ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ
ಬನ್ನಿಕಟ್ಟಿಯ ಬನ್ನಿಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಶುಭಾಶಯ ವಿನಮಯ ಮಾಡಿಕೊಂಡರು.
Team Udayavani, Oct 16, 2021, 6:24 PM IST
ಮುಂಡಗೋಡ: ನಾಡಹಬ್ಬ ವಿಜಯದಶಮಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಬೆಳಗ್ಗೆಯಿಂದಲೇ ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಬನ್ನಿಕಟ್ಟಿಯ ಬನ್ನಿಮಹಾಕಾಳಿ, ಅಂಬೇಡ್ಕರ್ ಓಣಿಯಲ್ಲಿರುವ ಬನ್ನಿ ಮರಕ್ಕೆ ಹಾಗೂ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ಮಹಿಳೆಯರು ತಂಡೋಪತಂಡವಾಗಿ ಬಂದು ದೇವರ ದರ್ಶನ ಪಡೆದು ದೇವಸ್ಥಾನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಆರತಿ ಬೆಳಗಿ ಉಡಿ ತುಂಬಿ ಹಾರೈಸಿದರು.
ಗುರುವಾರ ತಾಲೂಕು ಹಿಂದು ಜಾಗರಣೆ ವೇದಿಕೆಯಿಂದ ಬನ್ನಿಕಟ್ಟಿಯ ಬನ್ನಿಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಮುಂದೆ ಆಯುಧಗಳನ್ನು ಇಟ್ಟು ಆಯುಧ ಪೂಜೆ ಮಾಡಿದರು. ಶುಕ್ರವಾರ ಶ್ರೀರಾಮ ಸೇನೆ ತಾಲೂಕು ಘಟಕದಿಂದ ಬನ್ನಿಕಟ್ಟಿಯ ಬನ್ನಿಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಶುಭಾಶಯ ವಿನಮಯ ಮಾಡಿಕೊಂಡರು.
ಹಿಂಜಾವೆ ತಾಲೂಕು ಸಂಚಾಲಕ ಪ್ರಕಾಶ ಬಡಿಗೇರ, ಶ್ರೀರಾಮ ಸೇನೆಯ ತಾಲೂಕು ಸಂಚಾಲಕ ಮಂಜುನಾಥ ಎಚ್., ಮುಖಂಡರಾದ ಫಣಿರಾಜ ಹದಳಗಿ, ರವಿ ಹಾವೇರಿ, ವಿಶ್ವನಾಥ ನಾಯರ, ರಾಘವೇಂದ್ರ ಶಿರಾಲಿ, ಬಸವರಾಜ ತನಿಖೆದಾರ, ಗಣೇಶ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಕುಮಾರ ತಳವಾರ, ಮಹೇಶ ಎಲಿವಾಳ, ಭಗವಂತ ಗುಡಕರ್, ಸೋಮು ಕಲ್ಮಠ, ಕಿರಣ ಚವ್ಹಾಣ, ದೇವು ಕಲಾಲ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್ ಮಶೀನಾ: ರಮಾನಾಥ ರೈ
Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!