ಅಣ್ವಸ್ತ್ರ ಬಳಸಲು ಸಿದ್ಧ; ರಷ್ಯಾದ ರಕ್ಷಣ ಕೌನ್ಸಿಲ್‌ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌


Team Udayavani, Mar 27, 2022, 8:20 AM IST

ಅಣ್ವಸ್ತ್ರ ಬಳಸಲು ಸಿದ್ಧ; ರಷ್ಯಾದ ರಕ್ಷಣ ಕೌನ್ಸಿಲ್‌ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌

ಕೀವ್‌: ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಗಳನ್ನು ಪ್ರಯೋ ಗಿಸಲು ತಾನು ಸಿದ್ಧವಿರುವುದಾಗಿ ರಷ್ಯಾ ಮತ್ತೊಮ್ಮೆ ಘೋಷಿಸಿದೆ. ರಷ್ಯಾದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಕ್ಷಣ ಕೌನ್ಸಿಲ್‌ನ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಅವರು, ಈ ವಿಚಾರ ತಿಳಿಸಿದ್ದಾರೆ.

ಮಾಸ್ಕೋದಲ್ಲಿ ಸುದ್ದಿಗಾರ­ರೊಂದಿಗೆ ಮಾತನಾ­ಡಿದ ಅವರು, ಉಕ್ರೇನ್‌ ಮೇಲೆ ನಾವು ಈವರೆಗೆ ಸಾಂಪ್ರದಾ­ಯಿಕ ಹಾಗೂ ಕೆಲವಾರು ಪ್ರಬಲ ಶಸ್ತ್ರಾಸ್ತ್ರಗಳನ್ನು ಬಳಸಿ­ದ್ದೇವೆ. ಹಾಗೊಂದು ವೇಳೆ ಪರಮಾಣು ಅಸ್ತ್ರಗಳನ್ನು ಬಳಸುವುದು ಅನಿವಾ ರ್ಯವಾದರೆ ನಾವು ಯಾವುದೇ ಮುಲಾಜಿಲ್ಲದೆ ಅವುಗಳನ್ನು ಬಳಸುತ್ತೇವೆ ಎಂದಿದ್ದಾರ­ಲ್ಲದೆ, ಪರಮಾಣು ಅಸ್ತ್ರಗಳನ್ನು ಬಳಸುವುದು ನಮ್ಮ ಮುಂದಿನ ಆದ್ಯತೆಯಾಗಲಿದೆ ಎಂದು ಹೇಳಿದ್ದಾರೆ.

ವೊಲೊಡಿಮಿರ್‌ ಟೀಕೆ: ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಪದೇ ಪದೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಷ್ಯಾವು, ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಗೆ ಪ್ರಚೋದನೆಯನ್ನು ನೀಡುತ್ತಿದೆ ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾ ಕರೆಗಳ ಕದ್ದಾಲಿಕೆ?
ರಣಾಂಗಣದಲ್ಲಿ ರಷ್ಯಾದ ಸೈನಿಕರು ಹಾಗೂ ಸೇನಾಧಿಕಾರಿಗಳು, ಸರಕಾರ ಮತ್ತು ಸೇನಾಧಿಕಾರಿಗಳ ನಡುವೆ ನಡೆಯುವ ಸಂಭಾಷಣೆಗಳನ್ನು ಉಕ್ರೇನ್‌ನ ಸೇನೆಯಲ್ಲಿರುವ ತಜ್ಞರು ಕದ್ದಾಲಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ರಷ್ಯಾದ ಸೈನಿಕರು, ಸೇನಾಧಿಕಾರಿಗಳು ಮೊಬೈಲ್‌ ಫೋನ್‌ಗಳು, ಅನ ಲಾಗ್‌ ರೇಡಿಯೋಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳ ತರಂಗಗಳನ್ನು ಉಕ್ರೇನ್‌ನ ತಜ್ಞರು ಸುಲಭವಾಗಿ ಟ್ರಾಪ್‌ ಮಾಡುತ್ತಿದ್ದಾರೆಂದು ಹೇಳಲಾಗಿದೆ.

ಹಿರಿಯ ಸೇನಾಧಿಕಾರಿ ಸಾವು
ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾದ ಮತ್ತೂಬ್ಬ ಹಿರಿಯ ಸೇನಾಧಿಕಾರಿ ಹುತಾತ್ಮರಾಗಿ­ದ್ದಾರೆ ಎಂದು ರಷ್ಯಾದ ರಕ್ಷಣ ಇಲಾಖೆ ತಿಳಿಸಿದೆ. ಖಾರ್ಸನ್‌ನಲ್ಲಿ ಯುದ್ಧ ನಿರತರಾಗಿದ್ದಾಗ ಉಕ್ರೇನ್‌ ನಡೆಸಿದ ದಾಳಿಗೆ ಲೆ|ಜ| ಯಾಕೋವ್‌  ಸಾವನ್ನಪ್ಪಿದ್ದಾರೆ. ಅವರು ರಷ್ಯಾ ಭೂಸೇನೆಯ 49ನೇ ಕಂಬೈನ್‌ ಆರ್ಮಿಯ ಕಮಾಂಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾರತ- ಉಕ್ರೇನ್‌ ಮತ್ತೊಂದು ಪ್ರೇಮ್‌ ಕಹಾನಿ
ಉಕ್ರೇನ್‌ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್‌ ಹಾಗೂ ಉಕ್ರೇನ್‌ನ ಪ್ರಜೆ ಲಿಬೊವ್‌ ಜೋಡಿ, ಇನ್ನೇನು ಯುದ್ಧ ಆರಂಭವಾಗುವು­ದಕ್ಕಿಂತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್‌ ನಲ್ಲಿ ವಿವಾಹವಾಗಿದ್ದರು. ಅಂಥದ್ದೇ ಲವ್‌ಸ್ಟೋರಿಯೊಂದು ದಕ್ಷಿಣ ದಿಲ್ಲಿಯಲ್ಲಿ ಅನಾವರಣಗೊಂಡಿದೆ.

ಉಕ್ರೇನ್‌ನ ಆ್ಯನಾ ಹರೋಡೆಟ್ಸ್‌ಕಾ (30), ದಿಲ್ಲಿ ಹೈಕೋರ್ಟ್‌ನ ವಕೀಲ ಅನುಭವ್‌ ಭಾಸಿನ್‌ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ. 2019ರಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿನ ಖಾಸಗಿ ಕಂಪೆನಿಯೊಂದ­ರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಅನಂತರ ಅನುಭವ್‌ ಅವರು ದಿಲ್ಲಿಗೆ ಹಿಂದಿರುಗಿದರು. ಆದರೆ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್‌ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆ್ಯನಾ, ಈಗ ಅನುಭವ್‌ರನ್ನು ವರಿಸಲು ಸಿದ್ಧವಾಗಿದ್ದಾರೆ.

ಸಮರಾಂಗಣದಲ್ಲಿ
-ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಹವಣಿಸುತ್ತಿದೆ: ಉಕ್ರೇನ್‌ ಅಧ್ಯಕ್ಷರ ಆರೋಪ.
-ಯುದ್ಧದ ಮೊದಲ ಹಂತ ಹೆಚ್ಚಾ ಕಡಿಮೆ ಮುಗಿದಂತೆ ಎಂದು ಹೇಳಿಕೊಂಡ ರಷ್ಯಾ.
-ಪುತಿನ್‌ ಸೇನೆಯಿಂದ ಚರ್ನೋಬಿಲ್‌ ಅಣುಸ್ಥಾವರ ಸಮೀಪದ ಸ್ವಯುಟೆಕ್‌ ನಗರ ವಶ.
-ರಷ್ಯಾ ರಕ್ಷಣ ಸಚಿವ ಸಗೇì ಶಿಗೋ ಒಳಗಾಗಿದ್ದಾರೆ ಎಂಬ ವರದಿ ಸುಳ್ಳು. ಅವರು ಜೀವಂತವಾಗಿದ್ದಾರೆ: ರಷ್ಯಾ
ಕಾಳಗದಲ್ಲಿ ಇದುವರೆಗೆ 136
-ಮಕ್ಕಳು ಅಸುನೀಗಿದ್ದಾರೆ ಎಂದು ಪ್ರಕಟಿಸಿದ ಉಕ್ರೇನ್‌.
-ಖಾರ್ಶೇನ್‌ ನಗರದಲ್ಲಿ ಯುದ್ಧನಿರತ ರಷ್ಯಾದ ಹಿರಿಯ ಸೇನಾಧಿಕಾರಿ ಲೆ|ಜ| ಯಾಕೋವ್‌ ಸಾವು.

ಟಾಪ್ ನ್ಯೂಸ್

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.