ಟೆಸ್ಲಾ ಸ್ವಯಂಚಾಲಿತ ಕಾರು ಉತ್ಪಾದನಾ ತಂಡ: ಅಶೋಕ್ ಎಲ್ಲುಸ್ವಾಮಿ ನಿರ್ದೇಶಕ
Team Udayavani, Jan 6, 2022, 3:52 PM IST
ವಿಶ್ವದ ದಿಗ್ಗಜ ಕಂಪೆನಿಗಳಲ್ಲಿ ಭಾರತೀಯ ಪ್ರತಿಭಾ ಸಂಪನ್ನರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಆ ಹೆಸರಿಗೆ ಇನ್ನೊಬ್ಬ ಭಾರತೀಯನ ಹೆಸರು ಸೇರ್ಪಡೆಯಾಗಿದೆ. ಅಶೋಕ್ ಎಲ್ಲುಸ್ವಾಮಿ ಎಂಬ ಹೆಸರು ಈಗ ಭಾರಿ ಸುದ್ದಿಯಾಗಿದ್ದು, ಯಾಕೆ ಎಂದು ನಾವು ತಿಳಿಯುವ ಬನ್ನಿ.
ಟೆಸ್ಲಾ ಕಂಪನಿ ಸ್ವಯಂಚಾಲಿತ ಕಾರುಗಳ ಉತ್ಪಾದನೆಗೆ ಮುಂದಾಗಿದ್ದು,ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಎಲನ್ ಮಸ್ಕ್ ಅವರು ಅಶೋಕ್ ಎಲ್ಲುಸ್ವಾಮಿ ಅವರನ್ನು ಸ್ವಯಂಚಾಲಿತ ಪೈಲಟ್ ತಂಡದ ಮೊದಲ ಸದಸ್ಯರನ್ನಾಗಿ ಆಯ್ಕೆ ಮಾಡಿ ಭಾರತೀಯ ಪ್ರತಿಭೆಗೆ ಮನ್ನಣೆ ನೀಡಿದ್ದಾರೆ.
ಟೆಸ್ಲಾ ಸಂಸ್ಥೆಯಲ್ಲಿ ರೋಬೋಟಿಕ್ ಎಂಜಿನಿಯರ್ ಆಗಿರುವ ಅಶೋಕ್ ಎಲ್ಲುಸ್ವಾಮಿ ಯೋಜನೆ, ನಿಯಂತ್ರಣದ ಮೂಲಕ ಗಣಕ ಯಂತ್ರ ದೃಷ್ಟಿ ಹಾಗೂ ಗ್ರಹಿಕೆಯ ಅನುಭವ ಹೊಂದಿದ್ದಾರೆ. 8 ವರ್ಷದ ಹಿಂದೆ ಅಶೋಕ್ ಅವರು ಕಂಪನಿಗೆ ಆಟೋ ಪೈಲಟ್ ವಿಭಾಗದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರ್ಪಡೆಯಾಗಿದ್ದರು.
ಅಶೋಕ್ ಎಲ್ಲುಸ್ವಾಮಿ ಅವರು ಎಲೆಕ್ಟ್ರಿಕ್ ಸ್ವಯಂಚಾಲಿತ ಕಾರುಗಳ ಉತ್ಪಾದನಾ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಎಲನ್ ಮಸ್ಕ್ ಟ್ವೀಟ್ ಮಾಡಿದ್ದು, ಟೆಸ್ಲಾ ಆಟೋಪೈಲಟ್ ತಂಡವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿ, ನೇಮಕಗೊಂಡ ಮೊದಲ ವ್ಯಕ್ತಿ ಅಶೋಕ್! ಎಂದು ಬರೆದಿದ್ದಾರೆ.
ಅಮೆರಿಕದ ಕಾರ್ನೆಜಿ ಮೆಲ್ಲೋನ್ ವಿವಿಯಲ್ಲಿ ರೋಬೋಟಿಕ್ ಅಭಿವೃದ್ಧಿ ಕುರಿತು ಅಶೋಕ್ ಹೆಚ್ಚಿನ ಅಧ್ಯಯನವನ್ನೂ ನಡೆಸಿದ್ದಾರೆ. ಟೆಸ್ಲಾ ಕಂಪನಿ ಸೇರುವುದಕ್ಕೂ ಮುನ್ನ ವೋಕ್ಸ್ವ್ಯಾಗನ್ ವ್ಯಾಬ್ಕೊ ವೆಹಿಕಲ್ ಕಂಟ್ರೋಲ್ ಸಿಸ್ಟಮ್ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ