ಕೋಟಿಲಿಂಗೇಶ್ವರ ದೇಗುಲ: ಕ್ಷೇತ್ರದ ಇತಿಹಾಸ ಸಾರುವ ಶಿಲಾ ವೈವಿಧ್ಯತೆ


Team Udayavani, Nov 13, 2021, 3:40 AM IST

 ಕೋಟಿಲಿಂಗೇಶ್ವರ ದೇಗುಲ: ಕ್ಷೇತ್ರದ ಇತಿಹಾಸ ಸಾರುವ ಶಿಲಾ ವೈವಿಧ್ಯತೆ

ಕೋಟೇಶ್ವರ:  ಪುರಾಣ ಪ್ರಸಿದ್ಧ ಸಪ್ತ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ ಪುರಾಣದಲ್ಲಿ ಧ್ವಜಪುರವೆಂದು ಕರೆಯಲ್ಪಡುತ್ತಿದ್ದು, ವಿವಿಧ ತಲೆಮಾರುಗಳಲ್ಲಿ ಬದುಕಿ ಬಾಳಿದ ಜನರ ಸಾಂಸ್ಕೃತಿಕ ಪರಂಪರೆ ಸೂಚಿಸುತ್ತದೆ. ಕೊಡಿಹಬ್ಬವೆಂದು ಜನಜನಿತವಾಗಿರುವ ಇಲ್ಲಿನ ಜಾತ್ರೆಯು ನ.19ರಂದು ನಡೆಯಲಿದ್ದು , ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ.

ಸ್ಥಳ ಪುರಾಣ:

ಕ್ರಿ.ಶ. 1261ರ ಶಾಸನದಲ್ಲಿ ಈ ಊರಿನ ಹೆಸರು  ಕುಡಿಪೂರು ಆಗಿತ್ತು. ಆ ಹಿನ್ನೆಲೆಯಲ್ಲಿ ಇಲ್ಲಿ ನಡೆಯುವ  ಹಬ್ಬವನ್ನು ಕೊಡಿಹಬ್ಬವೆಂದು ಹೇಳಲಾಗುತ್ತಿದೆ. ಕೊಡಿ, ಕೋಡಿ ಎಂದರೆ ಭೂಮಿಯ ತುದಿ. ನದಿಯ ನೀರು  ಸಮುದ್ರಕ್ಕೆ ಸೇರುವ ಜಾಗ. ನಾನಾ ವಿಶ್ಲೇಷಣೆ ಅವಲೋಕಿಸಿದರೆ ಕೋಟೀಶ್ವರ, ಕೋಟೇಶ್ವರ, ಕೋಡೇಶ್ವರ ಹೀಗೆ ಉಚ್ಚಾರ  ಸೌಲಭ್ಯಕ್ಕನುಗುಣವಾಗಿ ಕರೆಯಲ್ಪಡುತ್ತಿ ದ್ದರೂ ಸ್ಕಂದ ಪುರಾಣಗಳಲ್ಲಿ ಹೇಳಿರುವ ಕೋಟಿ ಕ್ಷೇತ್ರ ಇದನ್ನೇ ಸಮರ್ಥಿಸುತ್ತದೆ. ಡಾ| ಆರ್‌.ಕೆ. ಮಣಿಪಾಲ, ಡಾ| ಶಿವರಾಮ ಕಾರಂತ ಹೀಗೆ ಅನೇಕರು ಕೋಟೇಶ್ವರದ ಸ್ಥಳ ಪುರಾಣದ ಬಗ್ಗೆ  ಧ್ವಜಪುರವೆಂದೇ ವಿಶ್ಲೇಷಿಸಿದ್ದಾರೆ.

ಇಲ್ಲಿ ದೊರೆತಿರುವ ಶಾಸನ ಕಲ್ಲುಗಳು ಕ್ಷೇತ್ರದ ವೈವಿಧ್ಯಪೂರ್ಣ ಪರಂಪರೆ ಸಾರುತ್ತವೆ. ಈ ಕಲ್ಲುಗಳ ಸುರಕ್ಷತೆಯ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.ಪರಶುರಾಮ ಸೃಷ್ಟಿಯ ಕಡಲತೀರದ ಕೋಟಿಲಿಂಗೇಶ್ವರ ದೇಗುಲದೊಡನೆ ಸಪ್ತ ಕ್ಷೇತ್ರವಾಗಿ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಶಂಕರನಾರಾಯಣ ಗೋಕರ್ಣ ಹಾಗೂ ಕೊಲ್ಲೂರು ಸೇರಿ ಏಳು ಕ್ಷೇತ್ರಗಳಾಗಿ ಮೋಕ್ಷದಾಯಕ ಪುಣ್ಯ ಸ್ಥಳಗಳೆಂದು ಪರಿಗಣಿಸಲ್ಪಟ್ಟಿವೆ.

ಶೂಲಪಾಣಿ, ಪರಶುಪಾಣಿ ದ್ವಾರಪಾಲಕರು ದೇಗುಲದ ಒಳಪೌಳಿಯ ಪ್ರವೇಶ ದ್ವಾರದಲ್ಲಿನ ಶೂಲಪಾಣಿ,  ಪರಶುಪಾಣಿ ದ್ವಾರಪಾಲಕರು ಕ್ಷೇತ್ರದ ಇತಿಹಾಸವನ್ನು ಸಾರುತ್ತವೆ. ಕೋಟೇಶ್ವರನ ಉದ್ಭವವಾಗಿ ಯುಗಾಂತರಗಳಾಗಿದೆ ಎಂದು ಪುರಾಣಗಳಲ್ಲಿ  ತಿಳಿಸ‌ಲಾಗಿದೆ.

ಏಳು ಪ್ರದಕ್ಷಿಣ ಪಥ ಒಳಗೊಂಡ ದೇಗುಲ:

ಏಳು ಪ್ರದಕ್ಷಿಣ ಪಥ ಒಳಗೊಂಡ ದೇಗುಲವು ಪೂರ್ವಾಭಿಮುಖವಾಗಿದೆ. 60 ಸೆಂ.ಮೀ. ವ್ಯಾಸದ ವೃತ್ತಾಕಾರದ ಶಿಲಾ ಬಾವಿಯಿದೆ. 45 ಸೆಂ.ಮೀ. ಆಳದಲ್ಲಿ ಮೊರಬು ಶಿಲೆಗಳಿವೆ. ಈ ಶಿಲಾ ಬಾವಿಯ ಮೇಲೆ ಕರಿಶಿಲೆಯ ಬƒಹತ್‌ ಪಾಣಿಪೀಠವಿದೆ. ಅದರ ಮೇಲೆ ಶಿವನ ಪ್ರತಿಮೆಯನ್ನಿಟ್ಟು  ಪೂಜಿಸಲಾಗುತ್ತಿದೆ. ಹೊರಭಾಗದಲ್ಲಿ ಅಗಲ ಕಿರಿದಾದ 2ನೇ ಸುತ್ತು ಇದ್ದು ,  ಮುಂಭಾಗ ವಿಸ್ತಾರವಾಗಿದೆ, ಇದನ್ನು ಸುಕನಾಸಿ ಎಂದು ಕರೆಯುತ್ತಾರೆ.

ಇಲ್ಲಿ ಬ್ರಹ್ಮ, ಶಿವ, ವಿಷ್ಣು ಮೊದಲಾದ ದೇವರ ಉಬ್ಬು ಶಿಲ್ಪ ಬಹುಪ್ರಾಚೀನ ಕಾಲದ್ದಾಗಿದೆ. ನಾನಾ ರೀತಿಯಲ್ಲಿ  ಕ್ಷೇತ್ರದ ಇತಿಹಾಸ ಸಾರುವ ಸಂಶೋಧಕರಿಗೆ ಸವಾಲಾಗಿರುವ ಕೋಟಿಲಿಂಗೇಶ್ವರ ದೇಗುಲವು 1,400 ವರ್ಷಗಳ ಇತಿಹಾಸ ಹೊಂದಿದೆ.

ರಾಜ್ಯದ ಅತೀ ದೊಡ್ಡ ಕೋಟಿತೀರ್ಥ ಪುಷ್ಕರಿಣಿ:

ನಾಲ್ಕೂವರೆ ಎಕರೆ ವಿಸ್ತೀರ್ಣದ ಇಲ್ಲಿನ ಕೋಟಿ ತೀರ್ಥ ಪುಷ್ಕರಿಣಿ ಪುರಾಣ ಕಾಲದಲ್ಲಿ ಬ್ರಹ್ಮತೀರ್ಥ, ಬ್ರಹ್ಮಸರೋವರ, ಶಿವಗಂಗೆ, ಕೋಟಿ ಸರೋವರ  ಮುಂತಾದ ಹೆಸರುಗಳಿಂದ ಗುರುತಿಸ್ಪಟ್ಟಿತ್ತು. ಈ

ಕೆರೆಯ ಆಗ್ನೇಯ ದಿಕ್ಕಿನ ಮೂಲೆಯಲ್ಲಿ  ಒಂದು ಸುರಂಗವಿದ್ದು, ಅದರ ಇನ್ನೊಂದು ತುದಿ ಕೋಟ ಸಮೀಪದ ವಂಡಾರು ಎಂಬಲ್ಲಿ ಇದ್ದು ಇದರಲ್ಲಿ  ಮೊಸಳೆ ವಾಸವಾಗಿತ್ತು ಎಂಬ ಪ್ರತೀತಿ ಇದೆ. ವಂಡಾರು  ಕಂಬಳವಾದಾಗ ಕೋಟಿತೀರ್ಥ ಪುಷ್ಕರಿಣಿ ನೀರು ಕೆಸರಾಗುತ್ತಿದ್ದು ಇಲ್ಲಿ ಕೊಡಿಹಬ್ಬದ ದಿನ ರಥ ಎಳೆದಾಗ ವಂಡಾರು ಕಂಬಳ ಗದ್ದೆಯಲ್ಲಿ  ಧೂಳು ಏಳುತ್ತಿತ್ತು ಎಂದು ವಿರ್ಮಶಕರು ವಿಶ್ಲೇಷಿಸಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.