ಹಿರಿಯಡಕ ಜೈಲಿನಲ್ಲಿ ಇಸಿಜಿ ಟೆಲಿಮೆಡಿಸಿನ್‌: ರಾಜ್ಯದಲ್ಲೇ ಪ್ರಥಮ

ಕೈದಿಗಳ ಹೃದ್ರೋಗ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಲು ಅನುಕೂಲ

Team Udayavani, Jan 11, 2022, 5:21 PM IST

ಹಿರಿಯಡಕ ಜೈಲಿನಲ್ಲಿ ಇಸಿಜಿ ಟೆಲಿಮೆಡಿಸಿನ್‌: ರಾಜ್ಯದಲ್ಲೇ ಪ್ರಥಮ

ಉಡುಪಿ: ಕೈದಿಗಳ ಆರೋಗ್ಯ ದೃಷ್ಟಿಯಿಂದ, ಹೃದ್ರೋಗ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲೆಯ ಕಾರಾಗೃಹದಲ್ಲಿ ಇಸಿಜಿ ಟೆಲಿಮೆಡಿಸಿನ್‌ ಯೋಜನೆ ಜಾರಿಗೆ ಬಂದಿದೆ. ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮೇರೆಗೆ “ಕ್ಯಾಡ್‌’ (ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌) ಫೌಂಡೇಶನ್‌ ಹಿರಿಯಡಕ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಟೆಲಿಮೆಡಿಸನ್‌ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರಾಗೃಹದಲ್ಲಿ ನೂರಕ್ಕೂ ಅಧಿಕ ಕೈದಿಗಳಿದ್ದು, ಇದರಲ್ಲಿ ಮಧ್ಯ ವಯಸ್ಕರು, ವೃದ್ಧರು ಇರುತ್ತಾರೆ. ಜೈಲಿನ ವಾತಾವರಣದಲ್ಲಿ ಕೆಲವರಿಗೆ ಮಾನಸಿಕ ಒತ್ತಡ ಕಾರಣದಿಂದ ಎದೆ ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ ಹೃದ್ರೋಗ ಸಮಸ್ಯೆ ಇಲ್ಲದಿದ್ದರೂ ಗ್ಯಾಸ್ಟಿಕ್‌ ಸಮಸ್ಯೆ ಮೊದಲಾದ ಕಾರಣದಿಂದ ಎದೆ ಹುರಿ, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವು ಕೈದಿಗಳಿಗೆ ಎದೆನೋವು ಆರಂಭಗೊಂಡಾಗ ಹೃದ್ರೋಗ ದೃಢಪಡಿಸಲು ತತ್‌ಕ್ಷಣ ಇಸಿಜಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದಕ್ಕಾಗಿ ಕೈದಿಗಳನ್ನು ಜೈಲಿನಿಂದ ದೂರದ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಬೇಕು. ಜೈಲಿನಲ್ಲಿ ಮೊದಲೇ ಕೈದಿಗೆ ಇಸಿಜಿ ಒಳಪಡಿಸಿ ಪರೀಕ್ಷೆ ಅನಂತರ ಹೃದಯದ ಬಡಿತ ಸಮಸ್ಯೆ ಕಂಡುಬಂದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಹೆಚ್ಚು ಅನುಕೂಲ. ಈ ಯೋಜನೆಯಡಿಯಲ್ಲಿ ಜೈಲಿನಲ್ಲಿ ಇಸಿಜಿ ಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿತ್ತು. ಈ ಬಗ್ಗೆ ಕ್ಯಾಡ್‌ನ‌ ಪ್ರವರ್ತಕ ಡಾ| ಪದ್ಮನಾಭ ಕಾಮತ್‌ ಅವರೊಂದಿಗೆ ಚರ್ಚಿಸಿ ಅವರ ಫೌಂಡೇಶನ್‌ ವತಿಯಿಂದ ಇಸಿಜಿ ಟೆಲಿಮೆಡಿಸಿನ್‌ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಡಿಎಚ್‌ಒ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜೈಲು ಸಿಬಂದಿಗೆ ತರಬೇತಿ
ಕಾರಾಗೃಹದ ಐದು ಸಿಬಂದಿಗೆ ಇಸಿಜಿ ಪರೀಕ್ಷೆ ನಡೆಸುವ ತರಬೇತಿಯನ್ನು ಕ್ಯಾಡ್‌ ಫೌಂಡೇಶನ್‌ ನೀಡಿದೆ. ಕೈದಿಗೆ ಎದೆನೋವು ಸಮಸ್ಯೆ ಕಾಣಿಸಿಕೊಂಡಲ್ಲಿ ಸಿಬಂದಿ ಪರೀಕ್ಷೆ ನಡೆಸಿ ಕ್ಯಾಡ್‌ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ರಿಪೋರ್ಟ್‌ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಈ ಗ್ರೂಪ್‌ನಲ್ಲಿ ತಜ್ಞ ವೈದ್ಯರು ವರದಿ ಆಧಾರದಲ್ಲಿ ರೋಗಿಯ ಹೃದ್ರೋಗ ಪರಿಸ್ಥಿತಿ ಅವಲೋಕಿಸಿ ಸಲಹೆ, ಸೂಚನೆ ನೀಡುತ್ತಾರೆ. ವರದಿಯಲ್ಲಿ ಹೃದ್ರೋಗ ಸಮಸ್ಯೆ ಇರುವುದು ಕಂಡು ಬಂದರೆ ತತ್‌ಕ್ಷಣ ಆಸ್ಪತ್ರೆ ಕರೆದೊಯ್ಯಲು ಸೂಚಿಸುತ್ತಾರೆ. ಪೆರ್ಣಂಕಿಲ, ಹಿರಿಯಡಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ವಾರಕ್ಕೆ ಎರಡು ದಿನ ವೈದ್ಯರು, ನರ್ಸ್‌ ಸಿಬಂದಿ ಕೈದಿಗಳ ಆರೋಗ್ಯ ತಪಾಸಣೆಗೆ ಕಾರಾಗೃಹಕ್ಕೆ ಬರುತ್ತಾರೆ.

ಸಂದರ್ಶಕರ ಭೇಟಿಗಿಲ್ಲ ಅವಕಾಶ
ಕೋವಿಡ್‌ ಮುಂಜಾಗ್ರತೆಯಿಂದ ಸರಕಾರದ ಆದೇಶದ ಮೇರೆಗೆ ಜೈಲಿನಲ್ಲಿ ಸಂದರ್ಶಕರ ಭೇಟಿಗೆ ಅವಕಾಶ ನಿರ್ಬಂಧಿಸಲಾಗಿದೆ. ವಕೀಲರ ಸಹಿತ, ಕೈದಿಗಳ ಕುಟುಂಬಸ್ಥರಿಗೂ ಭೇಟಿಗೆ ಅವಕಾಶವಿಲ್ಲ. ಇ-ಮುಲಾಖತ್‌ ಆ್ಯಪ್‌ ಮೂಲಕ ಮುಂಚಿತವಾಗಿ ನೋಂದಾಯಿಸಿ ವೀಡಿಯೋ ಕರೆಯಲ್ಲಿ ಮಾತನಾಡಬಹುದು. ದೂರವಾಣಿ (ಎಸಿಎಸ್‌) ವ್ಯವಸ್ಥೆ ಮೂಲಕ ಮನೆಯವರ ಜತೆಗೆ ಮಾತನಾಡಬಹುದು. ಜೈಲಿನ ಎಲ್ಲ ಕೈದಿಗಳಿಗೆ ಈ ಹಿಂದೇ ಶೇ. 100 ಕೋವಿಡ್‌ ಲಸಿಕೆ ಪೂರ್ಣಗೊಂಡಿದೆ. ಇತ್ತೀಚೆಗೆ ಬಂದ ಲಸಿಕೆ ಹಾಕಿಕೊಳ್ಳದ ಕೈದಿಗಳನ್ನು ಪಟ್ಟಿ ಮಾಡಿ ಆರೋಗ್ಯ ಇಲಾಖೆಗೆ ನೀಡಲಿದ್ದು, ಸಮೀಪದ ಪ್ರಾಥಮಿಕ ಆರೋಗ್ಯದ ಸಿಬಂದಿ ಲಸಿಕೆ ನೀಡುತ್ತಾರೆ.

ತುರ್ತು ಸೇವೆಗೆ ಅನುಕೂಲ
ರಾಜ್ಯದಲ್ಲೇ ಪ್ರಥಮವಾಗಿ ಹಿರಿಯಡಕ ಜೈಲು ಇಸಿಜಿ ಟೆಲಿಮೆಡಿಸಿನ್‌ ಸೌಕರ್ಯ ವ್ಯವಸ್ಥೆ ಹೊಂದಿದೆ. ಡಿಎಚ್‌ಒ ಅವರ ಮನವಿ ಮೇರೆಗೆ ಕ್ಯಾಡ್‌ ಫೌಂಡೇಶನ್‌ ಈ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಕೈದಿಗಳಿಗೆ ಎದೆನೋವು, ಹೃದಯ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಾಗ ಇಸಿಜಿ ಪರೀಕ್ಷೆ ನಡೆಸಿ ತಜ್ಞ ವೈದ್ಯರಿಂದ ತತ್‌ಕ್ಷಣ ಸಲಹೆ ಪಡೆಯಲು ಅನುಕೂಲವಾಗುತ್ತದೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ.
ಶ್ರೀನಿವಾಸ್‌, ಅಧೀಕ್ಷಕರು,
ಹಿರಿಯಡಕ ಜೈಲು

ಸಿಬಂದಿಗೆ ತರಬೇತಿ
ಫೌಂಡೇಶನ್‌ ವತಿಯಿಂದ 525ನೇ ಇಸಿಜಿ ಯಂತ್ರವನ್ನು ಟೆಲಿಮೆಡಿಸಿನ್‌ ಸೌಕರ್ಯ ದೊಂದಿಗೆ ಹಿರಿಯಡಕ ಜೈಲಿಗೆ ನೀಡಲಾಗಿದೆ. ಈ ಸೌಕರ್ಯವನ್ನು ಹೊಂದಿರುವ ಮೊತ್ತಮೊದಲ ಜೈಲು ಉಡುಪಿ ಜಿಲ್ಲೆಯದ್ದಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಮನವಿ, ಜೈಲು ಅಧೀಕ್ಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಜೈಲಿನ ಐದು ಸಿಬಂದಿಗೆ ಇಸಿಜಿ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ.
-ಡಾ| ಪದ್ಮನಾಭ ಕಾಮತ್‌, ಎಚ್‌ಒಡಿ ಕಾರ್ಡಿಯಾಲಜಿ, ಕೆಎಂಸಿ ಮಂಗಳೂರು, ಸಂಸ್ಥಾಪಕ ಅಧ್ಯಕ್ಷ, ಕ್ಯಾಡ್‌ ಫೌಂಡೇಶನ್‌

– ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.