ವಿಜಯಪುರ: ಮೊಮ್ಮಗನ ಆಸ್ಪತ್ರೆಗೆ ನೇತ್ರದಾನ ಮಾಡಿದ ಅಜ್ಜಿ
Team Udayavani, Nov 10, 2021, 12:44 PM IST
ವಿಜಯಪುರ : ನೇತ್ರ ಶಸ್ತ್ರಚಿಕಿತ್ಸೆಯ ಸಾಧನೆಗಾಗಿ ಈಚೆಗಷ್ಟೇ ಸ್ವಾತಂತ್ರ್ಯ ಸುವರ್ಣ ಪ್ರಶಸ್ತಿ ಸ್ವೀಕರಿಸಿರುವ ನೇತ್ರ ತಜ್ಞವೈದ್ಯ ಡಾ.ಪ್ರಭುಗೌಡ ಅವರ ಶತಾಯುಷಿ ಅಜ್ಜಿ ನಿಧನರಾಗಿದ್ದು, ಮೊಮ್ಮಗನ ಆಸ್ಪತ್ರೆಗೆ ನೇತ್ರದಾನ ಮಾಡಿದ್ದಾರೆ.
ಜಿಲ್ಲೆಯ ತಾಳಿಕೊಟಿ ತಾಲೂಕಿನ ಚಾಬನೂರು ಗ್ರಾಮದ ಸಿದ್ದಮ್ಮ ಗೌಡತಿ ಪಾಟೀಲ ಬುಧವಾರ ಬೆಳಿಗ್ಗೆ ಸ್ವಗ್ರಾಮದಲ್ಲಿ ವಯೋಸಹಜ ಕಾಯಿಲೆಯಿಂದ ನಿಧಾನರಾದರು.
ಮೂರು ಜನ ಗಂಡು, ಮೂರು ಜನ ಹೆಣ್ಣು ಮಕ್ಕಳು, ಮೊಮ್ಮಕಳನ್ನು ಹೊಂದಿರುವ ಶಾತಾಯುಷಿ ಸಿದ್ದಮ್ಮ ಅವರು ತಮ್ಮ ಇಚ್ಛೆಯಂತೆ ಮರಣಾನಂತರ ತಮ್ಮ ಕಣ್ಣುಗಳನ್ನು ತಮ್ಮ ಮೊಮ್ಮಗ ನೇತ್ರತಜ್ಞ ಡಾ.ಪ್ರಭುಗೌಡ ಅವರ ಅನುಗ್ರಹ ನೇತ್ರ ಭಂಡಾರಕ್ಕೆ ದಾನಮಾಡಿದ್ದರು.
ಹೀಗಾಗಿ ಅಜ್ಜಿಯ ಇಚ್ಛೆಯಂತೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈಧ್ಯ ದಂಪತಿ ಡಾ.ಪ್ರಭುಗೌಡ ಹಾಗೂ ಡಾ.ಮಾಲಿನಿ ಅವರು ಅಜ್ಜಿಯ ಸಾವಿನ ಸುದ್ದಿ ತಿಳಿಯುತ್ತಲೇ ಚಬನೂರು ಗ್ರಾಮಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮೂಲಕ ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು.
ಶತಾಯುಷಿ ಸಿದ್ದಮ್ಮ ಅವರ ಎರಡು ಕಣ್ಣುಗಳನ್ನು ವಿಜಯಪುರ ಅನುಗ್ರಹ ನೇತ್ರ ಭಂಡಾರದಲ್ಲಿ ಶೇಖರಿಸಿ ಇಡಲಾಗಿದೆ.
ಮುಂದಿನ ಒಂದೆರಡು ದಿನಗಳಲ್ಲಿ ಕಣ್ಣು ಕಸಿಗೆ ಕಾಯುತ್ತಿರುವ ಇಬ್ಬರು ಅರ್ಹರಿಗೆ ತಮ್ಮದೇ ಕಣ್ಣಿನ ಆಸ್ಪತ್ರೆಯಲ್ಲಿ ಅಜ್ಜಿಯ ನೇತ್ರ ಅಳವಡಿಸುವುದಾಗಿ ಡಾ.ಪ್ರಭುಗೌಡ ಪಾಟೀಲ ಉದಯವಾಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ