ಲಖೀಂಪುರ ಕಿಸಾನ್ ಸ್ಮತಿ ದಿವಸ ಆಚರಿಸುವಂತೆ ಸಮಾಜವಾದಿ ಪಕ್ಷ ಕರೆ
Team Udayavani, Nov 2, 2021, 10:45 PM IST
ಲಕ್ನೋ: ಸಮಾಜವಾದಿ ಪಕ್ಷದ ಎಲ್ಲ ಸದಸ್ಯರು ಮತ್ತು ಮೈತ್ರಿ ಪಕ್ಷಗಳಿಗೆ ಪ್ರತಿ ತಿಂಗಳ 3ನೇ ತಾರೀಖನ್ನು “ಲಖೀಂಪುರ ಕಿಸಾನ್ ಸ್ಮತಿ ದಿವಸ’ವಾಗಿ ಆಚರಿಸುವಂತೆ ಸಮಾಜವಾದಿ ಪಕ್ಷ ಕರೆ ನೀಡಿದೆ.
ಅ.3ರಂದು ಲಖೀಂಪುರ ಖೇರಿಯಲ್ಲಿ ನಡೆದ ಕೃತ್ಯದ ನೆನಪಿಗೆ ಈ ದಿನಾಚರಣೆ ನಡೆಸಲು ಕೋರಲಾಗಿದೆ.
ಲಖೀಂಪುರ ಖೇರಿಯಲ್ಲಿ ಅ.3ರಂದು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಗಾಡಿ ಹರಿಸಲಾಗಿದ್ದು, ನಾಲ್ವರು ರೈತರು ಸಾವನ್ನಪ್ಪಿದ್ದರು. ಘಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಇಬ್ಬರು ಬಿಜೆಪಿ ಕಾರ್ಯಕರ್ತರು, ಅವರ ಚಾಲಕ ಹಾಗೂ ಓರ್ವ ಪತ್ರಕರ್ತರೂ ಸಾವನ್ನಪ್ಪಿದ್ದರು. ಮೃತ ರೈತರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ 3ರಂದು ಲಖೀಂಪುರ ಕಿಸಾನ್ ಸ್ಮತಿ ದಿವಸವಾಗಿ ಆಚರಿಸೋಣ. ಹಾಗೆಯೇ ನ.3ರಂದು ಮನೆಯಲ್ಲಿ ದೀಪ ಬೆಳಗಿಸಿ ಗೌರವಿಸೋಣ ಎಂದು ಪಕ್ಷ ಹೇಳಿದೆ.
ಇದನ್ನೂ ಓದಿ:ಮಾಜಿ ಸಚಿವ ಅನಿಲ್ ದೇಶ್ಮುಖ್ ಬಂಧನ