ನವಿಲೂರಿನಲ್ಲಿ ಕದಂಬ ಕಾಲದ ಶಾಸನ ಶೋಧ
ಮೇಲ್ಭಾಗದಲ್ಲಿ ಸೂರ್ಯ, ಎಡಭಾಗದಲ್ಲಿ ಖಡ್ಗ, ಚಂದ್ರರ ಉಬ್ಬುಶಿಲ್ಪಗಳಿವೆ.
Team Udayavani, Nov 24, 2021, 5:58 PM IST
ಧಾರವಾಡ: ಇಲ್ಲಿಯ ನವಿಲೂರಿನ (ನವಲೂರು) ಜನತಾ ಪ್ಲಾಟಿನಲ್ಲಿರುವ ಶಿವಾನಂದ ಮಾದರ ಅವರ ಮನೆಯ ಹಿಂಭಾಗದ ಜಾಗದಲ್ಲಿ ಭೂಮಿಯ ಅಡಿಯಲ್ಲಿ ಹುದುಗಿದ್ದ ಕದಂಬ ಮಹಾಮಂಡಳೇಶ್ವರ ಮನೆತನದ ಮುಮ್ಮಡಿ ಜಯಕೇಶಿಯ ಕಾಲದ ಹೊಸ ಶಾಸನವೊಂದು ಪತ್ತೆಯಾಗಿದೆ.
ಮಾದರ ಮನೆ ಹಿಂಭಾಗ ಸ್ವತ್ಛಗೊಳಿಸುವಾಗ ಭೂಮಿಯಲ್ಲಿ ಹುಗಿದಿದ್ದ ಈ ಶಾಸನ ಬೆಳಕಿಗೆ ಬಂದಿದೆ. 6 ಅಡಿ ಎತ್ತರ 3 ಅಡಿ ಅಗಲದ ಈ ಶಾಸನದ ಮೇಲ್ಭಾಗದ 2 ಅಡಿಯ ಮಧ್ಯದಲ್ಲಿ ದೇವಾಲಯದ ಮಂಟಪವಿದ್ದು, ಶಿವಲಿಂಗವನ್ನು ಧೂಪಾರತಿಯೊಂದಿಗೆ ಪೂಜಿಸುತ್ತಿರುವ ಕಾಳಾಮುಖ ಯತಿಯಿದ್ದಾನೆ.
ಶಿವಲಿಂಗದ ಬಲಭಾಗದಲ್ಲಿ ಕುಳಿತ ನಂದಿ, ಎಡಭಾಗದಲ್ಲಿ ಕರುವಿಗೆ ಹಾಲು ಕುಡಿಸುತ್ತಿರುವ ಆಕಳುಗಳ ಉಬ್ಬುಶಿಲ್ಪಗಳಿವೆ. ಅಂತೆಯೇ ಬಲಭಾಗದ ಮೇಲ್ಭಾಗದಲ್ಲಿ ಸೂರ್ಯ, ಎಡಭಾಗದಲ್ಲಿ ಖಡ್ಗ, ಚಂದ್ರರ ಉಬ್ಬುಶಿಲ್ಪಗಳಿವೆ. ಕೆಳಗೆ 2 ಚಿಕ್ಕ ಪಟ್ಟಿಕೆಯಲ್ಲಿ ಎರಡು ಸಾಲುಗಳ ಶಾಸನವಿದ್ದು, ಅದರಲ್ಲಿ ಶಿವ ಮತ್ತು ವರಾಹವತಾರ ವಿಷ್ಣುವಿನ ಸ್ತುತಿಗಳಿವೆ. ಕೆಳಗಿನ ದೊಡ್ಡ ಫಲಕದಲ್ಲಿ 37 ಸಾಲುಗಳ ಶಾಸನವನ್ನು ಅತ್ಯಂತ ಸುಂದರವಾದ ಅಕ್ಷರಗಳಲ್ಲಿ ಆಳವಾಗಿ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ.
ಗೋವೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಸುಪ್ರಸಿದ್ಧ ಗೋವೆಯ ಕದಂಬ ಮಹಾಮಂಡಳೇಶ್ವರ ಮನೆತನದ ಮುಮ್ಮಡಿ ಜಯಕೇಶಿಯ ಕಾಲದ ಶಾಸನವಿದಾಗಿದೆ. ಜಯಕೇಸಿದೇವ ವರ್ಷದ 9ನೆಯ ರಾಕ್ಷಸ ಸಂವತ್ಸರದ ಶ್ರಾವಣ ಬಹುಳ ಛಟ್ಟಿ ವಡ್ಡವಾರದಂದು ಈ ಶಾಸನ ಬರೆಸಲಾಗಿದೆ. ಇದು ಕ್ರಿ.ಶ.1186ರಲ್ಲಿ ಬರುತ್ತದೆ.
ಕದಂಬ ಶಿವಚಿತ್ತ ವೀರ ಪೆರ್ಮಾಡಿ ದೇವರಸರು ಕೊಟ್ಟ ಸರ್ವ ನಮಸ್ಯದ ಪಿರಿಯ ಬ್ರಹ್ಮಪುರಿ ಮತ್ತು ಪಿರಿಯ ಅಗ್ರಹಾರವಾದ ನವಿಲೂರ 200 ಮಹಾಜನರು ಗವರೆಗಳ (ವರ್ತಕರ ಪ್ರಕಾರ) ಸಭಾಮಂಟಪದಲ್ಲಿ ಮಹಾನಾಡಾಗಿ ಸೇರಿ, ಬಿಲ್ಲ ಮೂನೂರ್ವರು ಎಂದು ಕರೆಸಿಕೊಳ್ಳುವ ಆಯುಧ ಜೀವಿಗಳ ಸಂಘದವರು ಕಟ್ಟಿಸಿದ ಬಿಲ್ಲೇಶ್ವರ ದೇವರ ನೈವೇದ್ಯ, ನಂದಾದೀಪ, ಚೈತ್ರ ಪವಿತ್ರ ಹಬ್ಬಗಳಿಗಾಗಿ ಬಿಟ್ಟ ಭೂದಾನ, ಹೂದೋಟ, ನಿವೇಶನ, ಹಣದಾನ ಮತ್ತು ಸುಂಕದಾನಗಳನ್ನು ಈ ಶಾಸನವು ತಿಳಿಸುತ್ತದೆ.
ಬಿಲ್ಲುಗಾರರು, ಕುರಿಬರು, ಕಬ್ಬಿಲರು ಬಿಟ್ಟ ಸುಂಕ ದಾನಗಳನ್ನೂ ತಿಳಿಸುತ್ತದೆ. ಕೊನೆಯಲ್ಲಿ ಈ ಬಿಲ್ಲೇಶ್ವರ ದೇವಸ್ಥಾನದ ಸ್ಥಾನಪತಿಗಳು ಕೇದಾರ ಜೀಯರೆಂದು ಹೆಸರಿಸುತ್ತದೆ. ಮಹಾಜನರು ಮತ್ತು ಬಿಲ್ಲ ಮೂನೂರ್ವರನ್ನು ಅವರ ವಿಶೇಷಣ ಗಳೊಂದಿಗೆ ಶಾಸನವು ಬಣ್ಣಿಸುತ್ತದೆ. ಸದ್ಯ ಊರಲ್ಲಿ ಕೇವಲ 2 ಶಾಸನಗಳು ಮತ್ತು 2 ವೀರಗಲ್ಲುಗಳು ಇವೆ. ಈ ಕ್ಷೇತ್ರ ಕಾರ್ಯದ ಅಧ್ಯಯನಕ್ಕೆ ಸ್ಥಳೀಯರಾದ ಚೆನ್ನಯ್ಯಸ್ವಾಮಿ ಜಿ.ಹಿರೇಮಠ, ಹನುಮಂತ ಪೂಜಾರಿ, ಮಂಜುನಾಥ ಬಡಕುರಿ, ಶಿವಾನಂದ ಮಾದರ ಮತ್ತು ರೇಖಾ ಶೆಟ್ಟರ ಸಹಕಾರ ನೀಡಿದ್ದಾರೆಂದು ಸಂಶೋಧಕಿ ಗೋಗಿ ತಿಳಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ನವಿಲೂರು ಒಂದು ಜೈನ ಕೇಂದ್ರವಾಗಿತ್ತು.
ಉತ್ತರ ಕರ್ನಾಟಕದ ಶಾಸನಗಳಲ್ಲಿ ಮತ್ತು ಶ್ರವಣಬೆಳಗೊಳದ ಶಾಸನಗಳಲ್ಲಿ ನವಿಲೂರು ಸಂಘದ ವಿವರಗಳಿವೆ. ಇದು ಜೈನಮುನಿಗಳ ಸಂಘವಾಗಿದ್ದು, ಇದರ
ಮೂಲಸ್ಥಾನ ನವಿಲೂರೇ ಆಗಿತ್ತು. ಈ ಊರಿಗೆ ಈ ಹೆಸರು ಬರಲು ಕಾರಣ ಇಲ್ಲಿದ್ದ ಸರಸ್ವತಿ ದೇವಾಲಯ. ಅವಳ ವಾಹನ ನವಿಲು. ಆದರೆ ಈಗ ಪ್ರಾಚೀನ ದೇವಾಲಯಗಳು ಇಲ್ಲಿಲ್ಲ. ಆದರೆ ಶಾಸನ ದೊರೆತಿರುವ ಸ್ಥಳದಲ್ಲಿಯೇ ದೇವಾಲಯದ ಅಡಿಪಾಯವಿದೆ. ಅಲ್ಲಿ ಗಣಪತಿ ವಿಗ್ರಹವೊಂದು ದೊರೆತಿತ್ತೆಂದು ಶಿವಾನಂದ ಮಾದರ ತಿಳಿಸಿದರು.
ಭೂದಾನದ ವಿವರಗಳನ್ನು ನೀಡುವಾಗ ಅಗಸ್ತೇಶ್ವರ, ಹುಲಿಯಮೇಶ್ವರ ಮತ್ತು ಕುಂಭೇಶ್ವರದೇವರ ಭೂಮಿಯ ಉಲ್ಲೇಖ ಬರುವುದರಿಂದ ಈ ದೇವಾಲಯಗಳು ಈ ಊರಿನಲ್ಲಿದ್ದವೆಂದು ತಿಳಿದು ಬರುತ್ತದೆ. ಬಿದಿರು, ಕಳಲೆಗಳು ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದವು. ಎಂದರೆ ಊರ ಸುತ್ತ ಕಾಡಿತ್ತು. ಭತ್ತ, ಮಾವಿನಹಣ್ಣುಗಳ ಉಲ್ಲೇಖವೂ ಶಾಸನದಲ್ಲಿ ಇರುವುದರಿಂದ ಅವುಗಳನ್ನು ಇಲ್ಲಿ ಬೆಳೆಯುತ್ತಿದ್ದರೆಂದು ಸ್ಪಷ್ಟವಾಗುತ್ತದೆ.
ಹನುಮಾಕ್ಷಿ ಗೋಗಿ,
ಶಾಸನ ತಜ್ಞರು,ಧಾರವಾಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ