ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷತೆ ಶ್ರೀ ಈಶಪ್ರಿಯತೀರ್ಥರಿಗೆ

Team Udayavani, Jan 25, 2022, 7:05 AM IST

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಉಡುಪಿ: ಅದಮಾರು ಮಠದ ವ್ಯವಹಾರವನ್ನು ಕಿರಿಯ ಪಟ್ಟದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಈ ಹಿಂದೆಯೇ ಬಿಟ್ಟು ಕೊಟ್ಟಿದ್ದ ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಈಗ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷತೆಯನ್ನು ಬಿಟ್ಟುಕೊಟ್ಟಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಜ. 18ರಂದುಮುಗಿಯುತ್ತಿದ್ದಂತೆ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ನಡೆದ ಮಂಡಳಿಯ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರ ಸಭೆಯಲ್ಲಿ ಕಿರಿಯ ಶ್ರೀಗಳು ಮುಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆಂದು ಪ್ರಕಟಿಸಿದರು. ಕಾನೂನಾತ್ಮಕವಾಗಿ 10-15 ದಿನಗಳಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ.

ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರು 2009ರಲ್ಲಿ ನಿರ್ಯಾಣ ಹೊಂದಿದ ಬಳಿಕ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರಾಗಿದ್ದರು. ಗುರುಗಳು ಕಾಲವಾಗುವಾಗ ದಿಲ್ಲಿ, ಮುಂಬಯಿ, ಬೆಂಗಳೂರು, ಭದ್ರಾವತಿ, ಸಂಗಮೇಶ್ವರಪೇಟೆ ಮೊದಲಾದೆಡೆ 24 ಸಂಸ್ಥೆಗಳಿದ್ದವು. ಶ್ರೀ ವಿಶ್ವಪ್ರಿಯತೀರ್ಥರ 11 ವರ್ಷಗಳ ಅಧ್ಯಕ್ಷತೆಯಲ್ಲಿ ಅದಮಾರಿನ ವಿದ್ಯಾರ್ಥಿನಿಲಯ, ನರ್ಸಿಂಗ್‌ನಿಂದ ಪ್ರೌಢಶಾಲೆ ವರೆಗೆ ಆಂಗ್ಲ ಮಾಧ್ಯಮ ಶಾಲೆ, ಆಲ್ದೂರಿನಲ್ಲಿ ಪ್ರೌಢಶಾಲೆ ಹೀಗೆ ಹೊಸ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಒಟ್ಟು ಸಂಸ್ಥೆಗಳ ಸಂಖ್ಯೆ 40ಕ್ಕೇರಿದೆ.
ಶಿಷ್ಯ ಶ್ರೀ ಈಶಪ್ರಿಯತೀರ್ಥರು ಎಂಜಿನಿಯರಿಂಗ್‌ ಶಿಕ್ಷಣ ಪಡೆದಕಾರಣ ಲೌಕಿಕ ಶಿಕ್ಷಣದ ಜ್ಞಾನವಿದೆ.

ಪರ್ಯಾಯ ಕೂರುವ ಮುನ್ನ ಮಠದ ಆಡಳಿತವನ್ನು ಕೊಡು ವಾ ಗಲೇ ಶಿಷ್ಯರಿಗೆ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಯನ್ನೂ ಕೊಡಬೇಕೆಂದಿದ್ದೆ. ಅವರು ಒಪ್ಪದಿದ್ದ ಕಾರಣ ಈಗ ಕೊಟ್ಟಿದ್ದೇವೆ ಎಂದು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.

1958ರಲ್ಲಿ ಜನಿಸಿದ ಶ್ರೀ ವಿಶ್ವಪ್ರಿಯತೀರ್ಥರು 1972ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದ್ದರು. ಈಗ 64 ವರ್ಷ. 1985ರಲ್ಲಿ ಜನಿಸಿದ ಶ್ರೀ ಈಶಪ್ರಿಯತೀರ್ಥರು 2014ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ ಒಂದು ಪರ್ಯಾಯ ಪೂಜೆಯನ್ನು ಈಗಷ್ಟೇ ಮುಗಿಸಿದ್ದಾರೆ. ಇವರಿಗೆ ಈಗ 36 ವರ್ಷ.

ಇನ್ನು ಏಕಾಂತ ಸಾಧನೆ
ಅದಮಾರು ಮಠದ ಪಟ್ಟದ ದೇವರನ್ನು ಶ್ರೀ ವಿಶ್ವಪ್ರಿಯತೀರ್ಥರು ಪರ್ಯಾಯಕ್ಕೆ ಮುನ್ನವೇ ಶ್ರೀ ಈಶಪ್ರಿಯತೀರ್ಥರಿಗೆ ಕೊಟ್ಟಿದ್ದಾರೆ. ನಿತ್ಯದ ಪೂಜೆಗಾಗಿ ಮಧ್ವಾಚಾರ್ಯರು ಪೂಜಿಸುತ್ತಿದ್ದ ಅಷ್ಟಭುಜಲಕ್ಷ್ಮೀನಾರಾಯಣ ವಿಗ್ರಹವನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಪಡೆದುಕೊಂಡಿದ್ದಾರೆ. ಮುಂದೆ ಮಠದ ವ್ಯವಹಾರಕ್ಕಾಗಿ ಉಡುಪಿಗೆ ಬರುವುದು ಕಡಿಮೆ, ಬಂದಾಗ ಶ್ರೀಕೃಷ್ಣಮಠದಲ್ಲಿ ಪೂಜೆ ಮಾಡುತ್ತಾರೆ. ಮುಂದಿನ ಕೆಲವು ತಿಂಗಳು ಮಣಿಪುರದ ಶಾಖಾ ಮಠದಲ್ಲಿ, ಅನಂತರ ಕೆಲವು ತಿಂಗಳು ಕುಂಜಾರು ದೇವಸ್ಥಾನ, ಅನಂತರ ಹರಿದ್ವಾರದಲ್ಲಿರುವ ಪಲಿಮಾರು ಮಠ ಹೀಗೆ ವಿವಿಧೆಡೆ ಇದ್ದು ಸಾರ್ವಜನಿಕರ ಸಂಪರ್ಕವಿಲ್ಲದೆ ಜಪತಪದ ಮೂಲಕ ಸಾಧನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇವರು 16 ವರ್ಷಗಳ ಹಿಂದೆ 2ನೇ ಪರ್ಯಾಯ ಮುಗಿದ ಬಳಿಕ ಮಣಿಪುರ ಶಾಖಾ ಮಠದಲ್ಲಿ ನಾಲ್ಕು ತಿಂಗಳು ಅನ್ನಾಹಾರ ತ್ಯಜಿಸಿ ಹಣ್ಣು ಹಾಲು ಸೇವಿಸಿ ಮೌನವ್ರತ ಕೈಗೊಂಡಿದ್ದರು.

ಕರ್ಮಣ್ಯೇವಾಧಿಕಾರಸ್ತೇ..
ಮೊನ್ನೆಯಷ್ಟೇ ಜವಾಬ್ದಾರಿಯನ್ನು ಗುರುಗಳು ಕೊಟ್ಟಿದ್ದಾರೆ. ಗೀತೆಯಲ್ಲಿ ಶ್ರೀಕೃಷ್ಣ “ಕರ್ಮಣ್ಯೇವಾಧಿಕಾರಸ್ತೇ ಮಾ ಫ‌ಲೇಷು ಕದಾಚನ’ ಹೇಳಿದಂತೆ ಫ‌ಲ ನಿರೀಕ್ಷಿಸದೆ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಲ್ಲಿ ಅಧ್ಯಯನವಿನ್ನೂ ಮುಗಿದಿಲ್ಲ. ಅಧ್ಯಯನಕ್ಕೆ ಗ್ರಂಥಗಳು ಸಮುದ್ರದಷ್ಟಿವೆ. ಅದರ ಜತೆ ಶಿಕ್ಷಣ ಸಂಸ್ಥೆಗಳಂತಹ ಇತರ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗಿದೆ. ಸದ್ಯ ಬೆಂಗಳೂರಿನಲ್ಲಿ ಮೂರು ದಿನವಿದ್ದು ಸಂಸ್ಥೆಗಳ ಕುರಿತು ತಿಳಿದುಕೊಳ್ಳುತ್ತಿದ್ದೇವೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.