ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯತ್ತ; ಸಚಿವ ಆನಂದ್ ಸಿಂಗ್
ತೈಲ ಬೆಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗುತ್ತದೆ.
Team Udayavani, Apr 12, 2022, 6:20 PM IST
ಹೊಸಪೇಟೆ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದ್ದು, ಮುಂದೊಂದು ದಿನ ಭಾರತ ವಿಶ್ವದ ದೊಡ್ಡಣ್ಣ ಸ್ಥಾನದಲ್ಲಿರಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಣ್ಣಿಸಿದರು.
ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಹೊಸಪೇಟೆ-ಹರಿಹರ ಡೆಮೋ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ದೇಶಕಟ್ಟುವಲ್ಲಿ ದೃಢನಿರ್ಧಾರ, ದೂರದೃಷ್ಟಿಯ ಬೆಳವಣಿಗೆ ಸಾಧ್ಯ. ಕೆಲಸದಲ್ಲಿ ಗುಣ ಮಾತ್ರವಲ್ಲದೇ ಗುಂಡಿಗೆ ಹೊಂದಿರುವ ದೇಶದ ನೂರೆಂಟು ಸಮಸ್ಯೆಗಳಿಗೆ ಪರಿಸಲು ಎಲ್ಲ ರೀತಿಯ ಗುಣ ಹೊಂದಿರುವ ಪ್ರಧಾನಿ ಇರಬೇಕು. ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುತ್ತಿದೆ ಎಂದರು.
ವಿಶ್ವವೇ ನೋಡುವಂತೆ ಅಭಿವೃದ್ಧಿಯಲ್ಲಿ ಸಾಗುತ್ತಿದೆ. ಹಿಂದಿನ ಸರಕಾರದಿಂದ ಆಗಿದ್ದ ಎಲ್ಲ ಲೋಕಗಳನ್ನು ಮೋದಿಯವರು ಸರಿಪಡಿಸುತ್ತಿದ್ದಾರೆ. ತೈಲ ಬೆಲೆ ಏರುತ್ತಿದೆ ಎಂದು ಹಲವರು ವಿರೋಧಿ ಸುತ್ತಿದ್ದಾರೆ. ತೈಲ ಬೆಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗುತ್ತದೆ. ಪೆಟ್ರೋಲ್ ಬೆಲೆ ಯಾವುದೇ ಪಕ್ಷ ಇದ್ದರೂ ಏಳಿತ ಸಾಮಾನ್ಯ. ಬೆರೆ ಪಕ್ಷದ ಆಡಳಿತ ಇದ್ದಿದ್ದರೆ ಇಷ್ಟೋತ್ತಿಗೆ ಪೆಟ್ರೋಲ್ 200 ರಿಂದ 250, ಡಿಸೇಲ್ 150ರಿಂದ 200 ರೂಗೆ ಏರುತ್ತಿತ್ತು.
ಪ್ರಧಾನಿ ಮೋದಿಯಂತ ನಾಯಕತ್ವ ಮುಂದೆ ಸಿಗಲ್ಲ. ನಾಯಕನಿಗೆ ಗುಣ ಮಾತ್ರವಲ್ಲ ಗುಂಡಿಗೆ ಕೂಡ ಇರಬೇಕು. 371 ತೆಗೆಯುವಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ನೂರೆಂಟು ಸಮಸ್ಯೆ ಆಗುತ್ತದೆ ಎಂದು ಹೇಳುತ್ತಿದ್ದರು. ಪ್ರಧಾನಿಯವರು ಈ ಸಮಸ್ಯೆಯನ್ನು ಮೊಸರಿನಿಂದ ಕೂದಲು ತೆಗೆದಂಗೆ ಪರಿಹರಿಸಿದರು. ಒಂದು ಊರು ಅಭಿವೃದ್ಧಿ ಆಗಬೇಕು ಎಂದರೆ ಸಾರಿಗೆ ಅಭಿವೃದ್ಧಿಯಾಗಿರಬೇಕು.
ದೇಶ ಅಭಿವೃದ್ಧಿಯಾಗಬೇಕು ಎಂದರೆ ಸಾರಿಗೆ, ರೈಲ್ವೆ, ವಿಮಾನ ಸಾರಿಗೆ ಇರಬೇಕು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಎಲ್ಲ ಕೊರತೆಗಳನ್ನು ನೀಗಿಸಲಾಗಿದೆ ಎಂದರು.
ಸಂಸದ ವೈ. ದೇವೇಂದ್ರಪ್ಪ, ಹೂಡಾ ಅಧ್ಯಕ್ಷ ಅಶೋಕ ಜೀರೆ, ರೈಲ್ಚೆ ಇಲಾಖೆ ಅಧಿಕಾರಿಗಳಾದ ಎಂ. ವರ್ಮಾ, ಎಸ್. ಹರಿತಾ, ಎಲ್ಲಪ್ಪ, ಪ್ರಾಣೇಶ, ವಿಜಯನಗರ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ