ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು

ವಿಚಾರಣೆ: ಈಗ ಬಾಡಿಗೆದಾರರ ಸರದಿ | ಬಾಡಿಗೆ ಚೌಕಾಸಿಗಿಂತ ಮನೆ ಗುಣಮಟ್ಟ ನೋಡುತ್ತಿರುವ ಬಾಡಿಗೆದಾರರು

Team Udayavani, Oct 22, 2021, 10:35 AM IST

Awake tenants from building collapse incidents

ಬೆಂಗಳೂರು: ಕೇವಲ ವರ್ಷದ ಹಿಂದಿನ ಮಾತು. ಹೊರಗಡೆಯಿಂದ ಬಂದವರಿಗೆ ಬಾಡಿಗೆ ನೀಡಲು ಮಾಲೀಕರೇ ಹಿಂದೇಟು ಹಾಕುತ್ತಿದ್ದರು. ಆದರೆ, ಈ ಪರಿಸ್ಥಿತಿ ತದ್ವಿರುದ್ಧವಾಗಿದೆ. ಬಾಡಿಗೆದಾರರು ಮನೆಗಳ ಗುಣಮಟ್ಟ ಪರೀಕ್ಷಿಸಿ ಕಾಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಕಾರಣ ಇಪ್ಪತ್ತು ದಿನಗಳಲ್ಲಿ ನಗರದಲ್ಲಿ ವರದಿಯಾದ ಕಟ್ಟಡ ಕುಸಿತ ಘಟನೆಗಳು ! ಕೊರೊನಾ ಮೊದಲ ಮತ್ತು ಎರಡನೇ ಅಲೆಯು ತೀವ್ರವಿದ್ದ ಸಂದರ್ಭದಲ್ಲಿ ಬಾಡಿಗೆ ಅಥವಾ ಭೋಗ್ಯಕ್ಕೆಂದು ಮನೆ ಕೇಳಿಕೊಂಡು ಬರುವವರನ್ನು ಕಟ್ಟಡ ಮಾಲೀಕರು ಕೊರೊನಾ ನೆಗೆಟಿವ್‌ ವರದಿ ಇದೆಯೇ? ಇತ್ತೀಚೆಗೆ ಕೊರೊನಾ ಬಂದಿತ್ತಾ? ಎಲ್ಲಿ ಕೆಲಸ ಮಾಡುತ್ತೀರೀ? ಎಂಬ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯಾಕೆ ಎಂದು ಕೇಳಿದರೆ ಮನೆಯಲ್ಲಿ ಹಿರಿಯರು, ಚಿಕ್ಕಮಕ್ಕಳಿದ್ದಾರೆ ಆರೋಗ್ಯ ರಕ್ಷಣೆಗೆ ಮುಂಜಾಗ್ರತೆ ಎಂದು ಉತ್ತರಿಸುತ್ತಿದ್ದರು.

ಆದರೆ, ಅಕ್ಟೋಬರ್‌ನಿಂದೀಚೆಗೆ ನಗರ ದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿತವಾಗಿ ದ್ದು, 568 ಕಟ್ಟಡಗಳು ಶಿಥಿಲವಾಗಿವೆ ಎಂದು ಬಿಬಿಎಂಪಿ ಸಮೀಕ್ಷೆಯಲ್ಲಿ ಗುರುತಿಸಿದೆ. ಅಲ್ಲದೆ, 5000ಕ್ಕೂ ಅಧಿಕ ಮನೆಗಳು ಅನುಮತಿಗಿಂತ ಹೆಚ್ಚು ಎತ್ತರ ಕಟ್ಟಿಸಿದ್ದು, ಅಕ್ರಮಕಟ್ಟಡಗಳ ಪಟ್ಟಿಯಲ್ಲಿವೆ. ನಗರ ವಾಸಿಗಳು ಆತಂಕ ದಲ್ಲಿದ್ದಾರೆ. ಇದರಿಂದಾಗಿ ಮನೆಯ ಮಾಲೀಕರಿಗೆ ಬಾಡಿಗೆದಾರರು ಯಾವಾಗ ಮನೆ ನಿರ್ಮಾಣವಾಗಿದೆ, ಎಷ್ಟು ಅಂತಸ್ಥಿಗೆ ಅನುಮತಿ ಪಡೆದಿದ್ದೀರಿ, ನಿರ್ವಹಣೆ ಮಾಡುತ್ತಿದ್ದೀರಾ? ಗುಣಮಟ್ಟ ಪರಿಶೀಲನೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ.

ಈಗಾಗಲೇ ನಗರದ ಹಲವೆಡೆ ಬಾಡಿಗೆದಾದರರು ತಮ್ಮ ಮನೆಯ ಮಾಲೀಕರಿಗೆ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಹಳೆ ಮನೆಗಳನ್ನು ಬಿಟ್ಟು ಹೊಸ ಅಥವಾ ಸುಸ್ಥಿರ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೊರೊನಾದಿಂದ ಸಾಕಷ್ಟು ಮಂದಿ ಬೆಂಗಳೂರು ತೊರೆದಿದ್ದು, ಸಾಕಷ್ಟು ಮನೆಗಳು ಬಾಡಿಗೆಗೆ ಲಭ್ಯವಿರುವ ಕಾರಣ ಮನೆ ಬದಲಾವಣೆಗೆ ಅನುಕೂಲಕರವಾಗಿದೆ.

ಇದನ್ನೂ ಓದಿ:– 200 ಕೋಟಿ ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪನೆ ಯೋಜನೆ

ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!: ಸೆ.27 ಲಕ್ಕಸಂದ್ರ, ಅ.8 ರಂದು ಕುಸಿದ ಕಸ್ತೂರಿ ನಗರದ ಕಟ್ಟಡ, ಅ.13 ರಂದು ಕಮಲನಗರ ಕಟ್ಟಡ, ಅ.17 ರಂದು ರಾಜಾಜಿನಗರ ಕಟ್ಟಡ ಸೇರಿದಂತೆ ಬಹುತೇಕ ಕಟ್ಟಡ ಕುಸಿತ ಪ್ರಕರಣಗಳಲ್ಲಿ ಬಾಡಿಗೆ ದಾರರು ಅತಂತ್ರವಾಗಿದ್ದಾರೆ. ಒಂದು ಕ್ಷಣ ಮೈರೆತಿದ್ದರು ಜೀವಕ್ಕೆ ಹಾನಿಯಾಗುತ್ತಿತ್ತು. ಇನ್ನು ಘಟನೆಯಿಂದ ಜೀವಹಾನಿಯಾಗದಿ ದ್ದರೂ, ಜೀವನ ಪೂರ್ತಿ ದುಡಿದು ಸಂಪಾ ದಿಸಿದ್ದ ಹಣದಲ್ಲಿ ಖರೀದಿಸಿದ್ದ ಗೃಹೋಪಯೋಗಿ ವಸ್ತುಗಳು, ಒಡವೆ, ಪ್ರಮುಖ ಕಾಗದ ಪತ್ರಗಳು ನಾಶವಾದವು.

ದಿನಪೂರ್ತಿ ಬೀದಿಯಲ್ಲಿ ನಿಂತು ಕಣ್ಣೀರು ಹಾಕಿದ್ದರು. ಅಲ್ಲದೆ, ಮಾಲೀಕರು ಲೀಸ್‌ ಹಣ , ಬಾಡಿಗೆ ಮುಂಗಡ ಹಣ ಹಿಂದಿರುಗಿಸದ ಪರಿಸ್ಥಿತಿಯಲಿದ್ದಾರೆ. ಇಂದಿಗೂ ಹಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಾಡಿಗೆದಾರರಿಗೆ ಉಂಟಾದ ನಷ್ಟವನ್ನು ಬಿಬಿಎಂಪಿ ಬರಿಸುವುದಿಲ್ಲ ಎಂದು ತಿಳಿಸಿದ್ದು, ಮಾಲೀಕರನ್ನೆ ಅವಲಂಭಿಸಬೇಕಿದೆ. ಆದರೆ, ಘಟನೆಯಿಂದ ಮಾಲೀಕರು ಕೂಡಾ ಹಣ ಹಿಂದಿರುಗಿಸುವ ಅಥವಾ ನಷ್ಟ ಪರಿಹಾರ ಮಾಡಿಕೊಡುವ ಸ್ಥಿತಿಯಲ್ಲಿಲ್ಲ. ಈ ಎಲ್ಲಾ ಅಂಶಗಳಿಂದ ಬಾಡಿಗೆದಾರರು ಎಚ್ಚೆತ್ತಕೊಂಡಿದ್ದಾರೆ.

  • ಅಕ್ಟೋಬರ್‌ನಿಂದೀಚೆಗೆ ನಗರದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿತ
  • ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!

ಬಾಡಿಗೆದಾರರೇ ಗಮನಿಸಿ…

  • ಕಟ್ಟಡದ ಗೋಡೆ ಬಿರುಕು ಬಿಟ್ಟಿದೆಯೇ? ಅಥವಾ ನೀರು ತೊಟ್ಟಿಕ್ಕುತ್ತಿದೆಯೇ?
  • ಮಾಲೀಕರು ಕಟ್ಟಡ ನಿರ್ವಹಣೆ ಮಾಡಲಾಗುತ್ತಿದೆಯೇ.
  • ಸಾಧ್ಯವಾದರೆ ಕಾಗದ ಪತ್ರ ಪಡೆದು ಅನುಮತಿ ಅನುಸಾರ ನಿರ್ಮಿಸಿದ್ದಾರೆಯೇ?
  • ಮನೆಯ ಅಕ್ಕಪಕ್ಕ ಶಿಥಿಲ ಕಟ್ಟಡಗಳಿವೆಯೇ?
  • ರಾಜಕಾಲುವೆ, ಕೆರೆ ಒತ್ತುವರಿ ಮಾಡಲಾಗಿದೆಯೇ?
  • 30 ವರ್ಷದ ಹಿಂದಿನ ಕಟ್ಟಡವಾಗಿದ್ದರೆ ಗುಣಮಟ್ಟ ಪರೀಕ್ಷೆ ಮಾಡಿಸಿದ್ದಾರೆಯೇ?
  • ನಿಯಮಕ್ಕಿಂತ ಹೆಚ್ಚು ಅಂತಸ್ತು ನಿರ್ಮಿಸಿದ್ದಾರೆ?

ನಮ್ಮ ಕಟ್ಟಡವು 30 ವರ್ಷದ ಹಿಂದೆ ನಿರ್ಮಿಸಿದ್ದು, ನೀರು ತೊಟ್ಟಿಕ್ಕುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮನೆ ಬದಲಾವಣೆಗೆ ಮುಂದಾಗಿದ್ದೇವೆ. ಸದ್ಯ ನಗರದಲ್ಲಿ ಸಾಕಷ್ಟು ಮನೆ ಖಾಲಿ ಇದ್ದು, ಸಮಸ್ಯೆಯಾಗುವುದಿಲ್ಲ. –ಆಕಾಶ್‌, ಬಾಡಿಗೆದಾರರು,

ನಾಗಸಂದ್ರ ವೃತ್ತ ಘಟನೆಗಳಿಂದ ಎಚ್ಚೆತ್ತುಕೊಂಡಿದ್ದೇವೆ. ಬಾಡಿಗೆ ಚೌಕಾಸಿಗೆ ಸೀಮಿತವಾಗದೇ, ಕಟ್ಟಡ ಬಗ್ಗೆ ಮಾಲೀಕರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ದಾಖಲಾತಿಗಳು ಸರಿ ಇದ್ದು, ಬಾಡಿಗೆ ಮನೆ ಮುಂದುವರಿಸಿದ್ದೇವೆ. ಇದೇ ರೀತಿ ನಗರ ವಾಸಿಗಳು ಮುಂಜಾಗ್ರತಾ ಕ್ರಮಕೈಗೊಳ್ಳುವುದು ಒಳಿತು.  ಆನಂದ ಹಳ್ಳೂರ್‌,

ಬಿಟಿಎಂ ನಿವಾಸಿ. 5000ಕ್ಕೂ ಹೆಚ್ಚು ಅನಧಿಕೃತ ನಿರ್ಮಾಣ ಕಟ್ಟಡಗಳಿವೆ. 500ಕ್ಕೂ ಅಧಿಕ ಶಿಥಿಲ ಕಟ್ಟಡಗಳಿವೆ. ಹೀಗಾಗಿ, ಬಾಡಿಗೆದಾರರು ತಾವು ವಾಸಿಸುವ ಕಟ್ಟಡದ ಮಾಹಿತಿ ಪಡೆದು ಪರಿಶೀಲನೆ ನಡೆಸಿಕೊ ಳ್ಳುವುದು ಒಳಿತು.ಶ್ರೀನಿವಾಸ, ನಿವೃತ್ತ ಎಂಜಿನಿಯರ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.