ಸಚಿವರಿಗೆ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿ ಹಂಚಿಕೆ
Team Udayavani, Oct 30, 2021, 9:30 PM IST
ಬೆಂಗಳೂರು: ನ.1ರಂದು ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರಿಗೆ ಉಸ್ತುವಾರಿ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗಾವಿ-ಗೋವಿಂದ ಕಾರಜೋಳ, ಶಿವಮೊಗ್ಗ-ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು-ಚಿತ್ರದುರ್ಗ, ಉಮೇಶ ಕತ್ತಿ-ಬಾಗಲಕೋಟೆ, ಎಸ್.ಅಂಗಾರ-ದಕ್ಷಿಣ ಕನ್ನಡ, ಜೆ.ಸಿ. ಮಾಧುಸ್ವಾಮಿ -ತುಮಕೂರು, ಆರಗ ಜ್ಞಾನೇಂದ್ರ-ಚಿಕ್ಕಮಗಳೂರು, ಡಾ.ಸಿ.ಎನ್.ಅಶ್ವತ್ಥ ನಾರಾಯಣ-ರಾಮನಗರ, ಸಿ.ಸಿ.ಪಾಟೀಲ್-ಗದಗ, ಆನಂದ ಸಿಂಗ್- ವಿಜಯನಗರ, ಕೋಟ ಶ್ರೀನಿವಾಸ ಪೂಜಾರಿ-ಕೊಡಗು, ಪ್ರಭು ಚೌವ್ಹಾಣ್-ಬೀದರ್, ಮುರುಗೇಶ ನಿರಾಣಿ-ಕಲಬುರಗಿ, ಅರಬೈಲ್ ಶಿವರಾಮ ಹೆಬ್ಟಾರ್-ಉತ್ತರ ಕನ್ನಡ.
ಎಸ್.ಟಿ.ಸೋಮಶೇಖರ್-ಮೈಸೂರು, ಬಿ.ಸಿ. ಪಾಟೀಲ್-ಹಾವೇರಿ, ಬೈರತಿ ಬಸವರಾಜ-ದಾವಣಗೆರೆ, ಡಾ.ಕೆ.ಸುಧಾಕರ-ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ-ಹಾಸನ, ಶಶಿಕಲಾ ಜೊಲ್ಲೆ-ವಿಜಯಪುರ, ಎಂ.ಟಿ.ಬಿ. ನಾಗರಾಜ-ಬೆಂಗಳೂರು ಗ್ರಾಮಾಂತರ, ಡಾ.ಕೆ.ಸಿ. ನಾರಾಯಣಗೌಡ-ಮಂಡ್ಯ.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ : ಬಸ್ ನಲ್ಲಿ ದಟ್ಟ ಹೊಗೆ
ವಿ.ಸುನಿಲ್ಕುಮಾರ್-ಉಡುಪಿ, ಹಾಲಪ್ಪ ಆಚಾರ್-ಕೊಪ್ಪಳ, ಶಂಕರ ಪಾಟೀಲ್ ಮುನೇನಕೊಪ್ಪ-ಧಾರವಾಡ, ಮುನಿರತ್ನ-ಕೋಲಾರ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲು ಆದೇಶಿಸಲಾಗಿದೆ.
ಚಾಮರಾಜನಗರ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ನೆರವೇರಿಸಲು ಆದೇಶಿಸಲಾಗಿದೆ. ಹಿರಿಯ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಧ್ವಜಾರೋಹಣಕ್ಕೆ ಯಾವುದೇ ಜಿಲ್ಲೆಯ ಜವಾಬ್ದಾರಿ ವಹಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ