ರಬಕವಿಯಲ್ಲಿ 4 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ
Team Udayavani, Oct 31, 2021, 6:17 PM IST
ರಬಕವಿ-ಬನಹಟ್ಟಿ: ರಬಕವಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮನೆಯೊಂದರಲ್ಲಿ ಕೂಡಿಟ್ಟಿದ್ದ ಅಂದಾಜು 4 ಲಕ್ಷ ವೆಚ್ಚದ ಪಡಿತರ ಅಕ್ಕಿ ವಶಪಡಿಸಿಕೊಂಡ ಘಟನೆ ತೇರದಾಳ ಪೋಲಿಸ್ ಠಾಣೆಯ ರಬಕವಿ ಓಪಿ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಮಹಾಲಿಂಗಪೂರ ನಾಕಾ ಹತ್ತಿರದ ಮನೆಯೊಂದರಲ್ಲಿ ಅನಧಿಕೃತವಾಗಿ 200ಕ್ಕೂ ಅಧಿಕ ಚೀಲಗಳಲ್ಲಿ ಸಂಗ್ರಹಿಸಿಡಲಾಗಿದ್ದ 271 ಕ್ವಿಂಟಾಲ 91 ಕೆಜಿ, 4,07,850 ರೂ ಮೊತ್ತದ ಪಡಿತರ ಅಕ್ಕಿಯನ್ನು ಆಹಾರ ಶಿರಸ್ತೆಧಾರರಾದ ಎಸ್. ಡಿ. ದಳವಾಯಿ ಹಾಗೂ ಆಹಾರ ಇನ್ಸ್ಪೆಕ್ಟರ್ ಪಿ. ಆರ್. ಮಠಪತಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ತೇರದಾಳ ಠಾಣಿ ಪಿಎಸ್ಐ ರಾಜು ಬೀಳಗಿ ಹಾಗೂ ತಂಡದವರು ಭೇಟಿ ನೀಡಿದರು.