ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನಗೆ ಗೆಲುವಿನ ವಿದಾಯ


Team Udayavani, Oct 31, 2021, 8:46 PM IST

ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನಗೆ ಗೆಲುವಿನ ವಿದಾಯ

ದುಬಾೖ: ಅನನುಭವಿ ನಮೀಬಿಯಾವನ್ನು 62 ರನ್ನುಗಳಿಂದ ಮಣಿಸಿದ ಅಫ್ಘಾನಿಸ್ಥಾನ, ತನ್ನ ಮಾಜಿ ನಾಯಕ ಅಸ್ಗರ್ ಅಫ್ಘಾನ್‌ಗೆ ಗೆಲುವಿನ ವಿದಾಯ ಹೇಳಿತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಎರಡನೇ ಜಯವನ್ನು ಸಾಧಿಸಿದ ಮೊಹಮ್ಮದ್‌ ನಬಿ ಪಡೆ ತನ್ನ ದ್ವಿತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು.

ರವಿವಾರದ ದುಬಾೖ ಮೇಲಾಟದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ಥಾನ 5 ವಿಕೆಟಿಗೆ 160 ರನ್‌ ಗಳಿಸಿ ಸವಾಲೊಡ್ಡಿತು. ನಮೀಬಿಯಾಕ್ಕೆ ಮೂರಂಕೆಯ ಗಡಿಯನ್ನೂ ತಲುಪಲಾಗಲಿಲ್ಲ. 9 ವಿಕೆಟಿಗೆ 98 ರನ್‌ ಮಾಡಿತು.

ಅಫ್ಘಾನಿಸ್ಥಾನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಸೋಲುಣಿಸಿತ್ತು. ಬಳಿಕ ಪಾಕಿಸ್ಥಾನಕ್ಕೆ ಶರಣಾಯಿತು. ನಮೀಬಿಯಾ ಎದುರಿನ ಗೆಲುವು ನಿರೀಕ್ಷಿತವಾಗಿತ್ತು. ಅಫ್ಘಾನ್‌ ರನ್‌ರೇಟ್‌ ಈಗ ಪ್ಲಸ್‌ 3.097ರಷ್ಟಿದೆ. ಮುಂದೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ಕಠಿನ ಸವಾಲು ಅಫ್ಘಾನಿಸ್ಥಾನದ ಮುಂದಿದೆ. ಇನ್ನೊಂದೆಡೆ ನಮೀಬಿಯಾ 2 ಪಂದ್ಯಗಳಲ್ಲಿ ಅನುಭವಿಸಿದ ಮೊದಲ ಸೋಲು ಇದಾಗಿದೆ.

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-5 ವಿಕೆಟಿಗೆ 160 (ಶಾಜಾದ್‌ 45, ನಬಿ ಔಟಾಗದೆ 32, ಅಫ್ಘಾನ್‌ 31, ಈಟನ್‌ 21ಕ್ಕೆ 2, ಟ್ರಂಪಲ್‌ಮ್ಯಾನ್ 34ಕ್ಕೆ 2). ನಮೀಬಿಯಾ-9 ವಿಕೆಟಿಗೆ 98 (ವೀಸ್‌ 26, ಟ್ರಂಪಲ್‌ಮ್ಯಾನ್ ಔಟಾಗದೆ 12, ಎರಾಸ್ಮಸ್‌ 12, ಹಮೀದ್‌ 9ಕ್ಕೆ 3, ನವೀನ್‌ 26ಕ್ಕೆ 3, ನೈಬ್‌ 19ಕ್ಕೆ 2). ಪಂದ್ಯಶ್ರೇಷ್ಠ: ನವೀನ್‌ ಉಲ್‌ ಹಕ್‌.

ಕೊನೆಯ ಪಂದ್ಯ ಆಡಿದ ಅಸ್ಗರ್ ಅಫ್ಘಾನ್‌
ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ಥಾನ ತಂಡದ ಮಾಜಿ ನಾಯಕ ಅಸ್ಗರ್ ಅಫ್ಘಾನ್‌ ತಮ್ಮ ವಿದಾಯದ ಸುದ್ದಿಯನ್ನು ಬಿತ್ತರಿಸಿ ಅಚ್ಚರಿ ಮೂಡಿಸಿದರು. ಇದೇ ತನ್ನ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಎಂಬುದಾಗಿ ಘೋಷಿಸಿದರು.

ಇದನ್ನೂ ಓದಿ:ನ. 5ಕ್ಕೆ ಪ್ರಧಾನಿ ಉತ್ತರಾಖಂಡ ಭೇಟಿ : ಕಾರ್ಯಕ್ರಮ ರಂಗು ಹೆಚ್ಚಿಸಲಿರುವ ಸಾಧು-ಸಂತರು

ಕಳೆದೊಂದು ದಶಕದಿಂದ ಅಫ್ಘಾನಿಸ್ಥಾನ ತಂಡದ ಆಧಾರಸ್ತಂಭವೇ ಆಗಿದ್ದ ಬಲಗೈ ಬ್ಯಾಟ್ಸ್‌ಮನ್‌ ಅಸ್ಗರ್ ಅಫ್ಘಾನ್‌ ಮೊದಲು ಅಸ್ಗರ್ ಸ್ತಾನಿಕ್‌ಜಾಯ್‌ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು. ಇವರು 6 ಟೆಸ್ಟ್‌, 115 ಏಕದಿನ ಹಾಗೂ 75 ಟಿ20 ಪಂದ್ಯಗಳ ಅನುಭವಿ. ಈ 3 ಮಾದರಿಯ ಪಂದ್ಯಗಳಲ್ಲಿ ಕ್ರಮವಾಗಿ 440 ರನ್‌, 2,467 ಹಾಗೂ 1,358 ರನ್‌ ಬಾರಿಸಿದ್ದಾರೆ. ಇದು 2 ಶತಕಗಳನ್ನು ಒಳಗೊಂಡಿದೆ. ಬಾರಿಸಿದ ಒಟ್ಟು ಅರ್ಧ ಶತಕಗಳ ಸಂಖ್ಯೆ 19. ರವಿವಾರದ ಅಂತಿಮ ಇನ್ನಿಂಗ್ಸ್‌ನಲ್ಲಿ 31 ರನ್‌ ಮಾಡಿದರು. ಅಸYರ್‌ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಅವರ 12 ವರ್ಷಗಳ ಕ್ರಿಕೆಟ್‌ ಬದುಕಿಗೆ ರವಿವಾರ ತೆರೆ ಬಿತ್ತು.

ಪಾಕ್‌ ವಿರುದ್ಧ ಸೋತ ಆಘಾತ
ಅಸ್ಗರ್ ಅಫ್ಘಾನ್‌ ಟಿ20 ವಿಶ್ವಕಪ್‌ ನಡುವಲ್ಲೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದು ಅಚ್ಚರಿಯೆನಿಸಿದೆ. ಇನ್ನಿಂಗ್ಸ್‌ ಮುಗಿದ ಬಳಿಕ ಪ್ರತಿಕ್ರಿಯಿಸಿದ ಅಫ್ಘಾನ್‌ ಇದಕ್ಕೆ ಕಾರಣ ನೀಡಿದರು. ಪಾಕಿಸ್ಥಾನ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲಿನಿಂದ ಬೇಸತ್ತು ತಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

“ಪಾಕ್‌ ಎದುರಿನ ಸೋಲು ನಮ್ಮೆಲ್ಲರಿಗೂ ಬಹಳ ಆಘಾತ ತಂದೊಡ್ಡಿದೆ. ಕಿರಿಯ ಆಟಗಾರರಿಗೂ ನಾನು ದಾರಿ ಬಿಡಬೇಕಿದೆ. ಇದಕ್ಕೆ ಇದೇ ಸೂಕ್ತ ಸಮಯ ಎಂದು ಭಾವಿಸಿದ್ದೇನೆ’ ಎಂದು ಅಫ್ಘಾನ್‌ ಭಾವುಕರಾಗಿ ನುಡಿದರು.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.