ನಾಥೂರಾಮ್ ಗೋಡ್ಸೆ ಪುತ್ಥಳಿ ಸ್ಥಾಪನೆ: ಮಹಾಸಭಾ ಘೋಷಣೆ
Team Udayavani, Nov 16, 2021, 10:00 PM IST
ಗ್ವಾಲಿಯರ್: ಗಾಂಧೀಜಿಯವರನ್ನು ಹತ್ಯೆಗೈದಿದ್ದ ನಾಥೂರಾಮ್ ಗೋಡ್ಸೆ ಪುತ್ಥಳಿಯೊಂದನ್ನು ಸ್ಥಾಪಿಸುವುದಾಗಿ ಹಿಂದೂ ಮಹಾಸಭಾ ಘೋಷಿಸಿದೆ.
1949ರಲ್ಲಿ ಗಾಂಧಿಯವರನ್ನು ಹತ್ಯೆಗೈದಿದ್ದಕ್ಕಾಗಿ ಗೋಡ್ಸೆಯನ್ನು ಹರ್ಯಾಣದ ಅಂಬಾಲಾ ಕೇಂದ್ರ ಕಾರಾಗೃಹದಲ್ಲಿ ಅದೇ ವರ್ಷ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
“ಈ ವರ್ಷ ಅವರ ಪುಣ್ಯಸ್ಮರಣೆಯಂದು ಅವರ ಪುತ್ಥಳಿಯನ್ನು ನಿರ್ಮಿಸಲಾಗುತ್ತದೆ; ಪುತ್ಥಳಿಗೆ ಅವರನ್ನು ಗಲ್ಲಿಗೇರಿಸಿದ ಅಂಬಾಲಾ ಜೈಲಿನ ಮಣ್ಣನ್ನು ಬಳಸಲಾಗುತ್ತದೆ’ ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಡಾ. ಜೈವೀರ್ ಭರದ್ವಾಜ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು ಬಿಜೆಪಿ ಸರ್ಕಾರಗಳ ಸಾಧನೆ: ಹೆಚ್.ಡಿ.ರೇವಣ್ಣ