ಟಗರಿನ ಕಾಳಗ ನಡೆಸಲು ತೊಂದರೆ ಸಲ್ಲ
ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಆಯೋಜನೆ ಘಂಟಿಕೇರಿ-ಕಮರಿಪೇಟೆಯಲ್ಲಿ ಸ್ಪರ್ಧೆ
Team Udayavani, Oct 14, 2021, 8:18 PM IST
ಹುಬ್ಬಳ್ಳಿ: ಘಂಟಿಕೇರಿ ನ್ಯಾಷನಲ್ ಸ್ಕೂಲ್ ಹಿಂಭಾಗದ ಬಯಲು ಜಾಗೆಯಲ್ಲಿ ನವರಾತ್ರಿ ಉತ್ಸವ ನಿಮಿತ್ತ ಬುಧವಾರ ಟಗರಿನ ಕಾಳಗ ನಡೆಸಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಟಗರಿನ ಕಾಳಗ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಟಗರಿನ ಕಾಳಗವನ್ನು ಮತ್ತೆ ಮೆರಗು ತರುವಂತೆ ನಡೆಸಬೇಕು. ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧಿಸಬೇಕೆಂದು ಹಲವು ಯತ್ನಗಳು ನಡೆದರೂ ಹೋರಾಟ ನಡೆಸಿ ಮತ್ತೆ ಜಲ್ಲಿಕಟ್ಟು ಸ್ಪರ್ಧೆ ನಡೆಯುವಂತೆ ಮಾಡಿದರು. ಅದೇ ರೀತಿ ಈ ಭಾಗದಲ್ಲಿ ಟಗರಿನ ಕಾಳಗ ನಡೆಸಲು ಯಾವುದೇ ತೊಂದರೆ ನೀಡಬಾರದು ಎಂದರು.
ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲುಬುರ್ಗಿ ಮಾತನಾಡಿದರು. ಚಂದ್ರಶೇಖರ ಗೋಕಾಕ, ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ, ಶ್ಯಾಮ ಜಾಧವ, ಶಶಿ ಬಿಜವಾಡ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು