ಯಕ್ಷಗಾನ ರೆಪರ್ಟರಿ ಸ್ಥಾಪನೆಯಾಗಲಿ
ನಾಟಕ ಕಲಿಯುವ ಆಸಕ್ತರನ್ನು ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಳುಹಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ.
Team Udayavani
- ಸುರೇಂದ್ರ ಪಣಿಯೂರು
ಬಿ. ವಿ. ಕಾರಂತರ ಉದ್ದೇಶವೂ ನಾಟಕ ರಂಗದ ಅಭ್ಯಾಸಕ್ಕೆ ಅನುಕೂಲವಾಗಿರ ಲೆಂದೇ ಆಗಿತ್ತು (ಸ್ವತಃ ಬಿ.ವಿ.ಕಾರಂತರೆ ಯಕ್ಷಗಾನದ ಅಂಶಗಳನ್ನು ನಾಟಕದಲ್ಲಿ ಸಮರ್ಥವಾಗಿ ಬಳಸಿಕೊಂಡವರು). ಕಡಲ ತಡಿಯ ಭಾರ್ಗವರೆನಿಸಿದ ಕೋಟ ಶಿವರಾಮ ಕಾರಂತರು ಯಕ್ಷಗಾನ ಕಲೆಯ ಸಂರಕ್ಷಣೆಗಾಗಿ, ಅಧ್ಯಯನಕ್ಕಾಗಿ ಹುಟ್ಟು ಹಾಕಿದ ಉಡುಪಿ ಯಕ್ಷಗಾನ ಕೇಂದ್ರವು ವಿಶ್ವದೆಲ್ಲೆಡೆ ಯಕ್ಷಗಾನದ ಕಂಪನ್ನು ಪಸರಿಸಿದ ಏಕೈಕ ಖಾಸಗಿ ಸಂಸ್ಥೆ. ಇಂತಹ ಇತಿಹಾಸ ಇರುವ ಎರಡು ವಿಭಿನ್ನವಾದ ಕಲೆಗಳನ್ನು ಒಂದೇ ಸೂರಿನಡಿ ತಂದು ಯಕ್ಷಗಾನ ಹಾಗೂ ನಾಟಕವನ್ನು ಮಿಶ್ರಗೊಳಿಸಿ ಯಕ್ಷರಂಗಾಯಣ ಎಂದು ಸಂಕರಗೊಳಿಸುವ ಬದಲು ಅದು ಕೇವಲ ರಂಗಾಯಣವಾಗಿಯೇ ಇರಲೆಂದು ಆಶಯ...