ಕುಷ್ಟಗಿ: ಮಾಸ್ಕ್ ಹಾಕದವರಿಗೆ ಪೊಲೀಸರಿಂದ ದಂಡದ ಬಿಸಿ
Team Udayavani, Jan 12, 2022, 3:39 PM IST
ಕುಷ್ಟಗಿ: ಒಮಿಕ್ರಾನ್ ವೈರಸ್ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ತಹಶೀಲ್ದಾರ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಇಲ್ಲಿನ ಮಾರುತಿ ವೃತ್ತದಲ್ಲಿ ಮಾಸ್ಕ್ ಹಾಕದವರಿಗೆ ದಂಡದ ಬಿಸಿ ಮುಟ್ಟಿಸಿದರು.
ಒಮಿಕ್ರಾನ್ ವೈರಸ್ ಪ್ರಕರಣ ಕ್ರಮೇಣ ಹೆಚ್ಚಳವಾಗುತ್ತಿದ್ದರೂ ಜನ ಅದರ ಭಯವಿಲ್ಲದೇ ಮಾಸ್ಕ್ ಧರಿಸದೇ ಸಂಚರಿಸುವ ಬೈಕ ಸವಾರನ್ನು ತಡೆದು ದಂಡ ಹಾಕಲು ಶುರು ಮಾಡಿದರು. ಮಾಸ್ಕ ಹಾಕದ ಬೈಕ್ ಸವಾರರ ಬೈಕಿನ ಕೀ ಕಸಿದುಕೊಂಡು ಮೊದಲ ಹಂತವಾಗಿ 100 ರೂ. ಹಾಕಲಾರಂಭಿಸಿದರು. ವಾದ ಮಾಡಿದ ಬೈಕ್ ಸವಾರರಿಗೆ 500 ರೂ. ದಂಡ ಹಾಕಿದರು.
ಏಕಾಏಕಿ ಬೈಕ್ ಸವಾರರಿಗೆ ದಂಡ ಹಾಕಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದರೂ ಲೆಕ್ಕಿಸದೇ ದಂಡ ಹಾಕುತ್ತಿರುವುದು ಕಂಡು ಬಂತು. ಬೈಕಿನ ಕೀ ಪೊಲೀಸರು ಕಸಿದುಕೊಂಡಾಗ ಬೈಕ್ ಸವಾರರು ವಾದಕ್ಕೆ ಇಳಿದಾಗ, ವಾದ ಮಾಡಿದರೆ 500 ರೂ. ದಂಡ ಹಾಕುವುದಾಗಿ ಎಚ್ಚರಿಸಿದರು.
ಈ ಕುರಿತು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ ದಿನೇ ದಿನೇ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಿದ್ದು, ಜನರಿಂದ ಜಾಣ ಮರೆವು ಇದೆ. ಕಡ್ಡಾಯ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದರೂ ಜನ, ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದು ಇವರಿಗೆ ಜಾಗೃತಿಗೆ ದಂಡ ಹಾಕಲಾಗುತ್ತಿದೆ. ಇನ್ಮುಂದೆ ಟಫ್ ರೂಲ್ಸ್ ಜಾರಿಯಲ್ಲಿರುತ್ತದೆ. ಕೇವಲ ಅರ್ಧ ಗಂಟೆಯಲ್ಲಿ 32 ಬೈಕ್ ಸವಾರರಿಗೆ ದಂಡ ಹಾಕಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ