ಐರ್ವ ಸಿನಿಮಾ ಚಿತ್ರೀಕರಣ ಪ್ರಾರಂಭ
Team Udayavani, Dec 21, 2021, 3:31 PM IST
ಮುಂಡರಗಿ: ಯುವಕರಿಗೆ ನೀತಿ ಬೋಧನೆ, ದೇಶಭಕ್ತಿ, ಐತಿಹಾಸಿಕ ದೇವಸ್ಥಾನ, ಮಠ-ಮಂದಿರಗಳು ಕುರಿತು ತಿಳಿವಳಿಕೆ ಮೂಡಿಸುವ ದುಶ್ಚಟಗಳಿಂದ ಯುವಶಕ್ತಿ ಉಳಿಸುವ ಪರಿಸರ ರಕ್ಷಣೆ ಮಾಡುವ ಐರ್ವ ಸಿನಿಮಾದ ಚಿತ್ರೀಕರಣ ನಡೆಯಲಿದೆ.
ಜನವರಿ ತಿಂಗಳಲ್ಲಿ ಮುಂಡರಗಿ ತಾಲೂಕು ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನದ ಸ್ಥಳಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಎಸ್. ಬ್ರ್ಯಾಂಡ್ ಮೂವಿ ಕ್ರಿಯೇಶನ್
ಅರ್ಪಿಸುವ ಐರ್ವ ನಿರ್ಮಾಪಕರು, ಕೊರ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮದರಸಾಬ್ ಸಿಂಗನಮಲ್ಲಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಐರ್ವ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಭಾಗದ ಸಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮದಲಗಟ್ಟಿ, ಇಲ್ಲೂರ ತೋಟದ ನಂಜನಗೂಡ ಮಂತ್ರಾಲಯ ದೇವಸ್ಥಾನ, ದಾವಲ ಮಲ್ಲಿಕ್ ಗುಡ್ಡ ಸೇರಿದಂತೆ ಹತ್ತು ಹಲವಾರು ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮದರಸಾಬ್ ಸಿಂಗನಮಲ್ಲಿ ಅಭಿಪ್ರಾಯಪಟ್ಟರು.
ನಿರ್ದೇಶಕರಾದ ಡಾ| ಬಿ.ಎನ್. ಹೊರಪೇಟ, ಕಥೆ ಚಿತ್ರಕಥೆ ಡಾ| ಲಕ್ಷ್ಮಣ ಕುಲಕರ್ಣಿ, ಸಂಭಾಷಣೆ ಎಸ್., ಬಿ. ಶಶಿಧರ, ಪುಣ್ಯಕೋಟಿ ಪೂಜಾ, ಸರ್ಚಿ ಒಡೆಯರ ಮತ್ತು ಇತರರು ತಂಡದಲ್ಲಿ ಇದ್ದು, ಚಿತ್ರಿಕರಣದಲ್ಲಿ ಪಾಲ್ಗೊಳ್ಳಲಿದ್ದಾರೆಂದು ನಿರ್ದೇಶಕ ಡಾ| ಬಿ.ಎನ್. ಹೊರಪೇಟ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್ ಬಳಕೆ
ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?
Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು
Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!
Heavy rain: ಮತ್ತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ; ಸಿಡಿಲಿಗೆ ಮತ್ತೋರ್ವ ಯುವಕ ಸಾವು
MUST WATCH
ಹೊಸ ಸೇರ್ಪಡೆ
Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?
ಯಾರಿಗೆ ಹೇಳೋಣ ನಮ್ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್ಗಳು ತಾತ್ಕಾಲಿಕ ಸ್ಥಗಿತ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು