ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆ : ಇಂದಿನಿಂದ 2 ದಿನದ ನಾಟಕೋತ್ಸವ
Team Udayavani, Dec 14, 2021, 11:49 AM IST
ಶಿರಾ : ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯಿಂದ ಡಿ. 14 ರಿಂದ (ಇಂದಿನಿಂದ) ಎರಡು ದಿನದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಡಿ. 14 ರಂದು ಮಂಗಳವಾರ ಸಂಜೆ 7.30ಕ್ಕೆ ರಾಜೇಂದ್ರ ಕಾರಂತರ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ರಂಗ ಪ್ರದರ್ಶನದ ಮೂಲಕ ನಾಟಕೋತ್ಸವ ಚಾಲನೆಯಾಗಲಿದೆ.
ಡಿ. 15 ಬುಧವಾರ ಸಂಜೆ 7.30ಕ್ಕೆ ಆದಿಕವಿ ಪಂಪನ ಆದಿಪುರಾಣ ಗ್ರಂಥದಿಂದ ಆಯ್ದ ಭಾಗ ‘ಬಾಹುಬಲಿ ವಿಜಯಂ’ ರಂಗ ಪ್ರದರ್ಶನ ನಡೆಯಲಿದೆ. ಬಳ್ಳಾರಿ ಜಿಲ್ಲೆ ಸಿರಿಗೇರಿಯ ‘ಧಾತ್ರಿ ರಂಗ ಯಾತ್ರೆ’ ತಂಡ ಪ್ರದರ್ಶಿಸುವ ಈ ಎರಡು ನಾಟಕಗಳಲ್ಲಿ ಪ್ರತಿಷ್ಠಿತ ನೀನಾಸಂ, ಸಾಣೆಹಳ್ಳಿ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಕಲಾವಿದರು ಅಭಿನಯಿಸಲಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನವಾಗಿರುವ ಈ ನಾಟಕಗಳು ಮನೋರಂಜನೆ ಜತೆಗೆ ಮನೋ ವಿಕಾಸಕ್ಕೆ ಪೂರಕವಾಗಿವೆ. ಎರಡು ಪ್ರದರ್ಶನಗಳು ಉಚಿತವಾಗಿದ್ದು ಪ್ರೇಕ್ಷಕರು ಿದರ ಲಾಭವನ್ನು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Covishield Vaccine; ಹಾಕಿಸಿಕೊಂಡವರು ಐಸ್ಕ್ರೀಮ್ ತಿನ್ನಬಾರದಾ?
Supreme Court ಸಲಹೆ; ಹೊಂದಾಣಿಕೆಯು ಸುಖ ದಾಂಪತ್ಯದ ಅಡಿಪಾಯ
Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ