ಬರಡು ಭೂಮಿಯಲ್ಲಿ ಬಂಗಾರದ ಸ್ಟ್ರಾಬೆರಿ ಬೆಳೆ : ಉತ್ತಮ ಇಳುವರಿ ಪಡೆದು ಮಾದರಿಯಾದ ರೈತ
Team Udayavani, Mar 27, 2022, 2:58 PM IST
ಮಾಸ್ತಿ: ಚಿನ್ನದ ನಾಡಿನಲ್ಲಿ ರೈತನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರೆ, ಬರಡು ಭೂಮಿಯಲ್ಲಿ ಚಿನ್ನ ಬೆಳೆಯುವ ರೈತರು ನಮ್ಮ ಜಿಲ್ಲೆಯ ತಾಲೂಕಿನಲ್ಲೂ ಇದ್ದಾರೆ ಎಂಬುದಕ್ಕೆ ರೈತರೊಬ್ಬರು ಸಾಕ್ಷಿಯಾಗಿದ್ದಾರೆ. ಮಾಲೂರು ತಾಲೂಕಿನ ರೈತನೊಬ್ಬ ಬರಡು ಭೂಮಿಯಲ್ಲಿ ಕೊಳವೆ ಬಾವಿ ನೀರಿನಿಂದ ಹನಿ ನೀರಾವರಿ ಪದ್ಧತಿ ಬಳಸಿ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆದು, ಉತ್ತಮ ಇಳುವರಿ ಪಡೆದು ಇತರ ರೈತರಿಗೆ ಮಾದರಿ
ಎನಿಸಿಕೊಂಡಿದ್ದಾರೆ.
ಮಾಸ್ತಿ ಹೋಬಳಿ ರಾಜೇನಹಳ್ಳಿ ಗ್ರಾಮದ ಬಳಿ ಇರುವ ಬೆಂಗಳೂರಿನ ಚನ್ನಸಿಂಗ್ ಅವರ ತೋಟವನ್ನು ಲೀಸ್ಗೆ ಪಡೆದ ರಾಜೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತೋಟದ ಮಣ್ಣು ಹಾಗೂ ನೀರನ್ನು ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ಸ್ಟ್ರಾಬರಿ ಹಣ್ಣು ಬೆಳೆಯಲು ಮಣ್ಣು ಹಾಗೂ ನೀರು ಸೂಕ್ತವಾಗಿದೆ ಎಂಬ ಪ್ರಮಾಣಪತ್ರ ಪಡೆದು ಹುಬ್ಬಳ್ಳಿ-ಧಾರವಾಡ ನರ್ಸರಿಯಿಂದ ಒಂದು ನಾರಿಗೆ 12 ರೂ.ನೀಡಿ ಅರ್ಧ ಎಕರೆಗೆ ಆಗುವಷ್ಟು ಸ್ಟ್ರಾಬೆರಿ ನಾರನ್ನು ತಂದು, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ನಾಟಿ ಗೊಬ್ಬರ ಬಳಸಿಕೊಂಡು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ತೋಟದಲ್ಲಿ ಸ್ಟ್ರಾಬೆರಿ ನಾರನ್ನು ನಾಟಿ
ಮಾಡಿದ್ದಾರೆ.
ಇದನ್ನೂ ಓದಿ : ಕಿಡಿಗೇಡಿಗಳಿಂದ ವಿಗ್ರಹ ಭಿನ್ನಕ್ಕೆ ಯತ್ನ : ದೇವಾಲಯಕ್ಕೆ ಶಾಸಕಿ ರೂಪಕಲಾ ಭೇಟಿ
ಕೆ.ಜಿ.ಗೆ 400 ರೂ. ಮಾರಾಟ: ಸ್ಟ್ರಾಬೆರಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಸ್ಟ್ರಾಬೆರಿ ಹಣ್ಣನ್ನು ಮಧುಮೇಹ ಹಾಗೂ ರಕ್ತದೊತ್ತಡ ಇರುವ ರೋಗಿಗಳು ಹೆಚ್ಚಾಗಿ ಬಳಸುತ್ತಾರೆ. ಈತ ಬೆಳೆದಿರುವ
ಸ್ಟ್ರಾಬೆರಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಒಂದು ಕೆ.ಜಿ.ಗೆ 350ರಿಂದ 400 ರೂ. ಗಳಷ್ಟು ಮಾರಾಟವಾಗು ತ್ತದೆ. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಇಲ್ಲದಿದ್ದರೂ, ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ ತರಕಾರಿ, ಹಣ್ಣುಗಳು, ಹೂವಿನ ಬೆಳೆ ಬೆಳೆದು ಹಣ್ಣು-ತರಕಾರಿ, ಹೂಗಳನ್ನು ಹೊರ ಜಿಲ್ಲೆ ರಾಜ್ಯಗಳಿಗೆ ಮಾರಾಟ ಮಾಡಲು ಕಳುಹಿಸಿ ಕೊಡುತ್ತಾರೆ.
ಆರ್ಥಿಕ ಪ್ರಗತಿ ಹೊಂದಿ: ರೈತರು ಒಂದೇ ಬೆಳೆಯನ್ನು ತಮ್ಮ ಜಮೀನುಗಳಲ್ಲಿ ಹಾಕುವ ಬದಲು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಬೆಳೆಗಳನ್ನು ಹಾಕಿ ಕೃಷಿ, ತೋಟಗಾರಿಕೆ ಇಲಾಖೆಗಳ ಸವಲತ್ತು ಹಾಗೂ
ಮಾಹಿತಿಯನ್ನು ಪಡೆದು ಹೊಸ ಹೊಸ ಆಧುನಿಕ ಪದ್ಧತಿ ಬಳಸಿ ಲಾಭದಾಯಕ ಬೆಳೆ ಹಾಕಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ರೈತ ನಾರಾಯಣ ಸ್ವಾಮಿ ಹೇಳುತ್ತಾರೆ.
– ಮಾಸ್ತಿ ಎಂ.ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ