“ಲೂಟಿ ಗ್ಯಾಂಗ್’ ಖರ್ಗೆ ಅಂಗಡಿ ಬಂದ್: ನಳಿನ್ ಕುಮಾರ್ ಕಟೀಲು ವಾಗ್ಧಾಳಿ
Team Udayavani, Nov 21, 2021, 6:25 AM IST
ಕಲಬುರಗಿ: ಸುಮಾರು ಐವತ್ತು ವರ್ಷಗಳಿಂದ ಕಲಬುರಗಿ ಲೂಟಿಯಲ್ಲಿ ತೊಡಗಿದ್ದ “ಲೂಟಿ ಗ್ಯಾಂಗ್ ಖರ್ಗೆ ಅಂಗಡಿ’ ಬಂದ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ಧಾಳಿ ನಡೆಸಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖರ್ಗೆ ಗ್ಯಾಂಗ್ ಎನ್ನುವುದು “ಲೂಟಿ ಗ್ಯಾಂಗ್’ ಆಗಿತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೊಡ್ಡ ಖರ್ಗೆ (ಡಾ| ಮಲ್ಲಿಕಾರ್ಜುನ ಖರ್ಗೆ) ಅವರನ್ನು ಬೆಂಗಳೂರಲ್ಲೇ ಕೂರಿಸಿದಿರಿ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ 24 ಸ್ಥಾನ ನೀಡುವ ಮೂಲಕ ಸಣ್ಣ ಖರ್ಗೆ (ಪ್ರಿಯಾಂಕ್ ಖರ್ಗೆ) ಅವರನ್ನು ಊರು ಬಿಡಿಸಿದ್ದೀರಿ. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಗೆಲುವು ಸಾಧಿಸಲಿದ್ದು, “ಲೂಟಿ ಗ್ಯಾಂಗ್ ಖರ್ಗೆ ಅಂಗಡಿ’ ಸಂಪೂರ್ಣ ಬಂದ್ ಆಗಲಿದೆ ಎಂದರು.