂಕಾ ಆಟಗಾರರಾದ ವನಿಂದು ಹಸರಂಗ ಮತ್ತು ದುಷ್ಮಂತ ಚಮೀರ ಪ್ಲೇ ಆಫ್ ಹಂತದಲ್ಲಿಯೇ ಆರ್‌ಸಿಬಿ ತಂಡ ತೊರೆದಿದ್ದಾರೆ.

ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ತೆರಳುವಂತೆ ಶ್ರೀಲಂಕಾ ಮಂಡಳಿ ನೀಡಿದ ಸೂಚನೆ ಮೇರೆಗೆ ಹಸರಂಗ ಮತ್ತು ಚಮೀರ ಬಯೋಬಬಲ್‌ ತೊರೆದಿದ್ದಾರೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಶ್ರೀಲಂಕಾ ತಂಡದ ಈ ಆಟಗಾರರನ್ನು ಐಪಿಎಲ್‌ ಯುಎಇ ಚರಣಕ್ಕಾಗಿ ಬದಲಿ ಆಟಗಾರರನ್ನಾಗಿ ತಂಡಕ್ಕೆ ಸೇರಿಸಲಾಗಿತ್ತು. ಹಸರಂಗ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದರೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫ‌ಲರಾಗಿದ್ದರು.

ಟಾಪ್ ನ್ಯೂಸ್

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Harbhajan Singh slams Mahendra singh Dhoni

IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-wwwewqwq

Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

1—wewqeqw

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.