ಗುಂಡ್ಲುಪೇಟೆ: ಯುಗಾದಿ ಹೋಳಿಯಾಟದ ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕ ನೀರುಪಾಲು
Team Udayavani, Apr 4, 2022, 6:20 PM IST
ಗುಂಡ್ಲುಪೇಟೆ (ಚಾಮರಾಜನಗರ): ಯುಗಾದಿ ಹೋಳಿಯಾಟ ಆಡಿ ಬಣ್ಣ ತೊಳೆಯಲು ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ.
ತಾಲೂಕಿನ ಕೋಡಹಳ್ಳಿ ಗ್ರಾಮದ ವೈಶಾಲ್(17) ಮೃತ ಯುವಕ. ಈತ ಯುಗಾದಿ ಬಣ್ಣದಾಟ ಆಡಿ ನಂತರ ಸ್ನೇಹಿತರೊಡನೆ ಕಲ್ಕಟ್ಟ ಕೆರೆಗೆ ಬಣ್ಣ ತೊಳೆಯಲು ಹೋಗಿದ್ದಾನೆ. ಆ ವೇಳೆ ಕೆರೆಯಲ್ಲಿ ಈಜಲು ಹೋಗಿ ಹೆಚ್ಚಿನ ಆಳದಲ್ಲಿ ಸಿಲುಕಿದ ಹಿನ್ನಲೆ ಹೊರಬರಲಾಗದೆ ನೀರಿನಲ್ಲಿ ಮುಳಿಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮಾಹಿತಿ ಅರಿತ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯ ಈಜುಗಾರರ ಸಹಾಯದಿಂದ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.