ಆಸ್ಕರ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ “ಕೂಳಾಂಗಲ್” ಸಿನಿಮಾ
Team Udayavani, Oct 26, 2021, 6:28 PM IST
ನವದೆಹಲಿ: 2020ರ ಆಸ್ಕರ್ ಪ್ರಶಸ್ತಿಗೆ ಅತ್ತ್ಯುತ್ತಮ ಅಂತಾರಾಷ್ಟ್ರೀಯ ಫಿಲ್ಮ್” ಕೆಟಗರಿಯಲ್ಲಿ ಸ್ಪರ್ಧಿಸಲು ಭಾರತದಿಂದ ತಮಿಳು ಚಿತ್ರ ಕೂಳಾಂಗಳ್ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.
ಒಂದು ಸಿನಿಮಾ ಎಂದರೆ ಅದು ಕೇವಲ ದೃಶ್ಯ ರೂಪ ಆಗಿರುವುದಿಲ್ಲ. ಬದಲಾಗಿ ಚಿತ್ರದಲ್ಲಿ ಬರುವ ಪಾತ್ರ, ಸನ್ನಿವೇಶಗಳು ಕೆಲವೊಮ್ಮೆ ಮುನಷ್ಯನ ನಿಜ ಜೀವನದಲ್ಲಿ ಹಾಸು ಹೊಕ್ಕಾಗುರುತ್ತದೆ. ಇಂತಹದೊಂದು ಸಿನಿಮಾ ಕೂಳಾಂಗಲ್.
ಕೂಳಾಂಗಳ್ ಎಂದರೆ ನದಿಯ ಪಕ್ಕದಲ್ಲಿ ಇರುವ ಬೆಣಚುಕಲ್ಲು ಎಂದರ್ಥ. ಚಿತ್ರದ ಶೀರ್ಷಿಕೆಗೂ, ಸಿನುಮಾದಲ್ಲಿ ಬರುವ ಸನ್ನಿವೇಶಗಳಿಗೂ ಸಂಬಂಧ ಇದ್ದು, ಇದನ್ನು ಬಹಳ ಅಚ್ಚುಕಟ್ಟಾಗಿ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.
ಈ ಚಿತ್ರವನ್ನು ಪಿ.ಎಸ್ ವಿನೋದ್ ರಾಜ್ ನಿರ್ದೇಶನ ಮಾಡಿದ್ದು, ನಟಿ ನಯನ ತಾರ ಹಾಗೂ ಪತಿ ವಿಘ್ನೇಶ್ ಶಿವನ್ ತಮ್ಮ ರೌಡಿ ಬ್ಯಾನರ್ಸ್ನಲ್ಲಿ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ
ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್ ನಟನೆಯ ‘ಸರ್ದಾರ್ ಉದ್ಧಮ್’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್ನಲ್ಲಿದ್ದವು. ಈ ಪೈಕಿ ಕೊಳಂಗಾಲ್ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?