ಕಿಂಡಿ ಅಣೆಕಟ್ಟು ಹಲಗೆ ಜೋಡಣೆ ವಿಳಂಬ
ವರ್ಷವಿಡಿ ಸುರಿದ ಮಳೆರಾಯ: ಕಡಿಮೆಯಾಗದ ಹರಿವು
Team Udayavani, Dec 15, 2021, 5:40 PM IST
ಪುತ್ತೂರು: ವರ್ಷವಿಡೀ ಸುರಿದ ಮಳೆಯಿಂದಾಗಿ ಡಿಸೆಂಬರ್ನ ಅರ್ಧ ತಿಂಗಳು ಸಮೀಪಿಸಿದರೂ ಹೊಳೆ, ನದಿಗಳಲ್ಲಿನ ಕಿಂಡಿ ಅಣೆಕಟ್ಟಿಗೆ ಹಲಗೆ ಅಳ ವಡಿಸುವ ಪ್ರಮೇಯ ಇನ್ನೂ ಬಂದಿಲ್ಲ.
ಬೇಸಗೆ ನಿಧಾನಕ್ಕೆ ಕಾವೇರುತ್ತಿ ರುವಂತೆ ನೀರಿನ ಹರಿವಿನ ಮಟ್ಟ ಇಳಿಮುಖಗೊಂಡು ಕಿಂಡಿ ಅಣೆ ಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸ ಪ್ರಾರಂಭವಾಗುವುದಾದರೂ ಈ ಬಾರಿ ನೀರಿನ ಹರಿವು ಇನ್ನೂ ಇರುವ ಕಾರಣ ಹಲಗೆ ಜೋಡಣೆಯ ಚಿಂತೆ ತಟ್ಟಿಲ್ಲ.
ಫಲಾನುಭವಿಗಳಿಂದಲೇ ನಿರ್ವಹಣೆ
ಡಿಸೆಂಬರ್ ಮೊದಲ ವಾರದಿಂದಲೇ ನೀರಿನ ಹರಿವು ಗಮನಿಸಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಜಲಾನಯನ ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಫಲಾನುಭವಿಗಳೇ ಅದರ ನಿರ್ವಹಣೆ ಮಾಡಬೇಕಿದೆ. ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಹಭಾಗಿತ್ವ ಮೂಲಕ ನಿರ್ಮಾಣವಾಗುವ ಕಿಂಡಿ ಅಣೆಕಟ್ಟಿನಲ್ಲಿ 5 ವರ್ಷದ ಅನಂತರ ಸಣ್ಣ ಪುಟ್ಟ ದುರಸ್ತಿ ಗಷ್ಟೆ ಅನುದಾನ ನೀಡಲಾಗುತ್ತದೆ. ಹಲಗೆ ಹಾಕುವ ಮತ್ತು ತೆಗೆಯುವ ಕೆಲಸ ವನ್ನು ಕಿಂಡಿ ಅಣೆಕಟ್ಟು ವ್ಯಾಪ್ತಿಯ ಫಲಾ ನು ಭವಿಗಳೇ ಮಾಡಬೇಕು. ಇದಕ್ಕೆ ಪ್ರತ್ಯೇಕ ವಾಗಿ ಅನುದಾನ ಲಭ್ಯ ವಾಗುವುದಿಲ್ಲ.
ಹರಿವು ಪ್ರಮಾಣ ಹೆಚ್ಚಳ
ಕಳೆದ ಕೆಲವು ವರ್ಷಗಳಿಗೆ ಹೋಲಿಸಿ ದರೆ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬತ್ತಿದ್ದ ಹೊಳೆ, ನದಿಯಲ್ಲಿ ಈ ಬಾರಿ ನೀರಿನ ಹರಿವು ಹೆಚ್ಚಾಗಿದೆ. ನೀರಿನ ಹರಿವು ನಿಲ್ಲುವ ಸಮಯದಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ ಬೇಸಗೆ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಳಸಲಾಗುತ್ತದೆ. ಈ ಬಾರಿ ಆ ಅಗತ್ಯ ಕೊಂಚ ವಿಳಂಬವಾಗಿ ಎದುರಾಗ ಬಹುದು ಎನ್ನುತ್ತಿದೆ ಸದ್ಯದ ಚಿತ್ರಣ.
ಇದನ್ನೂ ಓದಿ:ಕಂಚುಗೋಡು: ಕತ್ತಲೆಯಲ್ಲೇ ಕಾಲ ಕಳೆಯುತ್ತಿರುವ ಕುಟುಂಬ
200ಕ್ಕೂ ಅಧಿಕ ಕಿಂಡಿ ಅಣೆಕಟ್ಟು
ಸುಳ್ಯ, ಪುತ್ತೂರು ತಾಲೂಕಿನಲ್ಲಿ 200ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಇದು ಜಲ ಸಂರಕ್ಷಣೆ ಜತೆಗೆ ಕೃಷಿ ತೋಟಗಳಿಗೆ ನೀರೊದಗಿಸಲು ಸಹಕಾರಿಯಾಗಿದೆ. ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಮೂಲಕ ಕೂಡ ಕಿಂಡಿ ಅಣೆಕಟ್ಟುಗಳು ಹಲವೆಡೆ ನಿರ್ಮಾಣಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ