ಹಸಿರಾಯಿತು ಬರಡು ಭೂಮಿ! 30 ಸಾವಿರ ಗಿಡ ಬೆಳೆಸಿದ ನಿಸರ್ಗ ಪ್ರೇಮಿಗಳು
ಬರಗಾಲಪೀಡಿತ ಲಾತೂರ್ನಲ್ಲಿ ಬೆಳೆದು ನಿಂತಿತು ಅರಣ್ಯ
Team Udayavani, Nov 3, 2021, 9:45 PM IST
ಮುಂಬೈ: ಮಾಲಿನ್ಯ ಕಡಿಮೆಯಾಗಬೇಕೆಂದರೆ, ಗಿಡಗಳನ್ನು ನೆಡಬೇಕೆನ್ನುವ ಮಾತನ್ನು ಎಲ್ಲರೂ ಹೇಳುತ್ತಾರಾದರೂ ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ಮಹಾರಾಷ್ಟ್ರದಲ್ಲಿ ಬರಡು ಭೂಮಿಯಾಗಿದ್ದ ಬೆಟ್ಟವೊಂದನ್ನು ಒಂದಿಷ್ಟು ಜನರು ಸೇರಿಕೊಂಡು ಹಚ್ಚ ಹಸಿರಿನ ಕಾಡಾಗಿಸಿದ್ದಾರೆ.
ಲಾತೂರ್ ಜಿಲ್ಲೆಯ ರಾಮ್ವಾಡಿ ಗ್ರಾಮದಲ್ಲಿ 61 ಎಕರೆ ಜಾಗದಲ್ಲಿದ್ದ ಬೆಟ್ಟವೊಂದು ಬರಡಾಗಿತ್ತು. ಅದನ್ನು ಕಂಡು ಬೇಸರಗೊಂಡ ನಟ ಸಯಾಜಿ ಶಿಂಧೆ “ಸಹ್ಯಾದ್ರಿ ದೇವ್ರಾಯ್’ ಹೆಸರಿನ ಎನ್ಜಿಒ ಸ್ಥಾಪಿಸಿ, ಅದರ ಮೂಲಕ ಆ ಪ್ರದೇಶದಲ್ಲಿ ಗಿಡ ನೆಡಲಾರಂಭಿಸಿದರು. 2018ರಿಂದ ಈವರೆಗೆ ಅಲ್ಲಿ 35 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಪ್ರಸ್ತುತ 30 ಸಾವಿರ ಗಿಡಗಳು ಬೆಳೆದು ದೊಡ್ಡ ಮರಗಳಂತಾಗಿವೆ ಎನ್ನಲಾಗಿದೆ.
ಗಿಡಗಳಿಗೆ ನೀರು ಪೂರೈಸುವ ಹಿನ್ನೆಲೆಯಲ್ಲಿ ಬೆಟ್ಟದ ಹಲವೆಡೆ “ಪಾನಿ ಆದ್ವಾ, ಪಾನಿ ಜಿರ್ವಾ’ ಎನ್ನುವ ಸಿಸ್ಟಂ ಮೂಲಕ ಇಂಗುಗುಂಡಿಗಳನ್ನು ರಚಿಸಲಾಗಿದೆ. ಭಾರತೀಯ ತಳಿಗಳಾದ ಆಲ, ಬೇವು ಸೇರಿ ಒಟ್ಟು 60 ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.
ಇದನ್ನೂ ಓದಿ:ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ: ಸಚಿವ ನಾಗೇಶ್
ಶಿಂಧೆ ಸ್ಫೂರ್ತಿ:
ಸಯಾಜಿ ಶಿಂಧೆ ಅವರು 2018ರಲ್ಲಿ ಲಾತೂರ್ನ 400 ವರ್ಷಗಳಷ್ಟು ಹಳೆಯ ಆಲದ ಮರ ನೋಡಲೆಂದು ಆಗಮಿಸಿದ್ದರು. ಆ ಮರದ ಕೆಳಗೇ ವರ್ಕ್ಶಾಪ್ ಒಂದನ್ನು ಮಾಡಿದ್ದರು. ಅದಾದ ನಂತರ ಜನರು ಹೆಚ್ಚಾಗಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗಿ ಸಹ್ಯಾದ್ರಿ ದೇವ್ರಾಯ್ ಎನ್ಜಿಒ ಜಿಲ್ಲಾ ಸಂಯೋಜಕರಾಗಿರುವ ಸುಪಣ್ì ಜಗ³ತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ