ಅಂಕೋಲಾ: ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ
Team Udayavani, Dec 29, 2021, 7:27 PM IST
ಅಂಕೋಲಾ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬುಧವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಅಂಕೋಲಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜನಸಂಘದ ಹಿರಿಯ ಕಾರ್ಯಕರ್ತ ಅಶೋಕ ಮಹಾಲೆ ಅವರ ಹೊಟೇಲಿಗೆ ಭೇಟಿ ನೀಡಿ ಕರೆ ಲಾಡು- ಚಹ ಸೇವಿಸಿ ಸರಳತೆಗೆ ಸಾಕ್ಷಿಯಾದರು.
ವಿಶ್ವೇಶ್ವರ ಹೆಗಡೆ ಅವರು ಪ್ರಥಮ ಬಾರಿ ಶಾಸಕರಾಗಿದ್ದು ಅಂಕೋಲಾ ಕ್ಷೇತ್ರದಿಂದ ಎನ್ನುವುದು ಗಮನಾರ್ಹ.
ನಂತರ ಒಮ್ಮೆ ಆಯ್ಕೆ ಆದವರು ಮತ್ತೊಮ್ಮೆ ಆಯ್ಕೆ ಆಗುವುದಿಲ್ಲ ಎಂಬ ಅಂಕೋಲಾ ಕ್ಷೇತ್ರದ ಪ್ರತೀತಿ ಬದಲಿಸಿ ಮೂರು ಬಾರಿ ಆಯ್ಕೆ ಆಗಿ ದಾಖಲೆ ಬರೆದಿದ್ದಾರೆ. ಈ ಆಯ್ಕೆಗೆ ಸಹಕರಿಸಿದ ಹಿರಿಯ ಕಾರ್ಯಕರ್ತರಲ್ಲಿ ಓರ್ವರಾದ ಅಶೋಕ ಮಹಾಲೆ ಅವರನ್ನು ನೆನಪಿಸಿಕೊಂಡು ಈಗ ಕಾರವಾರ ರಸ್ತೆಯಲ್ಲಿರುವ ಪುಟ್ಟ ಹೊಟೇಲ್ಗೆ ಭೇಟಿ ನೀಡಿ ಕುಶಲೋಪಚರಿ ವಿಚಾರಿಸಿದರು.
ಅದೇ ರೀತಿ ಕಿತ್ತೂರು ಚೆನ್ನಮ್ಮಾ ರಸ್ತೆಯಲ್ಲಿರುವ ಇನ್ನೋರ್ವ ಹಿರಿಯ ರಾಮಚಂದ್ರ ನಾಯ್ಕ ಅವರ ಅಂಗಡಿಗೂ ಹೋಗಿ ಅವರ ಆರೋಗ್ಯ ವಿಚಾರಿಸಿದರು.
ನಾಮಧಾರಿ ದಹಿಂಕಾಲ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಪ್ರಮುಖರಾದ ಸಾಯಿ ಕಿರಣ ಶೇಟಿಯಾ, ಭಾಸ್ಕರ ನಾರ್ವೇಕರ್, ಸಂಜಯ ನಾಯ್ಕ, ನಾಗೇಂದ್ರ ನಾಯ್ಕ , ನಾಗೇಶ ನಾಯ್ಕ, ರಾಜು ನಾಯ್ಕ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’